ರಾಹುಲ್ ಭಾಷಣದ ವೇಳೆ ಕೈಕೊಟ್ಟ ಮೈಕ್: ಅಮಿತ್ ಶಾನೇ ಕಾರಣ ಎಂದ ಯುವರಾಜ!
ನವದೆಹಲಿ, ಆಗಸ್ಟ್ 17: ನಾಲ್ಕು ರಾಜ್ಯಗಳ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೇ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲವೇನೋ?
ರಾಜಧಾನಿಯಲ್ಲಿ ಗುರುವಾರ (ಆ 16) 'ಸಂಜಿ ವಿರಾಸತ್ ಬಚಾವೋ ಸಮ್ಮೇಳನ್' ನಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಎಂದಿನಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೇ, ಸೌಂಡ್ ಬಾಕ್ಸ್ ದೊಡ್ಡದಾಗಿ ಸದ್ದು ಮಾಡಿ, ರಾಹುಲ್ ಭಾಷಣ ಮಾಡುತ್ತಿದ್ದ ವೇದಿಕೆಯ ಮೈಕ್ ಕೈಕೊಟ್ಟಿದೆ.
3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ
ತಕ್ಷಣವೇ, ಮೈಕ್ ಸಮಸ್ಯೆಯನ್ನು ಆಯೋಜಕರು ಬಗೆಹರಿಸಿದರು. ಭಾಷಣ ಮುಂದುವರಿಸುತ್ತಾ, 'ಏ ದೇಖೋ, ಅಮಿತ್ ಶಾ ಜೀನೆ ಮೈಕ್ ಬಂದ್ ಕರ್ದಿಯಾ' (ಅಮಿತ್ ಶಾ ಮೈಕ್ ಬಂದ್ ಮಾಡಿದರು) ಎಂದು ವ್ಯಂಗ್ಯವಾಗಿ ಹೇಳಿದಾಗ, ಸಭೆ ನಗೆಗಡಲಲ್ಲಿ ತೇಲಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಮಾಡುತ್ತಿದ್ದಾಗ, ದಂಪತಿ ಸಮೇತ ಬಂದಿದ್ದ ಅಮಿತ್ ಶಾ ಜೊತೆ ರಾಹುಲ್ ಉಪಸ್ಥಿತರಿದ್ದರು. ಮೋದಿ-ರಾಹುಲ್-ಅಮಿತ್ ಶಾ ನಡುವೆ ಆರೋಪ, ಪ್ರತ್ಯಾರೋಪಗಳೇನು ಹೊಸದಲ್ಲ, ಆದರೆ ಚುನಾವಣೆಯ ವೇಳೆ ಇದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ನೋಡಬೇಕಿದೆ.
ಧ್ವಜಾರೋಹಣದ ವೇಳೆ ಅಮಿತ್ ಶಾ ಕೈಯಿಂದ ರಾಷ್ಟಧ್ವಜ ನೆಲಕ್ಕೆ ಬಿದ್ದಾಗ..
ಕಳೆದ ಮಾರ್ಚ್ ತಿಂಗಳಲ್ಲಿ, ತ್ರಿಪುರಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡ ನಂತರ, ರಾಹುಲ್ ಗಾಂಧಿ ಇಟೆಲಿಯಲ್ಲಿ ತನ್ನ ಅಜ್ಜಿಯನ್ನು ನೋಡಲು ಹೋಗಿದ್ದರು. ರಾಹುಲ್ ಇಟೆಲಿ ಪ್ರವಾಸದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನನಗೆ ವಾಟ್ಸಾಪ್ ಸಂದೇಶ ಬಂದಿದೆ. ಇಟೆಲಿಯಲ್ಲಿ ಚುನಾವಣೆ ಇದೆ ಎಂದು ಅಮಿತ್ ಶಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.
#WATCH: Congress President Rahul Gandhi says 'Amit Shah ji ne mic off kar diya' after his microphone went off during his speech at 'Sanjhi Virasat Bachao Sammelan' in Delhi. pic.twitter.com/WZI5mjX3OD
— ANI (@ANI) August 16, 2018
ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ, ಸಿದ್ದರಾಮಯ್ಯನವರ ಹೆಸರು ಬಳಸುವ ಬದಲು, ಯಡಿಯೂರಪ್ಪ ಒಬ್ಬ ಮಹಾನ್ ಭ್ರಷ್ಟ ಎಂದು ಅಮಿತ್ ಶಾ ಬಾಯಿತಪ್ಪಿ ಹೇಳಿದ್ದರು. ಇದರ ಲಾಭವನ್ನು ಪಡೆದುಕೊಂಡ ರಾಹುಲ್ ಗಾಂಧಿ, ಅಮಿತ್ ಶಾ ಕೊನೆಗೂ ನಿಜವನ್ನೇ ಹೇಳಿದ್ದಾರೆಂದು ಚುನಾವಣಾ ಪ್ರಚಾರದ ವೇಳೆ, ಶಾಗೆ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದರು.