Tirupati Utsava: ತಿರುಮಲದಲ್ಲಿ ವಿಶೇಷ ಉತ್ಸವ: ಮೂರು ದಿನಗಳ ಕಾಲ ಈ ಸೇವೆಗಳು ರದ್ದು
ತಿರುಮಲ ತಿರುಪತಿ ಶ್ರೀವಾರಿಯ ಭಕ್ತರಿಗೆ ಪ್ರಮುಖ ಸೂಚನೆಯೊಂದನ್ನ ಟಿಟಿಡಿ ನೀಡಿದೆ. ಮೂರು ದಿನಗಳ ಕಾಲ ತಿರುಮಲದಲ್ಲಿ ಕೆಲ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು ಭಕ್ತರು ಈ ಬಗ್ಗೆ ತಿಳಿದಿರುವಂತೆ ಟಿಟಿಡಿ ಪ್ರಕಟನೆ ಹೊರಡಿಸಿದೆ.
ಮೇ 17 ರಿಂದ ಮೇ 19 ರವರೆಗೆ ತಿರುಮಲದಲ್ಲಿ ಶ್ರೀ ಪದ್ಮಾವತಿ ಪರಿಣಯೋತ್ಸವ ನಡೆಯಲಿದೆ. ನಾರಾಯಣಗಿರಿ ಗಾರ್ಡನ್ನಲ್ಲಿರುವ ಪರಿಣಯೋತ್ಸವ ಮಂಟಪದಲ್ಲಿ ಆಚರಣೆ ನಡೆಯಲಿದ್ದು, ಮೇ 17ರಿಂದ 19ರವರೆಗೆ ನಡೆಯಬೇಕಿದ್ದ ಬ್ರಹ್ಮೋತ್ಸವ ಹಾಗೂ ಸಹಸ್ರದೀಪಾಲಂಕಾರ ಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ.

ಇನ್ನೊಂದೆಡೆ ಶ್ರೀಪದ್ಮಾವತಿಯ ಪರಿಣಯೋತ್ಸವದ ಅಂಗವಾಗಿ ಮೊದಲ ದಿನ ಗಜವಾಹನದಲ್ಲಿ, ಎರಡನೇ ದಿನ ಅಶ್ವವಾಹನದಲ್ಲಿ, ಮೂರನೇ ದಿನ ಗರುಡವಾಹನದಲ್ಲಿ ಭಗವಂತನನ್ನು ಪೂಜಿಸಲಾಗುತ್ತದೆ. ಎರಡು ಪ್ರತ್ಯೇಕ ಪಲ್ಲಕ್ಕಿಗಳಲ್ಲಿ ಪರಿಣಯೋತ್ಸವಕ್ಕೆ ಅಮ್ಮನವರು ಆಗಮಿಸಲಿದ್ದಾರೆ.
ಮತ್ತೊಂದು ವಿಚಾರ ಅಂದರೆ ತಿರುಪತಿಯಲ್ಲಿ ಶ್ರೀಪದ್ಮಾವತಿಯ ಪರಿಣಯೋತ್ಸವ ನಡೆಸಲು ಕಾರಣವಿದೆ. ಹಿಂದೂ ಪುರಾಣಗಳ ಪ್ರಕಾರ, ಕಲಿಯುಗದ ಆರಂಭದ ದಿನಗಳಲ್ಲಿ ಭಗವಾನ್ ವಿಷ್ಣುವು ಶ್ರೀನಿವಾಸನಾಗಿ ಭೂಮಿಗೆ ಬಂದನು. ಆಗ ನಾರಾಯಣವನವನ್ನು ಆಳುತ್ತಿದ್ದ ಆಕಾಶರಾಜನ ಮಗಳು ಪದ್ಮಾವತಿಯನ್ನು ಶ್ರೀನಿವಾಸನಿಗೆ ಕೊಟ್ಟು ಮದುವೆ ಮಾಡಲಾಯಿತು.
ಆದರೆ ವೈಶಾಖ ದಶಮಿಯ ದಿನದಂದು ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಕನ್ಯಾದಮನ ನಡೆಯಿತು ಎಂದು ಪುರಾಣಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಪ್ರತಿ ವೈಶಾಖ ಶುದ್ಧ ದಶಮಿಯ ಮೂರು ದಿನಗಳ ಕಾಲ ಪದ್ಮಾವತಿ ಪರಿಣಯೋತ್ಸವವನ್ನು ಆಯೋಜಿಸುತ್ತದೆ.

1992 ರಿಂದ ಟಿಟಿಡಿ ಆಶ್ರಯದಲ್ಲಿ ಪದ್ಮಾವತಿ ಪರಿಣಯೋತ್ಸವವು ವೈಶಾಖ ಶುದ್ಧ ದಶಮಿಯ ಹಿಂದಿನ ದಿನ ಮತ್ತು ಮರುದಿನ ಮೂರು ದಿನಗಳ ಕಾಲ ನಡೆಯುತ್ತದೆ. ಈ ಕ್ರಮದಲ್ಲಿ ಈ ಏಳು ಉತ್ಸವಗಳನ್ನು ಅದ್ಧೂರಿಯಾಗಿ ಆಯೋಜಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ.
ತಿರುಮಲದಂತೆ ತಿರುಪತಿಯಲ್ಲಿ ಉಚಿತ ನಿತ್ಯಾನ್ನದಾನ..
ಕಲಿಯುಗ ಮೂರ್ತಿಯಾದ ಶ್ರೀನಿವಾಸನ ಜನ್ಮಸ್ಥಳವಾದ ತಿರುಮಲಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇಶ ವಿದೇಶಗಳಿಂದಲೂ ಭಕ್ತರು ಶ್ರೀವಾರಿಯ ದರ್ಶನಕ್ಕಾಗಿ ತಿರುಮಲ ತಲುಪುತ್ತಾರೆ. ವಾಕಿಂಗ್ ನಡುಗೆಯಲ್ಲಿ ಕೆಲವರು, ಬಸ್ ನಲ್ಲಿ ಕೆಲವರು ಖಾಸಗಿ ವಾಹನಗಳಲ್ಲಿ ಇನ್ನೂ ಕೆಲವರು ಬಂದು ತಿರಮಲ ತಲುಪಿ ಶ್ರೀಗಳ ದರ್ಶನ ಪಡೆಯುತ್ತಾರೆ.
ದೂರದ ಊರುಗಳಿಂದ ತಿರುಮಲ ತಲುಪುವ ಭಕ್ತರು ಅಧಿಕ ದುಡ್ಡು ಖರ್ಚು ಮಾಡಿ ಬರುತ್ತಾರೆ. ಅಂಥವರಿಗಾಗಿ ನಿತ್ಯ ಅನ್ನಪ್ರಸಾದ ನೀಡಲಾಗುತ್ತದೆ. ತಿರುಮಲದಲ್ಲಿ ನಿತ್ಯಾನ್ನದಾನ ನಡೆಯುತ್ತದೆ. ಸಾವಿರಾರು ಭಕ್ತರಿಗೆ ಉಚಿತ ಪ್ರಸಾದ ವಿನಿಯೋಗ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ.
ಆದರೆ ಭಕ್ತರು ಈಗ ತಿಳಿಯಬೇಕಾದ ಹೊಸ ಸುದ್ದಿ ಏನು ಅಂದರೆ ತಿರುಮಲದ ಜೊತೆಗೆ ಶ್ರೀನಿವಾಸನ ಪಾದವಿರುವ ತಿರುಪತಿಯಲ್ಲೂ ನಿತ್ಯಾನ್ನದಾನ ನಡೆಯುತ್ತದೆ. ತಿರುಮಲಕ್ಕೆ ಭೇಟಿ ನೀಡುವ ಭಕ್ತರು ತಿರುಪತಿಯ ರಮಣೀಯ ಪ್ರದೇಶಗಳಿಗೂ ಭೇಟಿ ನೀಡುತ್ತಾರೆ. ಅಂಥವರಿಗಾಗಿ.. ಹಲವೆಡೆ ಟಿಟಿಡಿ ಆಶ್ರಯದಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಆ ಸ್ಥಳಗಳೆಂದರೆ ವೆಂಗಮಾಂಬ ಅನ್ನ ಪ್ರಸಾದ ಸಂಕೀರ್ಣ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ಹಳೆಯ ಅನ್ನ ಪ್ರಸಾದ ಕಟ್ಟಡ, ತಿರುಮಲದಲ್ಲಿರುವ PAC 2 ಕಟ್ಟಡದಲ್ಲಿ ಪ್ರಸಾದ ನೀಡಲಾಗುತ್ತದೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ











Click it and Unblock the Notifications