Get Updates
Get notified of breaking news, exclusive insights, and must-see stories!

Tirupati Utsava: ತಿರುಮಲದಲ್ಲಿ ವಿಶೇಷ ಉತ್ಸವ: ಮೂರು ದಿನಗಳ ಕಾಲ ಈ ಸೇವೆಗಳು ರದ್ದು

ತಿರುಮಲ ತಿರುಪತಿ ಶ್ರೀವಾರಿಯ ಭಕ್ತರಿಗೆ ಪ್ರಮುಖ ಸೂಚನೆಯೊಂದನ್ನ ಟಿಟಿಡಿ ನೀಡಿದೆ. ಮೂರು ದಿನಗಳ ಕಾಲ ತಿರುಮಲದಲ್ಲಿ ಕೆಲ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು ಭಕ್ತರು ಈ ಬಗ್ಗೆ ತಿಳಿದಿರುವಂತೆ ಟಿಟಿಡಿ ಪ್ರಕಟನೆ ಹೊರಡಿಸಿದೆ.

ಮೇ 17 ರಿಂದ ಮೇ 19 ರವರೆಗೆ ತಿರುಮಲದಲ್ಲಿ ಶ್ರೀ ಪದ್ಮಾವತಿ ಪರಿಣಯೋತ್ಸವ ನಡೆಯಲಿದೆ. ನಾರಾಯಣಗಿರಿ ಗಾರ್ಡನ್‌ನಲ್ಲಿರುವ ಪರಿಣಯೋತ್ಸವ ಮಂಟಪದಲ್ಲಿ ಆಚರಣೆ ನಡೆಯಲಿದ್ದು, ಮೇ 17ರಿಂದ 19ರವರೆಗೆ ನಡೆಯಬೇಕಿದ್ದ ಬ್ರಹ್ಮೋತ್ಸವ ಹಾಗೂ ಸಹಸ್ರದೀಪಾಲಂಕಾರ ಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ.

Special celebration in Tirumala These services are canceled for three days

ಇನ್ನೊಂದೆಡೆ ಶ್ರೀಪದ್ಮಾವತಿಯ ಪರಿಣಯೋತ್ಸವದ ಅಂಗವಾಗಿ ಮೊದಲ ದಿನ ಗಜವಾಹನದಲ್ಲಿ, ಎರಡನೇ ದಿನ ಅಶ್ವವಾಹನದಲ್ಲಿ, ಮೂರನೇ ದಿನ ಗರುಡವಾಹನದಲ್ಲಿ ಭಗವಂತನನ್ನು ಪೂಜಿಸಲಾಗುತ್ತದೆ. ಎರಡು ಪ್ರತ್ಯೇಕ ಪಲ್ಲಕ್ಕಿಗಳಲ್ಲಿ ಪರಿಣಯೋತ್ಸವಕ್ಕೆ ಅಮ್ಮನವರು ಆಗಮಿಸಲಿದ್ದಾರೆ.

ಮತ್ತೊಂದು ವಿಚಾರ ಅಂದರೆ ತಿರುಪತಿಯಲ್ಲಿ ಶ್ರೀಪದ್ಮಾವತಿಯ ಪರಿಣಯೋತ್ಸವ ನಡೆಸಲು ಕಾರಣವಿದೆ. ಹಿಂದೂ ಪುರಾಣಗಳ ಪ್ರಕಾರ, ಕಲಿಯುಗದ ಆರಂಭದ ದಿನಗಳಲ್ಲಿ ಭಗವಾನ್ ವಿಷ್ಣುವು ಶ್ರೀನಿವಾಸನಾಗಿ ಭೂಮಿಗೆ ಬಂದನು. ಆಗ ನಾರಾಯಣವನವನ್ನು ಆಳುತ್ತಿದ್ದ ಆಕಾಶರಾಜನ ಮಗಳು ಪದ್ಮಾವತಿಯನ್ನು ಶ್ರೀನಿವಾಸನಿಗೆ ಕೊಟ್ಟು ಮದುವೆ ಮಾಡಲಾಯಿತು.

ಆದರೆ ವೈಶಾಖ ದಶಮಿಯ ದಿನದಂದು ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಕನ್ಯಾದಮನ ನಡೆಯಿತು ಎಂದು ಪುರಾಣಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಪ್ರತಿ ವೈಶಾಖ ಶುದ್ಧ ದಶಮಿಯ ಮೂರು ದಿನಗಳ ಕಾಲ ಪದ್ಮಾವತಿ ಪರಿಣಯೋತ್ಸವವನ್ನು ಆಯೋಜಿಸುತ್ತದೆ.

Special celebration in Tirumala These services are canceled for three days

1992 ರಿಂದ ಟಿಟಿಡಿ ಆಶ್ರಯದಲ್ಲಿ ಪದ್ಮಾವತಿ ಪರಿಣಯೋತ್ಸವವು ವೈಶಾಖ ಶುದ್ಧ ದಶಮಿಯ ಹಿಂದಿನ ದಿನ ಮತ್ತು ಮರುದಿನ ಮೂರು ದಿನಗಳ ಕಾಲ ನಡೆಯುತ್ತದೆ. ಈ ಕ್ರಮದಲ್ಲಿ ಈ ಏಳು ಉತ್ಸವಗಳನ್ನು ಅದ್ಧೂರಿಯಾಗಿ ಆಯೋಜಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ.

ತಿರುಮಲದಂತೆ ತಿರುಪತಿಯಲ್ಲಿ ಉಚಿತ ನಿತ್ಯಾನ್ನದಾನ..

ಕಲಿಯುಗ ಮೂರ್ತಿಯಾದ ಶ್ರೀನಿವಾಸನ ಜನ್ಮಸ್ಥಳವಾದ ತಿರುಮಲಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇಶ ವಿದೇಶಗಳಿಂದಲೂ ಭಕ್ತರು ಶ್ರೀವಾರಿಯ ದರ್ಶನಕ್ಕಾಗಿ ತಿರುಮಲ ತಲುಪುತ್ತಾರೆ. ವಾಕಿಂಗ್ ನಡುಗೆಯಲ್ಲಿ ಕೆಲವರು, ಬಸ್ ನಲ್ಲಿ ಕೆಲವರು ಖಾಸಗಿ ವಾಹನಗಳಲ್ಲಿ ಇನ್ನೂ ಕೆಲವರು ಬಂದು ತಿರಮಲ ತಲುಪಿ ಶ್ರೀಗಳ ದರ್ಶನ ಪಡೆಯುತ್ತಾರೆ.

ದೂರದ ಊರುಗಳಿಂದ ತಿರುಮಲ ತಲುಪುವ ಭಕ್ತರು ಅಧಿಕ ದುಡ್ಡು ಖರ್ಚು ಮಾಡಿ ಬರುತ್ತಾರೆ. ಅಂಥವರಿಗಾಗಿ ನಿತ್ಯ ಅನ್ನಪ್ರಸಾದ ನೀಡಲಾಗುತ್ತದೆ. ತಿರುಮಲದಲ್ಲಿ ನಿತ್ಯಾನ್ನದಾನ ನಡೆಯುತ್ತದೆ. ಸಾವಿರಾರು ಭಕ್ತರಿಗೆ ಉಚಿತ ಪ್ರಸಾದ ವಿನಿಯೋಗ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ.

ಆದರೆ ಭಕ್ತರು ಈಗ ತಿಳಿಯಬೇಕಾದ ಹೊಸ ಸುದ್ದಿ ಏನು ಅಂದರೆ ತಿರುಮಲದ ಜೊತೆಗೆ ಶ್ರೀನಿವಾಸನ ಪಾದವಿರುವ ತಿರುಪತಿಯಲ್ಲೂ ನಿತ್ಯಾನ್ನದಾನ ನಡೆಯುತ್ತದೆ. ತಿರುಮಲಕ್ಕೆ ಭೇಟಿ ನೀಡುವ ಭಕ್ತರು ತಿರುಪತಿಯ ರಮಣೀಯ ಪ್ರದೇಶಗಳಿಗೂ ಭೇಟಿ ನೀಡುತ್ತಾರೆ. ಅಂಥವರಿಗಾಗಿ.. ಹಲವೆಡೆ ಟಿಟಿಡಿ ಆಶ್ರಯದಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಆ ಸ್ಥಳಗಳೆಂದರೆ ವೆಂಗಮಾಂಬ ಅನ್ನ ಪ್ರಸಾದ ಸಂಕೀರ್ಣ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ಹಳೆಯ ಅನ್ನ ಪ್ರಸಾದ ಕಟ್ಟಡ, ತಿರುಮಲದಲ್ಲಿರುವ PAC 2 ಕಟ್ಟಡದಲ್ಲಿ ಪ್ರಸಾದ ನೀಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+