ಕೋಲ್ಕತ್ತಾ ರಸ್ತೆಯಲ್ಲಿ ಮನಕರಗುವ ದೃಶ್ಯ, ನೀರಿನ ಮಧ್ಯೆ ಅಸಹಾಯಕ ಮಹಿಳೆ
ಮಳೆ ಬರಲಿಲ್ಲ ಅಂದರೆ ಅದು ಖಂಡಿತಾ ಸಹನೀಯವಾದ ಸುದ್ದಿಯಲ್ಲ. ಅದೇ ಮಳೆ ವಿಪರೀತವಾಗಿ ಜನರು ಪರಿತಪಿಸುವುದನ್ನು ಕಂಡರೆ ಏನಂತೀರಾ? ಕೋಲ್ಕತ್ತಾದಲ್ಲಿ ಅಂಥದ್ದೇ ಸ್ಥಿತಿಯಿದೆ. ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದರೆ, ಅನಾರೋಗ್ಯಪೀಡಿತ ಮಹಿಳೆಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ನವಜಾತ ಶಿಶು ಅಂತೀವಲ್ಲ, ಅದೇ ಆಗ ತಾನೇ ಹುಟ್ಟಿದ ಮಗುವಿನ ಸೊಗಸಾದ ಫೋಟೋವೊಂದು ಇಲ್ಲಿದೆ. ಈ ರೀತಿಯ ಫೋಟೋಗ್ರಫಿ ಪಶ್ಚಿಮದ ದೇಶಗಳಲ್ಲಿ ಮಾಮೂಲು. ಆದರೆ ಭಾರತದಲ್ಲಿ ಇನ್ನೂ ಅಷ್ಟೊಂದು ಪ್ರಚಾರ ಪಡೆದಿಲ್ಲ. ಇನ್ನು ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ತ ಮೋದಿ ಒಳ್ಳೆ ಪುಸ್ತಕವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಪಂಜಾಬ್ ನ ಅಮೃತ್ ಸರದ ಹಳ್ಳಿಯೊಂದರಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮುತ್ತಾತ ಮೊಹಮ್ಮದ್ ಬಕ್ಷ್ ಸಮಾಧಿ ಇದ್ದು, ವಿದ್ಯಾರ್ಥಿ ಸಂಘಟನೆಯೊಂದು ಅದರ ಚಾದರ ತೆಗೆದು ಆಕ್ರೋಶ ವ್ಯಕ್ತಪಡಿಸಿದೆ. ನಾನಕ್ ಸಿಂಗ್ ಪತ್ತೆಗೆ ಪಾಕಿಸ್ತಾನವನ್ನು ಆಗ್ರಹಿಸಿ ಸಂಘಟನೆಯ ಕಾರ್ಯಕರ್ತರು ಆಕ್ರೋಶ ತೋರಿಸಿದ್ದಾರೆ. ಇನ್ನಷ್ಟು ಸುದ್ದಿ-ಚಿತ್ರ ಇಲ್ಲಿದೆ.

ಬೆಂಕಿ ನಂದಿಸಲು ಸಾಹಸ
ನವದೆಹಲಿಯ ಲೋಕ್ ನಾಯಕ್ ಭವನದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಪಡುತ್ತಿದ್ದ ದೃಶ್ಯ.

ರೋಗಿಗಳನ್ನು ಕರೆದೊಯ್ಯಲು ಹರಸಾಹಸ
ಕೋಲ್ಕತ್ತಾದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ಅನಾರೋಗ್ಯದಿಂದ ನರಳುತ್ತಿರುವವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಪ್ರಧಾನಿಯಿಂದ ಪುಸ್ತಕ ಕೊಡುಗೆ
"Various Reports, 4th Volume of Selected Speeches of the President" ಎಂಬ ಪುಸ್ತಕ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಆದ ನಂತರ ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ರಾಮ್ ನಾಥ್ ಕೋವಿಂದ್ ಚಿತ್ರದಲ್ಲಿದ್ದಾರೆ.

ವಿದ್ಯಾರ್ಥಿ ಸಂಘಟನೆ ಸಿಟ್ಟು
ಪಂಜಾಬ್ ನ ಅಮೃತ್ ಸರದ ಜತ್ತಿ ಉಮ್ರಾ ಹಳ್ಳಿಯಲ್ಲಿರುವ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ರ ಮುತ್ತಾತ ಮೊಹಮ್ಮದ್ ಬಕ್ಷ್ ಸಮಾಧಿಯ ಮೇಲೆ ಹೊದಿಸಿದ್ದ ಚಾದರ್ ತೆಗೆದ ವಿದ್ಯಾರ್ಥಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ಪಾಕಿಸ್ತಾನದ ಸುಪರ್ದಿಯಲ್ಲಿರುವ ನಾನಕ್ ಸಿಂಗ್ ಪತ್ತೆಗಾಗಿ ಆಗ್ರಹಿಸಿದರು.

ಬಾಲಕಿ ರಕ್ಷಣೆ
ಪ್ರವಾಹ ಪೀಡಿತ ಮೊರ್ಬಿ ಹಳ್ಳಿಯಲ್ಲಿ ಬಾಲಕಿಯೊಬ್ಬಳನ್ನು ರಕ್ಷಿಸಿದ ಎನ್ ಡಿಆರ್ ಎಫ್ ಸದಸ್ಯ.

ಪಶ್ಚಿಮ ದೇಶಗಳಲ್ಲಿ ತುಂಬ ಪ್ರಸಿದ್ದಿ
ಆಗ ತಾನೆ ಹುಟ್ಟಿದ ಮಗುವಿನ ಫೋಟೋ ಇದು. ಇಂಥ ಛಾಯಾಗ್ರಹಣ ಪಶ್ಚಿಮದ ದೇಶಗಳಲ್ಲಿ ಬಹಳ ಪ್ರಸಿದ್ಧಿ. ಭಾರತದಲ್ಲಿ ಇನ್ನೂ ಪ್ರಚಲಿತದಲ್ಲಿ ಬರಬೇಕಿದೆ.
-
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು?












Click it and Unblock the Notifications