ಅಯೋಧ್ಯೆ ತೀರ್ಪು ಬಂದ ಕೂಡಲೇ ಉಮಾಭಾರತಿ ಮಾಡಿದ ಮೊದಲ ಕೆಲಸ
ನವದೆಹಲಿ, ನ 9: ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕಿದ್ದ ಅಡೆತಡೆ ನಿವಾರಣೆಯಾಗಿದ್ದಕ್ಕೆ, ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಉಮಾ ಭಾರತಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಉಮಾ ಭಾರತಿ, "ನಾನೀಗ ವಿಶ್ವ ಹಿಂದೂ ಪರಿಷತ್ ಕಚೇರಿಯನ್ನು ತಲುಪಿದ್ದೇನೆ ಮತ್ತು ಅಶೋಕ್ ಸಿಂಘಾಲ್ ಅವರಿಗೆ ನಮಸ್ಕರಿಸಿದ್ದೇನೆ, ಅವರನ್ನು ನೆನಪಿಸಿಕೊಂಡಿದ್ದೇನೆ, ನಮಸ್ಕರಿಸಿದ್ದೇನೆ" ಎಂದು ಹೇಳಿದ್ದಾರೆ.
ಇದಾದ ನಂತರ ಆಡ್ವಾಣಿ ಹುಟ್ಟುಹಬ್ಬದ (ನ 8) ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಾ ಟ್ವೀಟ್ ಮಾಡಿರುವ ಉಮಾ ಭಾರತಿ, "ನಾನು ಹಿಮಾಲಯ, ಉತ್ತರಾಖಂಡ, ಗಂಗಾ ತೀರದಿಂದ ದೆಹಲಿಯನ್ನು ತಲುಪಿದ್ದೇನೆ.
ಇಂದು ದೆಹಲಿಯಲ್ಲಿ ಬಿಜೆಪಿ ಅಧಿಕಾರಿಗಳ ಸಭೆ ಇದೆ. ದಾರಿಯಲ್ಲಿ, ಸುಪ್ರೀಂ ನಿರ್ಧಾರವನ್ನು ಕೇಳಿದರೆ, ಮೊದಲು ಆಡ್ವಾಣಿಯವರ ಮನೆಗೆ ತಲುಪಿ, ಅವರಿಗೆ ನಮಸ್ಕರಿಸುತ್ತೇನೆ. ಜೊತೆಗೆ, ಅವರಿಂದ ನಾನು ಕಲಿತದ್ದನ್ನು ಮುಂದುವರಿಸುತ್ತೇನೆ" ಎಂದು ಹೇಳಿದ್ದಾರೆ. ಆಡ್ವಾಣಿಯಿಂದ, ಬಿಜೆಪಿ ಬೆಳೆದು ಬಂದ ರೀತಿ ಮತ್ತು ರಾಮ ಮಂದಿರದ ವಿಚಾರದಲ್ಲಿ, ಉಮಾ ಭಾರತಿ ಸಾಲುಸಾಲು ಟ್ವೀಟ್ ಮಾಡಿದ್ದು ಹೀಗೆ..

ಭಾರತೀಯ ರಾಜಕೀಯದ ದಿಗ್ಗಜ ಆಡ್ವಾಣಿ
"ಭಾರತೀಯ ರಾಜಕೀಯದ ದಿಗ್ಗಜ ಆಡ್ವಾಣಿ ಅವರು ಹುಸಿ ಜಾತ್ಯತೀತತೆ Vs ರಾಷ್ಟ್ರೀಯತೆಯ ಚರ್ಚೆಯನ್ನು ದೇಶದ ರಾಜಕಾರಣದಲ್ಲಿ ಮುನ್ನಲೆಗೆ ತಂದಿದ್ದು. ಆ ಚರ್ಚೆಯೇ, ಅಯೋಧ್ಯೆ ಚಳುವಳಿ ಮುಂದೆ ಬರಲು ಕಾರಣವಾಯಿತು" ಎಂದು ಉಮಾ ಭಾರತಿ ಹೇಳಿದ್ದಾರೆ.

ಹುಸಿ ಜಾತ್ಯತೀತತೆಯ ವಿರುದ್ದ ನಿಂತ ಮೊದಲ ನಾಯಕ ಆಡ್ವಾಣಿ
"ದೇಶದ ರಾಜಕೀಯದಲ್ಲಿ, ಹುಸಿ ಜಾತ್ಯತೀತತೆಯ ವಿರುದ್ದ ನಿಂತ ಮೊದಲ ನಾಯಕ ಆಡ್ವಾಣಿ. ಅವರ ಕಾರಣದಿಂದಾಗಿ, ಇಂದು ಬಿಜೆಪಿ ಅಧಿಕಾರದಲ್ಲಿದೆ. ಜಾತಿ-ಪಂಥ ಮತ್ತು ವರ್ಗ ಬೇಧಕ್ಕಿಂತ ಮೇಲೇರಿ ಜನರು ಮೋದಿಜೀ ಅವರನ್ನು ಬೆಂಬಲಿಸಿದರು" ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.

ಮೋದಿ ಇಡೀ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ
"ಇಂದು ನಮ್ಮ ಪಕ್ಷ ಅಧಿಕಾರದಲ್ಲಿದೆ. ಮೋದಿ ಇಡೀ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಭಾರತ ಇಂದು ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಅಡಿಪಾಯ ಹಾಕಿದ್ದು ನಮ್ಮ ಗೌರವಾನ್ವಿತ ಆಡ್ವಾಣಿ" ಎಂದು ಉಮಾ ಭಾರತಿ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಿಮಾಲಯವನ್ನು ಬಿಟ್ಟು ಬಂದೆ ಎಂದು ನನಗೆ ಅನಿಸುವುದಿಲ್ಲ
"ನಾನು ಆಡ್ವಾಣಿಯವರ ಅವರ ಮುಂದೆ ನಿಂತಾಗ, ಹಿಮಾಲಯವನ್ನು ಬಿಟ್ಟು ಬಂದೆ ಎಂದು ನನಗೆ ಅನಿಸುವುದಿಲ್ಲ, ಏಕೆಂದರೆ ಅವರು ವ್ಯಕ್ತಿತ್ವ ಹಿಮಾಲಯದಂತೆಯೇ ಇರುತ್ತವೆ. ದೇವರು ಅವರನ್ನು ಆಶೀರ್ವದಿಸಲಿ ಮತ್ತು ಅವರಿಗೆ ಇನ್ನೂ ಆರೋಗ್ಯ, ಆಯಸ್ಸನ್ನು ನೀಡಲಿ" ಎಂದು ಅವರ ಹುಟ್ಟಿದ ಹಬ್ಬದ ಸಂದರ್ಭದಲ್ಲಿ, ರಾಮ ಮಂದಿರ ನಿರ್ಮಾಣ ಮತ್ತು ಬಿಜೆಪಿ ಬೆಳೆದು ಬಂದ ರೀತಿಯನ್ನು ಉಮಾ ಭಾರತಿ ಸ್ಮರಿಸಿಕೊಂಡಿದ್ದಾರೆ.

ಅಶೋಕ್ ಸಿಂಘಾಲ್ ಅವರನ್ನು ನೆನಪಿಸಿಕೊಂಡಿದ್ದೇನೆ, ಉಮಾ ಭಾರತಿ
ಪಕ್ಷದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದೆ, ಆದರೆ ಸಭೆ ನಡೆಯಲಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ನಂತರ, ನಾನು ಅಶೋಕ್ ಸಿಂಘಾಲ್ ಅವರನ್ನು ನೆನಪಿಸಿಕೊಂಡು ಅಡ್ವಾಣಿಯನ್ನು ಭೇಟಿಯಾದ ನಂತರ ಹಿಮಾಲಯಕ್ಕೆ ಹಿಂತಿರುಗುತ್ತಿದ್ದೇನೆ" ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications