ಆಜಾನ್ ಚರ್ಚೆ, ಸ್ಪೀಕರ್ ಬಳಕೆ ಬಗ್ಗೆ ಕೋರ್ಟ್ ನಿಯಮಗಳು ಏನು ಹೇಳುತ್ತವೆ?
ಗಾಯಕ ಸೋನು ನಿಗಮ್ ರ ಆಜಾನ್ ಹೇಳಿಕೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಕೋರ್ಟ್ ನಿಯಮಗಳು ಲೌಡ್ ಸ್ಪೀಕರ್ ಬಳಕೆ ಬಗ್ಗೆ ಏನು ಹೇಳಿವೆ ಎಂಬ ವರದಿ ಇಲ್ಲಿದೆ.
ಮುಂಬೈ, ಏಪ್ರಿಲ್ 18: ಗಾಯಕ ಸೋನು ನಿಗಮ್ ಸೋಮವಾರ ಮಾಡಿದ ಟ್ವೀಟ್ ಗಳಿಂದ ಭಾರೀ ಚರ್ಚೆ ಆರಂಭವಾಗಿದೆ. "ಆಜಾನ್ ನಿಂದ ಬೆಳಗ್ಗೆ ನಾನೇಕೆ ಏಳಬೇಕು?", "ಎಲ್ಲರನ್ನೂ ಆ ದೇವರು ಕಾಪಾಡಲಿ. ನಾನು ಮುಸ್ಲಿಮ್ ಅಲ್ಲ. ಆದರೂ ಆಜಾನ್ (ಬೆಳಗ್ಗಿನ ಪ್ರಾರ್ಥನೆ) ನಿಂದ ನಾನು ಎಚ್ಚರವಾಗಬೇಕು. ಭಾರತದಲ್ಲಿ ಇಂಥ ಬಲವಂತದ ಧಾರ್ಮಿಕತೆ ಎಂದಿಗೆ ಕೊನೆಯಾಗುತ್ತದೆ" ಎಂದು ಟ್ವೀಟ್ ಮಾಡಿದ್ದರು.
ಈ ಚರ್ಚೆ ಚಾಲ್ತಿಯಲ್ಲಿರುವಾಗಲೇ ಸುಪ್ರೀಂ ಕೋರ್ಟ್ ಹಾಗೂ ಬಾಂಬೆ ಹೈ ಕೋರ್ಟ್ ಈ ಬಗ್ಗೆ ನೀಡಿದ ಸೂಚನೆಗಳ ಬಗ್ಗೆ ತಿಳಿದುಕೊಳ್ಳಬೇಕು. 2005ರಲ್ಲಿ ಸುಪ್ರೀಂ ಕೋರ್ಟ್ ಕೆಲವು ಸೂಚನೆಗಳನ್ನು ನೀಡಿದೆ. ಅದರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಮಿತಿ ವಿಧಿಸಲಾಗಿದೆ. ರಾತ್ರಿ ವೇಳೆಯಲ್ಲಿ ಅದರ ಶಬ್ದವನ್ನು ಕಡಿಮೆ ಮಾಡಿರಬೇಕು.[ಸೋನು 'ಅಜಾನ್' ವಿವಾದಕ್ಕೆ ಟ್ವಿಟ್ಟರಲ್ಲಿ ಮಿಶ್ರ ಪ್ರತಿಕ್ರಿಯೆ]

ಆಗಿನ ಮುಖ್ಯನ್ಯಾಯಮೂರ್ತಿ ಆರ್ ಸಿ ಲಹೋಟಿ ನೇತೃತ್ವದ ಪೀಠವು ನೀಡಿದ ತೀರ್ಪಿನ ಪ್ರಕಾರ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಗೆ ನಿಷೇಧವಿದೆ. ಈ ಬಗ್ಗೆ ಪೊಲೀಸರಿಗೂ ಕೋರ್ಟ್ ನಿಂದ ಸ್ಪಷ್ಟವಾದ ನಿರ್ದೇಶನವಿದೆ.
ಬಾಂಬೆ ಹೈಕೋರ್ಟ್ ತೀರ್ಪಿನ ಸಾರಾಂಶ
2014ರಲ್ಲಿ ಇಂಥದ್ದೇ ಪ್ರಕರಣ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂತೋಷ್ ಪಚಲಗ್ ಎಂಬುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತಾವು ನೆಲೆಸಿರುವ ಪ್ರದೇಶದ ಮಸೀದಿಗಳಲ್ಲಿ ಅನಧಿಕೃತವಾಗಿ ಬಳಸುತ್ತಿರುವ ಲೌಡ್ ಸ್ಪೀಕರ್ ಗಳ ವಿರುದ್ಧ ಅವರು ಪ್ರಕರಣಾ ದಾಖಲಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾದ ಮಾಹಿತಿಯ ಪ್ರಕಾರ 49 ಮಸೀದಿಗಳ 45ರಲ್ಲಿ ಅನಧಿಕೃತವಾಗಿ ಲೌಡ್ ಸ್ಪೀಕರ್ ಬಳಸುತ್ತಿದ್ದಾರೆ ಎಂಬದು ಬಹಿರಂಗವಾಗಿತ್ತು. ಅವುಗಳಿಗೆ ಅನುಮತಿ ಪಡೆದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಅನಧಿಕೃತವಾಗಿರುವ ಎಲ್ಲವನ್ನೂ ತೆಗೆದು ಹಾಕುವಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿತ್ತು.[ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್]

ನಿಯಮಾವಳಿ ಪ್ರಕಾರ ಶಬ್ದವನ್ನು ಅಳೆಯುವ ಡೆಸಿಬಲ್ ಮಾನದಂಡದಿಂದ ಆಗಾಗ ಪರಿಶೀಲನೆ ನಡೆಸಬೇಕು. ನಿಯಮದ ಪ್ರಕಾರ ಇಷ್ಟೇ ಡೆಸಿಬಲ್ ಮಟ್ಟದಲ್ಲಿ ಶಬ್ದ ಇರಬೇಕು. ಹಗಲಿನ ವೇಳೆ 50, ರಾತ್ರಿ 40 ಡೆಸಿಬಲ್ ಇರಬಹುದು. ಶಾಂತ ವಲಯದಲ್ಲಿ ಹಗಲು 55, ರಾತ್ರಿ 45 ಡೆಸಿಬಲ್ ಎಂದು ಮಿತಿ ನಿಗದಿಯಾಗಿದೆ.

ಇನ್ನು ಆಜಾನ್ ವಿಚಾರಕ್ಕೆ ಬಂದರೆ ನಿಯಮ ಏನು ಹೇಳುತ್ತದೆ ಅಂದರೆ ಎರಡರಿಂದ ಮೂರು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಕೆಲವು ಪ್ರದೇಶದಲ್ಲಿ ಅಜಾನ್ ಸಮಯ ದೀರ್ಘಾವಧಿಯದಾಗಿರುತ್ತದೆ. ಸ್ಪರ್ಧೆಯ ಕಾರಣಕ್ಕೆ ಹೀಗೆ ಮಾಡುತ್ತಾರೆ ಎಂಬ ದೂರುಗಳು ಕೇಳಿಬಂದಿವೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications