ಭವಿಷ್ಯ: ಎರಡು ಚಂದ್ರಗ್ರಹಣದ ಮಧ್ಯೆ ಸೂರ್ಯಗ್ರಹಣ, ಪ್ರಮುಖ ನಾಯಕನ ಸಾವು!
ಜೂನ್ 6ಕ್ಕೆ ಈಗಾಗಲೇ ಒಂದು ಚಂದ್ರ ಗ್ರಹಣ ಸಂಭವಿಸಿದೆ, ಜುಲೈ ನಾಲ್ಕಕ್ಕೆ ಇನ್ನೊಂದು ಚಂದ್ರಗ್ರಹಣ ಸಂಭವಿಸಲಿದೆ. ಇವೆರಡರ ಮಧ್ಯೆ ಅಂದರೆ ಬರುವ ಜೂನ್ 21ಕ್ಕೆ ಸೂರ್ಯಗ್ರಹಣವಿರಲಿದೆ. ಸೂರ್ಯಗ್ರಹಣ ಮಿಥುನ ರಾಶಿಯಲ್ಲಿ ಸಂಭವಿಸಲಿದೆ.
Recommended Video
"ಮಿಥುನ ರಾಶಿಯವರಿಗೆ ಮತ್ತು ಮೃಗಶಿರಾ ನಕ್ಷತ್ರದವರೆಗೆ ಮಾತ್ರ ಈ ಸೂರ್ಯ ಗ್ರಹಣದಿಂದ ತೊಂದರೆಯಾಗಲಿದೆ" ಎನ್ನುವುದು ತಪ್ಪು ಎಂದು ಖ್ಯಾತ ಜ್ಯೋತಿಷಿ ಮನೀಜಾ ಅಹುಜಾ ಅಭಿಪ್ರಾಯ ಪಟಿದ್ದಾರೆ.
ಸಾಮಾನ್ಯವಾಗಿ ಗ್ರಹಣ ಸಂಭವಿಸುವಾಗ ಆಯಾಯ ರಾಶಿ, ನಕ್ಷತ್ರದವರೆಗೆ ಇದರಿಂದ ಒಳಿತಾಗಲಿದೆಯೇ ಅಥವಾ ಕೆಡುಕಾಗಲಿದಿಯೇ ಎನ್ನುವುದಕ್ಕಿಂತ, ರಾಜ್ಯ ಮತ್ತು ದೇಶಕ್ಕೆ ಇದರ ಪರಿಣಾಮ ಏನು ಎನ್ನುವುದನ್ನು ನೋಡಬೇಕಾಗುತ್ತದೆ ಎಂದು ಅಹುಜಾ ಹೇಳುತ್ತಾರೆ.
"ಯಾವುದಾದರೂ ದೇಶ ಇನ್ನೊಂದು ದೇಶದ ಮೇಲೆ ಆಕ್ರಮಣ ನಡೆಸಿದರೆ, ಪ್ರತಿಯೊಬ್ಬರ ಜಾತಕವನ್ನು ನೋಡಿ ಭವಿಷ್ಯವನ್ನು ಹೇಳಲು ಸಾಧ್ಯವಿಲ್ಲ. ಬದಲಿಗೆ, ಗ್ರಹ/ರಾಶಿ ಯಾವ ಕುಂಡಲಿಯಲ್ಲಿ ಇದೆ ಎಂದು ನೋಡಿ, ಒಟ್ಟಾರೆಯಾಗಿ ಭವಿಷ್ಯ ಹೇಳಬಹುದು" ಎಂದು ಅಹುಜಾ ಹೇಳಿದ್ದಾರೆ.

2020ರ ವರ್ಷದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗಲಿವೆ
2020ರ ವರ್ಷದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗಲಿವೆ ಎಂದು ಹಿಂದೆನೂ ಹೇಳಿದ್ದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮಂತ್ರ, ದೇವರ ಸ್ಮರಣೆ ಯಾವತ್ತೂ ಮನುಷ್ಯನಿಗೆ ಒಳಿತನ್ನು ಮಾಡುತ್ತದೆ. ಜೂನ್ 2020 ರಿಂದ ಮಾರ್ಚ್ 2021ರವರೆಗೆ ವಿಶ್ವದಲ್ಲಿ ಹಲವು ವಿಮಾನ ಅಪಘಾತಗಳು ಆಗುವ ಸಾಧ್ಯತೆಯಿದೆ ಎಂದು ಮನೀಜಾ ಅಹುಜಾ ತಮ್ಮ ಗ್ರಹಣ ಸಂಬಂಧದ ವಿಡಿಯೋದಲ್ಲಿ ಹೇಳಿದ್ದಾರೆ.

ದೇಶದ ಪ್ರಮುಖ ನಾಯಕರೊಬ್ಬರ ಅಕಾಲಿಕ ಮರಣ
ಕಾಂಗ್ರೆಸ್ ಮತ್ತು ಬಿಜೆಪಿಯ ಕುಂಡಲಿಯನ್ನು ವಿಮರ್ಶಿಸಿದಾಗ, ದೇಶದ ಪ್ರಮುಖ ನಾಯಕರೊಬ್ಬರ ಅಕಾಲಿಕ ಮರಣವಾಗುವ ಸಾಧ್ಯತೆಯಿದೆ ಎಂದು ಅಹುಜಾ ಹೇಳಿದ್ದಾರೆ. ಎರಡೂ ಪಕ್ಷದ ಕುಂಡಲಿಯನ್ನು ಅವಲೋಕಿಸಿದಾಗ, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರೊಬ್ಬರು ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಜೂನ್ ನಿಂದ ಫೆಬ್ರವರಿ 2021ರ ಅವಧಿಯಲ್ಲಿ ಇದು ಸಂಭವಿಸುವ ಸಾಧ್ಯತೆಯಿದೆ ಎಂದು ಅಹುಜಾ ವಿಡಿಯೋದಲ್ಲಿ ಹೇಳಿದ್ದಾರೆ.

ಕಮ್ಯೂನಿಸ್ಟ್ ಸರಕಾರಗಳಿಗೆ ಹಿನ್ನಡೆಯಾಗಬಹುದು
ಈ ಅವಧಿಯಲ್ಲಿ ಬರೀ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಕಮ್ಯೂನಿಸ್ಟ್ ಸರಕಾರಗಳಿಗೆ ಹಿನ್ನಡೆಯಾಗಬಹುದು. ಚೀನಾ ದೇಶದ ಪ್ರಭಾವ ಮುಂದಿನ ದಿನಗಳಲ್ಲಿ ಕಮ್ಮಿಯಾಗುತ್ತಾ ಸಾಗುತ್ತದೆ. ಈ ಸಮಯದಲ್ಲಿ ಚೀನಾ ಏನೇ ಮಾಡಿದರೂ, ಅದು ತಪ್ಪನ್ನೇ ಮಾಡುತ್ತದೆ ಮತ್ತು ಮಾಡುವ ಯಾವ ಕೆಲಸದಲ್ಲೂ ಅದು ಯಶಸ್ಸನ್ನು ಪಡೆಯುವುದಿಲ್ಲ - ಮನೀಜಾ ಅಹುಜಾ.

ಚೀನಾ, ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ
ರಾಜಧಾನಿ ದೆಹಲಿ ಸೇರಿದಂತೆ, ಆಗಸ್ಟ್ 31, 2020ರ ವರೆಗೆ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆಯಿದೆ. ಸೆಪ್ಟಂಬರ್ ಕೊನೆಯ ವಾರದಿಂದ ಗಡಿಯಲ್ಲಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಆಗಸ್ಟ್ 20 ರಿಂದ ಸೆಪ್ಟಂಬರ್ 21ರ ಅವಧಿಯಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿದೆ. ಆದರೆ, ಭಾರತದಿಂದ ಸೂಕ್ತ ಉತ್ತರ ಎರಡೂ ದೇಶಗಳಿಗೆ ಸಿಗಲಿದೆ. ಕೋಮು ಸಂಘರ್ಷವೂ ನಡೆಯಲಿದೆ - ಮನೇಜಾ ಅಹುಜಾ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications