ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಿಎಂ ಪುತ್ರ!
ಭೋಪಾಲ್, ಅಕ್ಟೋಬರ್ 30: ಬಹುಕೋಟಿ ವ್ಯಾಪಂ ಹಗರಣವಲ್ಲದೆ, ಪನಾಮಾ ಪೇಪರ್ಸ್ ಹಗರಣದಲ್ಲಿ ಸಿಎಂ ಶಿವರಾಜ್ ಸಿಂಗ್ ಕುಟುಂಬ ಭಾಗಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ್ ಚೌಹಾಣ್ ಮುಂದಾಗಿದ್ದಾರೆ.
ಇಂದೋರ್ ನಲ್ಲಿ ಸೋಮವಾರದಂದು ಚುನಾವಣಾ ಪ್ರಚಾರ ಸಮಾವೇಶವೊಂದರಲ್ಲಿ ಮಾತನಾಡಿದ ರಾಹುಲ್ ಗಾಂದಿ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು 'ಭ್ರಷ್ಟಾಚಾರದ ಧರ್ಮ' ವನ್ನು ಪರಿಪಾಲಿಸುತ್ತಿದೆ. ಪನಾಮಾ ಪೇಪರ್ಸ್ನಲ್ಲಿ ಸಿಎಂ ಶಿವರಾಜ್ ಸಿಂಗ್ ಅವರ ಪುತ್ರನ ಹೆಸರಿತ್ತು ಎಂದಿದ್ದರು.

ರಾಹುಲ್ ಅವರ ಭಾಷಣದ ವಿಡಿಯೋ ವೀಕ್ಷಿಸಿದ ನಂತರ, ಇದು ಕ್ರಿಮಿನಲ್ ಉದ್ದೇಶ ಹೊಂದಿದ ಆಕ್ಷೇಪಾರ್ಹ ಹೇಳಿಕೆ'' ಎಂದು ಕಾರ್ತಿಕೇಯ್ ವಕೀಲ ಎಸ್ ಶ್ರೀವಾಸ್ತವ ಪ್ರತಿಕ್ರಿಯಿಸಿದ್ದರು.












Click it and Unblock the Notifications