ಇಂದ್ರಾಣಿ ಪುತ್ರಿ ಶೀನಾ ಬೋರಾ ಕೊಲೆ ಕೇಸಿಗೆ ಟ್ವಿಸ್ಟ್
ಮುಂಬೈ, ಆಗಸ್ಟ್ 28: ದಿನದಿನಕ್ಕೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಿರುವ 2012ರ ಶೀನಾ ಬೋರಾ ಕೊಲೆ ಪ್ರಕರಣದ ಬಗ್ಗೆ ಪೊಲೀಸರಿಗೆ ಕ್ಷಣಕ್ಕೊಂದು ಮಾಹಿತಿ ಸಿಗುತ್ತಿದೆ. ಶೀನಾ ಬೋರಾ ಹತ್ಯೆಯಾಗುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದರು. ಆಕೆಯನ್ನು ಕೊಂದಿದ್ದು ಆಕೆಯ ಸೋದರಿಯಲ್ಲ, ಆಕೆಯ ತಾಯಿ ಸ್ಟಾರ್ ಇಂಡಿಯಾ ಚಾನೆಲ್ ನ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿಯಾ ಎಂದು ತಿಳಿದು ಬಂದಿದೆ.
ಸ್ಟಾರ್ ಇಂಡಿಯಾ ಚಾನೆಲ್ ನ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿಯಾ ಅವರನ್ನು 2012ರ ಕೊಲೆ ಕೇಸಲ್ಲಿ ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಕೊಲೆಯ ಉದ್ದೇಶ, ಇದು ಮರ್ಯಾದೆ ಹತ್ಯೆಯೇ? ಆಸ್ತಿಗಾಗಿ ನಡೆದ ಕೊಲೆಯೇ? ಎಂಬುದು ತಿಳಿಯಬೇಕಿದೆ. [ಸ್ಟಾರ್ ಇಂಡಿಯಾ ಮಾಜಿ ಸಿಇಒ ಪತ್ನಿ ಕೊಲೆ ಕೇಸಲ್ಲಿ ಬಂಧನ]
ಇನ್ನಷ್ಟು ಜನರ ವಿಚಾರಣೆ: 9ಎಕ್ಸ್ ಮಾಧ್ಯಮ ಸಂಸ್ಥೆಯ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿಯ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿಯ ಪುತ್ರ ಮಿಖೈಲ್ ಬೋರಾನನ್ನು ಭುವನೇಶ್ವರದಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದ್ರಾಣಿ ಅವರ ಚಾಲಕ ಹಾಗೂ ರಾಹುಲ್ ಮುಖರ್ಜಿಯಾ ವಿಚಾರಣೆ ಜಾರಿಯಲ್ಲಿದೆ.
ಪೀಟರ್ ಮುಖರ್ಜಿ (ಇಂದ್ರಾಣಿ ಪತಿ) ಯ ಪುತ್ರನನ್ನೂ ಮುಂಬೈ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಪ್ರಕರಣದ ಮೂರನೇ ಆರೋಪಿ ಸಂಜೀವ್ ಖನ್ನಾ(ಇಂದಾಣಿಯ ಮತ್ತೊಬ್ಬ ಪತಿ) ರನ್ನು ವಿಚಾರಣೆಗೊಳಪಡಿಸಿದರೆ ಕೊಲೆ ಉದ್ದೇಶ ತಿಳಿದು ಬರಲಿದೆ ಎಂದು ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳಿದ್ದಾರೆ.

ಶೀನಾ ಥಾಯ್ಲೆಂಡಿಗೆ ಹೋಗಿದ್ದು ನಿಜ
2012 ಏಪ್ರಿಲ್ 24ರಂದು ಕೊಲೆಯಾಗುವ ಮುನ್ನ ಶೀನಾ ಗರ್ಭಿಣಿಯಾಗಿದ್ದಳು. ಈ ಸುದ್ದಿ ತಿಳಿದಿದ್ದಕ್ಕೆ ಇಂದ್ರಾಣಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಪೀಟರ್ ಮುಖರ್ಜಿಯ ಮೊದಲ ಪತ್ನಿಯಿಂದ ಪುತ್ರನಾದ ರಾಹುಲ್ ಹಾಗೂ ಇಂದ್ರಾಣಿಯ ಮೊದಲ ಪತಿಯ ಪುತ್ರಿ ಶೀನಾ ಪ್ರೀತಿಸುತ್ತಿದ್ದರು. ಮಗು ಜನಿಸಿದ ನಂತರ ರಾಹುಲ್ ಹಾಗೂ ಶೀನಾ ಥಾಯ್ಲೆಂಡ್ಗೆ ತೆರಳುವ ಯೋಜನೆಯನ್ನೂ ಹಾಕಿಕೊಂಡಿದ್ದರು ಎನ್ನಲಾಗಿದೆ. ಶೀನಾ ಥಾಯ್ಲೆಂಡಿಗೆ ಹೋಗಿದ್ದು ನಿಜವಾದರೂ ಯಾರ ಜೊತೆ ಹೋಗಿದ್ದರು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಏ.24, 2012ರಂದು ನಡೆದ ಘಟನೆ
2012 ಏ.24ರಂದು ಶೀನಾ ಕೊಲೆ ಮಾಡುವುದಕ್ಕೂ ಮುನ್ನಾ ದಿನ ಕೋಲ್ಕತ್ತಾದಲ್ಲಿದ್ದ 2ನೇ ಪತಿ ಸಂಜೀವ್ ಖನ್ನಾನನ್ನು ಇಂದ್ರಾಣಿ ಕರೆಸಿಕೊಂಡಿದ್ದಳು. ಏ.24ರಂದು ಶೀನಾಳನ್ನು ಮುಂಬೈನ ಬಾಂದ್ರಾದ ಫ್ಲ್ಯಾಟ್ಗೆ ಬರುವಂತೆ ಇಂದ್ರಾಣಿ ಕರೆದಿದ್ದಳು. ಬಾಂದ್ರಾ ಫ್ಲ್ಯಾಟ್ಗೆ ಶೀನಾಳನ್ನು ರಾಹುಲ್ ಕಾರಿನಲ್ಲಿ ಕರೆತಂದು ಬಿಟ್ಟಿದ್ದ. ಇಲ್ಲಿಂದ ಶೀನಾಳನ್ನು ಇಂದ್ರಾಣಿ ಬಲವಂತವಾಗಿ ಕರೆದೊಯ್ದಿದ್ದಳು. ದಾರಿಯಲ್ಲಿ ಶೀನಾಳ ಮೇಲೆ ವಿಪರೀತ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ.

ಆಸ್ತಿಗಾಗಿ ಕೊಲೆ, ಶೀನಾ ಸೋದರನ ಹತ್ಯೆಗೂ ಸಂಚು
ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ನನ್ನು ಗುರುವಾರ ಭುವನೇಶ್ವರದಲ್ಲಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂದ್ರಾಣಿ ಮುಂದಿನ ಟಾರ್ಗೆಟ್ ನಾನೇ ಆಗಿತ್ತು. ಹೀಗಾಗಿ ನನಗೆ ಭದ್ರತೆ ನೀಡಬೇಕು ಎಂದಿದ್ದಾನೆ

ಕಾರಿನಲ್ಲಿದ್ದ ಶವ, ನಂತರ ದಹನ
ಘಟನೆ ನಡೆದ ದಿನ ಕಾರಿನಲ್ಲಿ ಸಂಜೀವ್ ಖನ್ನಾ ಮತ್ತು ಚಾಲಕ ಕೂಡ ಇದ್ದರು. ಇಂದ್ರಾಣಿಗೆ ಇಬ್ಬರೂ ಸಹಾಯ ಮಾಡಿದ್ದರು. ರಾತ್ರಿ ಮುಂಬೈನಲ್ಲಿ ಪೀಟರ್ ಮನೆಯ ಗ್ಯಾರೇಜಿನಲ್ಲಿ ಶವ ಇತ್ತು. ಬೆಳಗಿನ ಜಾವ ಅಲ್ಲಿಂದ ರಾಯಗಢದಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ದಹನ ಮಾಡಲಾಗಿದೆ. ಹೀಗಾಗಿ ಶೀನಾಳ ಡಿಎನ್ ಎ ಸ್ಯಾಂಪಲ್ ಪಡೆಯಲು ಕಷ್ಟವಾಗಿದೆ. ಅಲ್ಲದೆ, ಶವಪರೀಕ್ಷೆ ವರದಿ ಕೂಡಾ ಸಮರ್ಪಕವಾಗಿಲ್ಲ. ಸಂಜೀವ್ ಹಾಗೂ ಪೀಟರ್ ವಿಚಾರಣೆಯಿಂದ ಇನ್ನಷ್ಟು ಸತ್ಯ ಹೊರಬೀಳಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications