ರಾಮ ಜನ್ಮಭೂಮಿ ವಿವಾದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರದಂದು ಮಹತ್ವದ ತೀರ್ಪು ನೀಡಿದ್ದು, ಕೋರ್ಟ್ ಹೊರಗಡೆ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದೆ.
ನವದೆಹಲಿ, ಮಾರ್ಚ್ 21: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರದಂದು ಮಹತ್ವದ ತೀರ್ಪು ನೀಡಿದ್ದು, ಕೋರ್ಟ್ ಹೊರಗಡೆ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದೆ. ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಮುಂದೂಡಲಾಗಿದೆ.[ಮುಸ್ಲಿಮರಿಗೆ ಸ್ವಾಮಿ ನೀಡಿದ ಸಂಡೇ ಪ್ಯಾಕೇಜ್: 'ಲಾರ್ಡ್ ಕೃಷ್ಣ']
ಇದು
ಸೂಕ್ಷ್ಮ
ವಿಚಾರ,
ಎರಡು
ಕಡೆ
ಅರ್ಜಿದಾರರು
ಮಾತುಕತೆ
ಮೂಲಕ
ಸಮಸ್ಯೆ
ಬಗೆಹರಿಸಿಕೊಳ್ಳುವುದು
ಒಳ್ಳೆಯದು
ಎಂದು
ಮುಖ್ಯ
ನ್ಯಾಯಮೂರ್ತಿ
ಜೆಎಸ್
ಖೆಹರ್
ಅಭಿಪ್ರಾಯಪಟ್ಟಿದ್ದಾರೆ.ಮುಂದಿನ
ವಿಚಾರಣೆಯನ್ನು
ಮಾರ್ಚ್
31ಕ್ಕೆ
ಮುಂದೂಡಲಾಗಿದೆ.[ಅಯೋಧ್ಯಾ
ದೇಗುಲಕ್ಕಾಗಿ
ಸುಪ್ರೀಂಗೆ
ಮೊರೆ
ಹೊಕ್ಕ
'ಸ್ವಾಮಿ']
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ ಹಲವಾರು ಬಾರಿ ಮಾತುಕತೆ ನಡೆಸಲಾಯಿತು. ಆದರೆ, ಮಾತುಕತೆ ವಿಫಲವಾಗಿದೆ. ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಿಕೊಳ್ಳುವವರು ಬೇಕಿದ್ದಾರೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿರುವುದನ್ನು ಸ್ವಾಮಿ ಸ್ವಾಗತಿಸಿದ್ದಾರೆ.