School Holidays: ಈದ್ & ಶಿಕ್ಷಕರ ದಿನ: ವಿವಿಧ ರಾಜ್ಯಗಳ ಶಾಲೆಗಳಿಗೆ ರಜೆ ಘೋಷಣೆ, ಇಲ್ಲಿದೆ ಪಟ್ಟಿ
School Holiday Updates: ಭಾರತದಲ್ಲಿ ಸೆಪ್ಟಂಬರ್ 05ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಈ ಬಾರಿ ಅದೇ ದಿನ ಮುಸ್ಲಿಮರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಇದೆ. ಕರ್ನಾಟಕ ಒಳಗೊಂಡಂತೆ ದೇಶದಲ್ಲಿ ಶುಕ್ರವಾರ ಶಾಲೆಗಳು ರಜೆ ಇವೆಯಾ? ಇಲ್ಲವಾ? ಎಂಬ ಅನುಮಾನ ಕಾಡುವುದು ಸಹಜ. ನಾಳೆ ಯಾವೆಲ್ಲ ರಾಜ್ಯಗಳಲ್ಲಿ ಮಾತ್ರವೇ ರಜೆ ಇದೆ ಎಂಬುದನ್ನು ನೀವು ಈ ಸುದ್ದಿಯಲ್ಲಿ ತಿಳಿಯಬಹುದು.
ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಾದ ಈದ್-ಎ-ಮಿಲಾದ್ ಅನ್ನು ಮುಸ್ಲಿಮರು ಆಚರಿಸುತ್ತಾರೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಮಳೆ, ಪ್ರವಾಹ ಕಾರಣದಿಂದಾಗಿ ಆಗಾಗ ಶಾಲೆಗಳಿಗೆ ರಜೆ ನೀಡಲಾಗಿದೆ. ಇದೀಗ ಈದ್ ಕಾರಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನಗರಗಳಲ್ಲಿ ಶಾಲೆಗಳು ಸೆಪ್ಟೆಂಬರ್ 5 ಶಾಲೆಗಳು ಬಂದ್ ಆಗಿರಲಿವೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ಶಾಲೆಗಳು ಮುಚ್ಚಲಿವೆ.

ನಿರಂತರ ಅಧ್ಯಯನ ನಡೆಸಿದ ಶಾಲೆಗಳಿಗೆ ಈ ರಜೆ ತಾತ್ಕಾಲಿಕ ವಿರಾಮ ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು ವಿರಾಮ ತೆಗೆದುಕೊಂಡು ತಮ್ಮ ಕುಟುಂಬದೊಂದಿಗೆ ವಾರಾಂತ್ಯ ಆನಂದಿಸಬಹುದಾಗಿದೆ. ಈದ್ ಮಾತ್ರವಲ್ಲ ಸಿಕ್ಕಿಂ ಮತ್ತು ಮಣಿಪುರ ಹಾಗೂ ಈಶಾನ್ಯ ಭಾಗದ ರಾಜ್ಯಗಳಲ್ಲಿ ಇಂದ್ರಜಾತ್ರ ಆಚರಣೆ ಸಹ ಇದೆ. ಅದಕ್ಕೂ ಆ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ. ಶುಕ್ರವಾರ ರಜೆ ನೀಡಿದ್ದರಿಂದ ವಾರಂತ್ಯ ಪೂರ್ತಿ ಮಕ್ಕಳಿಗೆ ಮನರಂಜನೆ ಸಿಗಲಿದೆ.
ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಬಂದ್
ಈದ್ ಮಿಲಾದ್ ಹಬ್ಬ ಪ್ರಯುಕ್ತ ಕೇಂದ್ರ ಸರ್ಕಾರದಿಂದ ಅಧಿಕೃತ ರಜೆಯಾಗಿ ಗುರುತಿಸಿದೆ. ಅದರ ಪ್ರಕಾರ, ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಸಾಮಾನ್ಯ ಬಂದ್ ಆಗಲಿವೆ. ರಜೆ ಖಚಿತತೆಗಾಗಿ ವಿದ್ಯಾರ್ಥಿಗಳು ಪೋಷಕರು ನಿಮ್ಮ ಶಾಲೆಗಳ ಸಿಬ್ಬಂದಿ, ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಸೆಪ್ಟೆಂಬರ್ 2025ರ ರಜೆ ಪಟ್ಟಿ
ಸೆಪ್ಟೆಂಬರ್ 7: ಭಾನುವಾರ - ರಜೆ
ಸೆಪ್ಟೆಂಬರ್ 11: ಬುಧವಾರ - ಮಹಾಲಕ್ಷ್ಮಿ ಉಪವಾಸ ಪ್ರಾರಂಭ, ರಾಧಾ ಅಷ್ಟಮಿ ಆಚರಣೆ
ಸೆಪ್ಟೆಂಬರ್ 14: ಭಾನುವಾರ - ರಜೆ
ಸೆಪ್ಟೆಂಬರ್ 16: ಮಂಗಳವಾರ - ವಿಶ್ವಕರ್ಮ ಪೂಜೆ
ಸೆಪ್ಟೆಂಬರ್ 17: ಬುಧವಾರ - ವಿಶ್ವಕರ್ಮ ಪೂಜೆ
ಸೆಪ್ಟೆಂಬರ್ 21: ಭಾನುವಾರ- ರಜೆ
ಸೆಪ್ಟೆಂಬರ್ 22: ಸೋಮವಾರ: ದಸರಾ-ನವರಾತ್ರಿ ಸಂಭ್ರಮ
ಸೆಪ್ಟೆಂಬರ್ 28: ಭಾನುವಾರ - ರಜೆ
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications