ಶಶಿಕಲಾಗೆ ಸುಪ್ರೀಂಕೋರ್ಟಿನಿಂದ ಸಿಕ್ತು ತಾತ್ಕಾಲಿಕ ನೆಮ್ಮದಿ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿ ತ್ವರಿತವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿೆ
ನವದೆಹಲಿ, ಫೆಬ್ರವರಿ 10:ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಮುಂದೂಡಿದೆ.
ಈ
ಅರ್ಜಿಯನ್ನು
ತ್ವರಿತಗತಿಯಲ್ಲಿ
ಕೈಗೆತ್ತಿಕೊಳ್ಳಲು
ಸಾಧ್ಯವಿಲ್ಲ
ಎಂದು
ಸುಪ್ರೀಂಕೋರ್ಟ್
ಹೇಳಿದೆ.
ಎಐಎಡಿಎಂಕೆ
ಶಾಸಕಾಂಗ
ಪಕ್ಷದ
ಸಭೆಯು
ಶಶಿಕಲಾ
ಅವರನ್ನು
ಮುಖ್ಯಮಂತ್ರಿಯಾಗಿ
ಆಯ್ಕೆ
ಮಾಡಿದ
ಕ್ರಮವನ್ನು
ಪ್ರಶ್ನಿಸಿದ
ಪಟ್ಟ
ಪಂಚಾಯತ್
ಇಯಕ್ಕಂ
ಸುಪ್ರೀಂಕೋರ್ಟ್ಗೆ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿ
ಸಲ್ಲಿಸಿತ್ತು.
ಈ ಅರ್ಜಿ ಶುಕ್ರವಾರ ಬೆಳಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರಬೇಕಿತ್ತು. ಈಗಾಗಲೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಭೀತಿಯಿಂದ ತಾತ್ಕಾಲಿಕ ನೆಮ್ಮದಿ ಪಡೆದುಕೊಂಡಿರುವ ಶಶಿಕಲಾ ಅವರಿಗೆ ಈ ಪಿಐಎಲ್ ನಿಂದ ಸದ್ಯಕ್ಕೆ ಯಾವುದೇ ಭೀತಿ ಇಲ್ಲ. ಯಾವುದೇ ಕೇಸಿನಲ್ಲಿ ಶಶಿಕಲಾ ವಿರುದ್ದವಾಗಿ ತೀರ್ಪು ಹೊರಬಿದ್ದಿದ್ದೇ ಆದರೆ ಅವರು ಮುಖ್ಯಮಂತ್ರಿಯಾಗುವ ಕನಸು ಕನಸಾಗಿಯೇ ಉಳಿಯಲಿದೆ.