Ruckus at MCD House: ಎಫ್ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ ದೆಹಲಿ ಮೇಯರ್!
ಎಂಸಿಡಿ ಹೌಸ್ ಗದ್ದಲ: ಎಫ್ಐಆರ್ ದಾಖಲಿಸಲು ಆಪ್ ನಾಯಕರೊಂದಿಗೆ ದೆಹಲಿ ಮೇಯರ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ.
ನವದೆಹಲಿ ಫೆಬ್ರವರಿ 25: ಸ್ಥಾಯಿ ಸಮಿತಿ ಚುನಾವಣೆ ಬಳಿಕ ಎಂಸಿಡಿ ಭವನದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ಕೌನ್ಸಿಲರ್ಗಳ ನಡುವೆ ಘರ್ಷಣೆ ನಡೆದಿದೆ.
ಇದರ ಬೆನ್ನಲ್ಲೆ ದೆಹಲಿಯ ಹೊಸದಾಗಿ ಚುನಾಯಿತ ಮೇಯರ್ ಶೈಲಿ ಒಬೆರಾಯ್ ಅವರು ಎಎಪಿ ನಾಯಕರಾದ ಸಾರಿಕಾ ಚೌಧರಿ ಮತ್ತು ಆಶು ಠಾಕೂರ್ ಜೊತೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಪೊರೇಟರ್ಗಳ ವಿರುದ್ಧ ಕೇಸು ದಾಖಲಿಸಲು ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಗೆ ತಲುಪಿದ್ದಾರೆ.
ಈ ವೇಳೆ ಮೇಯರ್ ಶೈಲಿ ಒಬೆರಾಯ್, ಬಿಜೆಪಿಯ ಬೇಡಿಕೆಯಂತೆ ಸ್ಥಾಯಿ ಸಮಿತಿ ಚುನಾವಣೆ ನಡೆಯಬೇಕು ಎಂದರು. ಇದಾದ ಬಳಿಕವೂ ಗಲಾಟೆ ಸೃಷ್ಟಿಸಿ ವೇದಿಕೆ ಮೇಲೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನನ್ನು ರಕ್ಷಿಸಿದ ಮಹಿಳಾ ನಾಗರಿಕ ರಕ್ಷಣಾ ಸಿಬ್ಬಂದಿಗೆ ನಾನು ಧನ್ಯವಾದ ಹೇಳುತ್ತೇನೆ. ಎಎಪಿ ಮಹಿಳಾ ಸದಸ್ಯರ ಮೇಲೆ ಬಿಜೆಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಬಿಜೆಪಿ ಸೋಲನ್ನು ಒಪ್ಪಿಕೊಳ್ಳಬೇಕು ಎಂದು ಮೇಯರ್ ಹೇಳಿದರು.

ಫೆ.27 ರಂದು ಮರು ಚುನಾವಣೆ:
ಫೆಬ್ರವರಿ 27 ರಂದು ಮರು ಚುನಾವಣೆ ನಡೆಯಲಿದೆ ಎಂದು ಮೇಯರ್ ಹೇಳಿದ್ದಾರೆ. ಮತ್ತೊಂದೆಡೆ, ಚುನಾವಣೆಯನ್ನು ತಡೆಹಿಡಿಯಲು ಶನಿವಾರ ನ್ಯಾಯಾಲಯದ ಮೊರೆ ಹೋಗುವುದಾಗಿ ಬಿಜೆಪಿ ಹೇಳಿದೆ. ಇದನ್ನು "ಪ್ರಜಾಪ್ರಭುತ್ವದ ಕರಾಳ ದಿನ" ಎಂದು ಬಣ್ಣಿಸಿದ ಶೆಲ್ಲಿ ಒಬೆರಾಯ್, ಬಿಜೆಪಿಯ ರವಿ ನೇಗಿ, ಅರ್ಜುನ್ ಮರ್ವಾ ಮತ್ತು ಚಂದನ್ ಚೌಧರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಾಯಿ ಸಮಿತಿ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂದು ಬಿಜೆಪಿ ಸದಸ್ಯರು ಭಾವಿಸಿ ದಾಳಿ ನಡೆಸಿದೆ ಎಂದು ಶೆಲ್ಲಿ ಒಬೆರಾಯ್ ಹೇಳಿದ್ದಾರೆ. ದೆಹಲಿಯ ಮೇಯರ್ ಅವರನ್ನು ಎಂಸಿಡಿ ಹೌಸ್ನಿಂದ ಹೊರಗೆ ಕರೆದೊಯ್ಯುತ್ತಿದ್ದಾಗ, ಬಿಜೆಪಿ ಕಾರ್ಪೊರೇಟರ್ ಅರ್ಜುನ್ ಮರ್ವಾ ಅವರು ನಿರ್ಗಮನದ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.

ದೆಹಲಿಯ ಹೊಸ ಮೇಯರ್:
ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಮತ್ತು ಪಟೇಲ್ ನಗರದ ವಾರ್ಡ್ ಸಂಖ್ಯೆ 86ರ ಕೌನ್ಸಿಲರ್ ಶೈಲಿ ಒಬೆರಾಯ್ ಅವರು ದೆಹಲಿಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಶೆಲ್ಲಿ ಒಬೆರಾಯ್ ತಮ್ಮ ಪ್ರತಿಸ್ಪರ್ಧಿ ರೇಖಾ ಗುಪ್ತಾ ಅವರನ್ನು 34 ಮತಗಳಿಂದ ಸೋಲಿಸಿದರು. ಬಿಜೆಪಿ ಕೌನ್ಸಿಲರ್ಗಳು ಅಡ್ಡ ಮತದಾನ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ದೊಡ್ಡ ಹೇಳಿಕೆ ನೀಡಿದೆ. ಬಿಜೆಪಿ ಕೌನ್ಸಿಲರ್ಗಳು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದ್ದಾರೆ.
ದೆಹಲಿ ಎಂಸಿಡಿ ಸ್ಥಾಯಿ ಸಮಿತಿಯ 6 ಸದಸ್ಯರ ಮತದಾನದಲ್ಲಿ ಎಎಪಿ 138 ಮತಗಳನ್ನು ಮತ್ತು ಬಿಜೆಪಿ ಕಡಿಮೆ ಮತಗಳನ್ನು ಪಡೆದಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಎಎಪಿ 134 ಕಾರ್ಪೊರೇಟರ್ಗಳನ್ನು ಹೊಂದಿದ್ದು, ಒಬ್ಬರು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು. ಇಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ಗಳಿಲ್ಲದ ಕಾರಣ ಬಿಜೆಪಿಯ ಕೆಲವು ಕಾರ್ಪೊರೇಟರ್ಗಳು ಆಪ್ಗೆ ಮತ ಹಾಕಿದ್ದಾರೆ ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications