ರಾಮಮಂದಿರ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ: ಮೋಹನ್ ಭಾಗವತ್
ಪಲ್ಘರ್, ಏಪ್ರಿಲ್ 16: "ರಾಮಮಂದಿರವನ್ನು ಪುನಃ ಕಟ್ಟದಿದ್ದರೆ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಕಡಿದಂತಾಗುತ್ತದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಪಲ್ಘರ್ ಎಂಬಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, "ಧ್ವಂಸಗೊಂಡ ದೇವಾಲಯವನ್ನು ಮತ್ತೆ ಕಟ್ಟುವುದು ಎಲ್ಲರ ಜವಾಬ್ದಾರಿ" ಎಂದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
"ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೆಡವಿದ್ದು ದೇಶದ ಹೊರಗಿನಿಂದ ಬಂದ ಮುಸ್ಲಿಮರೇ ಹೊರತು ಭಾರತೀಯರಲ್ಲ. ಭಾರತೀಯರು ಎಂದಿಗೂ ಅಂಥ ಕೆಲಸ ಮಾಡುವುದಿಲ್ಲ" ಎಂದು ಅವರು ಹೇಳಿದರು.

"ಈಗ ಆ ಮಂದಿರವನ್ನು ಕಟ್ಟುವ ಸಮಯ ಬಂದಿದೆ. ದೇವಾಲಯ ಎಲ್ಲಿತ್ತೋ ಅಲ್ಲಿಯೇ ಅದನ್ನು ಕಟ್ಟಬೇಕು. ಅದಕ್ಕಾಗಿ ನಾವು ಹೋರಾಟಕ್ಕೂ ಸಿದ್ಧ" ಎಂದಿದ್ದಾರೆ.












Click it and Unblock the Notifications