ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೋಹಿಂಗ್ಯಾಗಳು ನಿರಾಶ್ರಿತರಲ್ಲ, ಅಕ್ರಮ ವಲಸಿಗರು : ರಾಜನಾಥ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 21: ಭಾರತದಲ್ಲಿ ಆಶ್ರಯ ಕೋರಿರುವ ರೋಹಿಂಗ್ಯಾ ಮುಸ್ಲಿಮರು ಅಕ್ರಮ ವಲಸಿಗರು; ಅವರೆಲ್ಲಾ ನಿರಾಶ್ರಿತರಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರೋಹಿಂಗ್ಯಾ ಮುಸ್ಲಿಮರಿಂದ ಭಾರತದ ಭದ್ರತೆಗೆ ಅಪಾಯ : ರಾಜನಾಥ್ ಸಿಂಗ್
ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, '"ಮಯನ್ಮಾರ್ ಗಡಿಪಾರು ಮಾಡುವವರನ್ನು ಒಪ್ಪಿಕೊಳ್ಳಲು ಸಿದ್ದವಿರುವಾಗ, ಗಡಿಪಾರಿಗೆ ಯಾಕೆ ಕೆಲವರು ತಗಾದೆ ತೆಗೆಯುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
"ರೋಹಿಂಗ್ಯಾಗಳು ನಿರಾಶ್ರಿತರಲ್ಲ. ಅವರೆಲ್ಲಾ ದೇಶದೊಳಕ್ಕೆ ಬರುವಾಗ ಸರಿಯಾದ ಮಾರ್ಗ ಅನುಸರಿಸಿಲ್ಲ. ರೋಹಿಂಗ್ಯಾಗಳು ಯಾರೂ ಆಶ್ರಯ ಕೋರಿ ಅರ್ಜಿ ಸಲ್ಲಿಸಿಲ್ಲ," ಎಂದು ಅವರು ಹೇಳಿದ್ದಾರೆ.
ಇನ್ನು ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ಮೂಲಕ ಭಾರತ ಯಾವುದೇ ಅಂತರಾಷ್ಟ್ರೀಯ ಕಾನೂನನ್ನು ಮುರಿಯುತ್ತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
Comments
English summary
The Rohingyas were illegal immigrants and not refugees who had applied for asylum in India, Union Home Minister Rajnath Singh said today.
Story first published: Thursday, September 21, 2017, 13:29 [IST]