ಪತ್ರಿಕೆಯ ಅಭಿಯಾನ: ಅವಿವಾಹಿತೆಯಿಂದ ಹಾಲುಣಿಸುವ ಪ್ರಚಾರವೇಕೆ?
ಬೆಂಗಳೂರು, ಮಾರ್ಚ್ 01: ಎದೆ ಹಾಲಿನ ಕೊರತೆಯಿಂದಾಗಿ ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ಹಾಗೂ ಬುದ್ಧಿಶಕ್ತಿಯ ಪರಿಣಾಮದ ಬಗ್ಗೆ ತಾಯಂದರಲ್ಲಿ ಅರಿವು ಮೂಡಿಸಲು ಆರಂಭಿಸಿದ ಜಾಗತಿಕ ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಸ್ತನ್ಯಪಾನದ ಮಹತ್ವ ಸಾರುವ ಭರದಲ್ಲಿ ಮಲೆಯಾಳಂನ ಮ್ಯಾಗಜೀನ್ ವೊಂದು ಚರ್ಚೆಗೆ ಗ್ರಾಸವಾಗುತ್ತಿದೆ.
ಸ್ತನ್ಯಪಾನದ ಮಹತ್ವ, ಪ್ರಚಾರಕ್ಕಾಗಿ ಬಂದ ಕವರ್ ಸ್ಟೋರಿ ಹಾಗೂ ಕವರ್ ಪೇಜ್ ನಲ್ಲಿ ರೂಪದರ್ಶಿಯಾಗಿ ಗಿಜು ಜೋಸೆಫ್ ಎಂಬುವರು ಕಾಣಿಸಿಕೊಂಡಿದ್ದಾರೆ.
ಆಕೆಗೆ ಮದುವೆಯಾಗಿಲ್ಲ, ಮಗುವಾಗಿಲ್ಲ, ಆದರೆ, ಸ್ತನ್ಯಪಾನ ಮಾಡುವ ಭಂಗಿಯಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಇಂಥ ಉತ್ತಮ ಅಭಿಯಾನಕ್ಕೆ ರೂಪದರ್ಶಿ ಬಳಕೆ ಅಗತ್ಯವಿತ್ತೆ? ಅದರಲ್ಲೂ ಅವಿವಾಹಿತೆಯನ್ನು ಬಳಸಿರುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಲಾಗಿದೆ. ಆದರೆ, ರೂಪದರ್ಶಿ ಗಿಲು ಜೋಸೆಫ್ ಮಾಡಿದ್ದು ಸರಿ, ಇಂಥ ಅಭಿಯಾನದಿಂದ ಮಹಿಳೆಯರು ಭಯವಿಲ್ಲದೆ, ಪಬ್ಲಿಕ್ ಸ್ಥಳಗಳಲ್ಲಿ ಸ್ತನ್ಯಪಾನ ಮಾಡಲು ಸಾಧ್ಯವಾಗಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹಲವಾರು ಮಂದಿ ಸಮರ್ಥನೆ ನೀಡಿದ್ದಾರೆ.

ಕವರ್ ಪೇಜ್ ನಲ್ಲಿ ಏನಿದೆ?
ಮಲಯಾಳಂ ನಟಿ, ಲೇಖಕಿ, ಸಾಹಿತಿ ಗಿಲು ಜೋಸೆಫ್ ಮಲಯಾಳಂ ಭಾಷೆಯ ಗೃಹಲಕ್ಷ್ಮಿ ಪತ್ರಿಕೆಗೆ ಈ ಫೋಟೋಶೂಟ್ ಮಾಡಿದ್ದಾರೆ. ಹಣೆಗೆ ಕುಂಕುಮವಿಟ್ಟು, ಕುತ್ತಿಗೆಗೆ ಮಾಂಗಲ್ಯಸರ ಹಾಕಿಕೊಂಡು ಭಾರತ ನಾರಿಯಂತೆ ವಸ್ತ್ರ ಧರಿಸಿ ಮಗುವಿಗೆ ಸ್ತನಪಾನ ಮಾಡುವ ಪೋಸ್ ನಲ್ಲಿದ್ದಾರೆ.
|
ಗುರಾಯಿಸಿಕೊಂಡು ನೋಡಬೇಡಿ
ವಿಶ್ವ ಸ್ತನ್ಯಪಾನ ಸಪ್ತಾಹದ ಸಮಯದಲ್ಲಿ ಪ್ರತಿ ಮಾತೆಯೂ ತನ್ನ ಪುಟ್ಟ ಕಂದನಿಗೆ, ಅಕ್ಕರೆ, ಮಮತೆ, ಪ್ರೀತಿ, ವಿಶ್ವಾಸಗಳನ್ನು ತುಂಬಿ ಕುಡಿಸುವ ಅಮೃತದ ಮಹತ್ವ ಅರಿಯೋಣ ಎಂದು ಅಭಿಯಾನ ನಡೆಸಲಾಗುತ್ತದೆ.
ಆದರೆ, ಗೃಹಲಕ್ಷ್ಮಿ ಮ್ಯಾಗಜೀನ್ ನ ಕವರ್ ಪುಟ ಹಾಗೂ ಸ್ಟೋರಿಯಲ್ಲಿ ಸ್ತನ್ಯಪಾನದ ಬಗ್ಗೆ ಅಕಾಲಿಕವಾಗಿ ಏಕೆ ಅಭಿಯಾನ ಶುರುವಾಗಿದೆ. ಅದರಲ್ಲಿ ತಾಯಿ ಮಗುವನ್ನು ಬಳಸದೆ, ರೂಪದರ್ಶಿಯನ್ನು ಬಳಸಿರುವುದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಲಾಗಿದೆ.
|
ಇಂಥ ಅಭಿಯಾನ ಅಗತ್ಯ ಎಂದಿದ್ದಾರೆ
ಮಹಿಳೆಯರ ಸ್ತನಗಳು ಕೇವಲ ಭೋಗಕ್ಕೆ ಮಾತ್ರವಲ್ಲ, ಮಗುವಿಗೆ ಹಾಲುಣಿಸಲು ಬಳಸಲಾಗುತ್ತದೆ. ಸ್ತನ್ಯಪಾನದ ಮಹತ್ವ ಸಾರಲು ಇಂಥ ಅಭಿಯಾನ ಅಗತ್ಯ ಎಂದಿದ್ದಾರೆ.
ಅಕಾಲಿಕವಾಗಿ ಏಕೆ ಅಭಿಯಾನ ಶುರು
ಮಾತೃಭೂಮಿ ಪತ್ರಿಕೆಯ ಗೃಹಲಕ್ಷ್ಮಿ ಕಾರ್ಯವನ್ನು ಮೆಚ್ಚಬೇಕು. ಎಲ್ಲವನ್ನು ಮಡಿವಂತಿಕೆಯಿಂದ ನೋಡುವ ದೇಶದಲ್ಲಿ ಈ ರೀತಿ ವಿಶಿಷ್ಟ ಅಭಿಯಾನಕ್ಕೆ ಬೆಲೆ ಸಿಗಬೇಕಿದೆ ಎಂದು ಡಾಂಟಿಸ್ ಜೋ ಶಾಜಿ ಬರೆದುಕೊಂಡಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications