ತ್ವರೆ ಮಾಡಿ : ಕರೆನ್ಸಿ ನೋಟಿನ ಮೇಲೆ ಗೀಚಿದ್ದರೆ ಖರ್ಚು ಮಾಡಿ

ನೋಟುಗಳ ಮೇಲೆ ಬರೆಯೋದು ರಿಸರ್ವ್ ಬ್ಯಾಂಕಿನ ನಿಯಮಗಳಂತೆ ನಿಷೇಧಿತ. ಇಂಥ ನೋಟುಗಳಿಗೆ ಮನ್ನಣೆ ನೀಡಬಾರದು ಎನ್ನುವ ಮೌಖಿಕ ಆದೇಶವಿದ್ದರೂ ಹಲವು ಬ್ಯಾಂಕಿನ ಅಧಿಕಾರಿಗಳು ಅಡ್ಜೆಸ್ಟ್ (ಹೊಂದಾಣಿಕೆ) ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
2014ರ ಜನವರಿ 1 ರಿಂದ ಬ್ಯಾಂಕ್ ಗಳಲ್ಲಿ ಈ ರೀತಿ ಅಡ್ಜೆಸ್ಟ್ ಮೆಂಟ್ ನಡೆಯುವುದಿಲ್ಲ. ಪೆನ್ನು ಹಾಗೂ ಇತರೆ ಶಾಹಿಯಾ ಲೇಖನಿಗಳಿಂದ ಬರೆದ, ಗೀಚಿದ ನೋಟುಗಳನ್ನು ಸ್ವೀಕರಿಸದಂತೆ ಆರ್ ಬಿಐ ನಿರ್ದೇಶನ ನೀಡಿದೆ. ಇಂಥ ನೋಟುಗಳನ್ನು ತ್ಯಜಿಸುವಂತೆ ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟಾಜ್ಞೆ ಹೊರಡಿಸಿದೆ.
ಹೀಗಾಗಿ ನಿಮ್ಮ ಬಳಿ ಗೀಚಿದ ಗುರುತುಗಳುಳ್ಳ ನೋಟುಗಳಿದ್ದರೆ ಅವುಗಳನ್ನು ಜನವರಿ 1 ರೊಳಗೆ ಚಲಾಯಿಸಿಕೊಳ್ಳಿ. ಹತ್ತಿರದ ಬ್ಯಾಂಕ್ ಗೆ ತೆರಳಿ ನೋಟುಗಳನ್ನು ನೀಡಿ.ಇಂಥ ನೋಟುಗಳ ಬಗ್ಗೆ ಅರಿವು ಮೂಡಿಸುವ ಹಾಗೂ ನೋಟುಗಳ ಮೇಲೆ ಬರೆಯದಂತೆ ಜಾಗೃತಿ ಮೂಡಿಸಲು ರಿಸರ್ವ್ ಬ್ಯಾಂಕ್ ಹಾದಿಯಾಗಿ ಎಲ್ಲಾ ಬ್ಯಾಂಕ್ ಗಳು ಕಾರ್ಯಕ್ರಮಗಳನ್ನು,ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿವೆ.
ನೋಟಿನ ಶುಚಿತ್ವ ಕಾಪಾಡುವ ಅಭಿಯಾನ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್ನ ಉಪಗೌರ್ನರ್ ಕೆ.ಸಿ.ಚಕ್ರವರ್ತಿ ತಿಳಿಸಿದ್ದಾರೆ. ಹಾಲಿ ಬ್ಯಾಂಕ್ ನ ಯಾವುದೇ ಅಧಿಕಾರಿ ಮುಂದೆ ನೋಟುಗಳ ಮೇಲೆ ಬರೆದರೆ ಅಂಥವುಗಳನ್ನು ಸ್ವೀಕರಿಸದ ಪದ್ಧತಿ ಇದೆ. ಆದರೆ ಯಾರಿಂದಲೋ ಬಂದ ಇಂಥ ನೋಟುಗಳನ್ನು ಕ್ರಮೇಣವಾಗಿ ಕಡಿಮೆ ಮಾಡುವ ಕಾರ್ಯ ಆರಂಭಗೊಂಡಿದೆ.
ಅಷ್ಟೇ ಅಲ್ಲ ಇನ್ನು ಮುಂದೆ ಪ್ಲಾಸ್ಟಿಕ್ ಕರೆನ್ಸಿಗಳೂ ಜಾರಿಗೆ ಬರಲಿವೆಯಂತೆ. ಈಗಾಗಲೇ ಪೈಲೆಟ್ ಪ್ರಾಜೆಕ್ಟ್ ಆರಂಭಗೊಂಡಿದ್ದು ಎರಡುಮೂರು ವರ್ಷಗಳಲ್ಲಿ ಪ್ಲಾಸ್ಟಿಕ್ ಕರೆನ್ಸಿಗಳು ಚಲಾವಣೆಯಾಗಲಿವೆ. ನಕಲಿ ನೋಟುಗಳನ್ನು ಕಂಡು ಹಿಡಿಯುವ ಬಗ್ಗೆ ಕೂಡಾ ಈ ಹಿಂದೆ ಆರ್ ಬಿಐ ಅಭಿಯಾನ ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications