Opinion Poll: ರಾಜಸ್ಥಾನ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಕಲರವ?
ನವದೆಹಲಿ, ಜುಲೈ 29: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಸೆಮಿಫೈನಲ್ ಎಂದೇ ಉಲ್ಲೇಖಿಸಲಾಗುತ್ತಿರುವ ಅಸೆಂಬ್ಲಿ ಚುನಾವಣೆಗಳಲ್ಲಿ ರಾಜಸ್ಥಾನ ಕೂಡಾ ಒಂದು. ಈ ವರ್ಷಾಂತ್ಯದೊಳಗೆ ಅಂದರೆ ಡಿಸೆಂಬರ್ ಎರಡನೇ ವಾರದೊಳಗೆ ಅಲ್ಲಿ ಚುನಾವಣೆ ನಡೆಯಬೇಕಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಅಶೋಕ್ ಗೆಹ್ಲೋತ್ ನೇತೃತ್ವದ ಕಾಂಗ್ರೆಸ್ ಪಕ್ಷ ಒಡೆದ ಮನೆ. ಮಧ್ಯ ಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದ ರೀತಿಯಲ್ಲೇ ರಾಜಸ್ಥಾನದಲ್ಲೂ ಸಚಿನ್ ಪೈಲಟ್, ಸಿಎಂ ಗೆಹ್ಲೋತ್ ವಿರುದ್ದ ಸಿಟ್ಟಾಗಿದ್ದರು. ಅದೆಷ್ಟೋ ಬಾರಿ ಇನ್ನೇನು ರಾಜಸ್ಥಾನ ಕಾಂಗ್ರೆಸ್ ಇಬ್ಬಾಗವಾಯಿತು ಎನ್ನುವಷ್ಟರಲ್ಲಿ ದೆಹಲಿ ಮುಖಂಡರು ತೇಪೆ ಹಾಕುತ್ತಿದ್ದರು.

ಆದರೆ, ಗೆಹ್ಲೋತ್ ಮತ್ತು ಪೈಲಟ್ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಕೈತಪ್ಪಿದ್ದ ರಾಜ್ಯವನ್ನು ಮತ್ತೆ ಉಳಿಸಿಕೊಳ್ಳುವುದು ಬಿಜೆಪಿಗೆ ಭಾರೀ ಮುಖ್ಯ, ಯಾಕೆಂದರೆ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ. ಈ ನಡುವೆ, ಚುನಾವಣೆಗೆ ಐದು ತಿಂಗಳ ಮುನ್ನ ಮತದಾರರ ನಾಡಿಮಿಡಿತ ಆಧರಿಸಿ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ.
ದೇಶದ ಪಶ್ಚಿಮ ಭಾಗದಲ್ಲಿರುವ ರಾಜಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಪ್ರತೀ ಚುನಾವಣೆಯಲ್ಲೂ ಮತದಾರ ಒಂದೇ ಪಕ್ಷದ ಮೇಲೆ ನಿಯತ್ತು ಮುಂದುವರಿಸುವುದು ಕಮ್ಮಿ. ಹಾಗಾಗಿ, ಬಿಜೆಪಿಗೆ ಈ ಬಾರಿ ಪೂರಕ ವಾತಾವರಣವಿದೆ ಎಂದು ಹೇಳಬಹುದಾಗಿದೆ, ಒಪಿನಿಯನ್ ಪೋಲ್ ಕೂಡಾ ಅದನ್ನೇ ಹೇಳುತ್ತಿದೆ.
ಐದು ವರ್ಷದ ಅಶೋಕ್ ಗೆಹ್ಲೋತ್ ಅಧಿಕಾರದ ಅವಧಿ
ಐದು ವರ್ಷದ ಅಶೋಕ್ ಗೆಹ್ಲೋತ್ ಅಧಿಕಾರದ ಅವಧಿ ಕಷ್ಟಕರವಾಗಿತ್ತು ಎಂದೇ ಹೇಳಬಹುದು. ಒಂದು ಕಡೆ, ಸಚಿನ್ ಪೈಲಟ್ ಬಂಡಾಯದ ಭೀತಿ, ಇನ್ನೊಂದು ಕಡೆ ಸರ್ಕಾರಕ್ಕೆ ತೀವ್ರ ಮುಜುಗರವನ್ನು ತಂದ ಪೇಪರ್ ಲೀಕ್ ಮತ್ತು ಪರೀಕ್ಷೆ ರದ್ದತಿ. ತಮ್ಮದೇ ಪಕ್ಷದ ಸಚಿವರೊಬ್ಬರಿಂದ ಸರ್ಕಾರ ತಲೆತಗ್ಗಿಸುವಂತೆ ಕೂಡಾ ಆಗಿತ್ತು. ಆ ಸಚಿವರನ್ನು ಸಿಎಂ ಸಚಿವ ಸ್ಥಾನದಿಂದ ಉಚ್ಚಾಟಿಸಿದ್ದರು.
ಎಬಿಪಿ-ಸಿವೋಟರ್ ಜಂಟಿ ಸರ್ವೇ
ಎಬಿಪಿ-ಸಿವೋಟರ್ ಜಂಟಿಯಾಗಿ ರಾಜಸ್ಥಾನ ಚುನಾವಣೆಯ ಸಂಬಂಧ ಸಮೀಕ್ಷೆಯನ್ನು ನಡೆಸಿದೆ. ಇದರ ಪ್ರಕಾರ ಬಿಜೆಪಿ ಇಲ್ಲಿ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಯಿದೆ. ಇನ್ನೂರು ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ ಯಾವುದೇ ಹೊಂದಾಣಿಕೆಯ ಅವಶ್ಯಕತೆಯಿಲ್ಲದೇ ಬಹುಮತದ ಹತ್ತಿರಕ್ಕೆ ಬಂದು ನಿಲ್ಲಲಿದೆ.
ಬಿಜೆಪಿಗೆ ಮತ್ತೆ ಅಧಿಕಾರ
ಸಮೀಕ್ಷೆಯ ಪ್ರಕಾರ ಬಿಜೆಪಿಗೆ 109-119 ಸ್ಥಾನ ಸಿಗುವ ಸಾಧ್ಯತೆಯಿದೆ, ಬಹುಮತಕ್ಕೆ ಇಲ್ಲಿ 101 ಸ್ಥಾನದ ಅವಶ್ಯಕತೆಯಿದೆ. ಇನ್ನು ಕಾಂಗ್ರೆಸ್ಸಿಗೆ ಸರ್ವೇರ ಪ್ರಕಾರ 78-88 ಸೀಟು ಲಭಿಸಲಿದೆ. ಇನ್ನು ಇತರರಿಗೆ ಒಂದರಿಂದ ಐದು ಸ್ಥಾನ ಸಿಗಬಹುದು ಎಂದು ಜಂಟಿ ಸರ್ವೇಯಲ್ಲಿ ಅಭಿಪ್ರಾಯ ಪಡಲಾಗಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications