ಉತ್ತರ ಭಾರತದ ರಾಜ್ಯಗಳಲ್ಲಿ ಶುಕ್ರವಾರ ಸಾಧಾರಣ ಮಳೆ
ನವದೆಹಲಿ, ಆಗಸ್ಟ್.28: ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ಮೂರನೇ ದಿನವು ವರುಣನ ಅಟ್ಟಹಾಸ ಮುಂದುವರಿದಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನಜೀವ ಸ್ತಬ್ಧಗೊಂಡಿದ್ದು, ವ್ಯಾಪಾರಿಗಳು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಭಾರತದ ಗುಜರಾತ್, ನವದೆಹಲಿ ಮತ್ತು ದಕ್ಷಿಣ ಭಾರತದ ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಶುಕ್ರವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಹರಿಯಾಣದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ನವದೆಹಲಿಯಲ್ಲಿ ಯಮುನಾ ನದಿಯಲ್ಲಿ ನೀರಿ ಪ್ರಮಾಣವು ಹೆಚ್ಚಾಗಿದ್ದು, ಹಳೆಯ ಯಮುನಾ ಬ್ರಿಡ್ಜ್ ನಲ್ಲಿ ನೀರಿನ ಪ್ರಮಾಣವು 204.30 ಮೀಟರ್ ಗೆ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ, ಕೊಡಗಿನಲ್ಲಿ ಮಳೆ ಸ್ವಲ್ಪ ಇಳಿಕೆ
ರಾಜಸ್ಥಾನದ ಭರತ್ ಪುರ್, ಧೋಲ್ಪುರ್, ಕರೌಲಿ, ದುಂಗಾರ್ಪುರ್, ಬನಸ್ವರ್, ಪ್ರತಾಪ್ ಘರ್, ಬರನ್, ಝಲ್ವಾರ್, ಕೋಟಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹರಿಯಾಣದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ:
ಹರಿಯಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭದ್ರಕ್ ಜಿಲ್ಲೆಯಲ್ಲಿ ಬೈತರಾನಿ ನದಿಯು ಉಕ್ಕಿ ಹರಿದಿದ್ದು, ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಜ್ಞಾನ್ ದಾಸ್ ತಿಳಿಸಿದ್ದಾರೆ.
J&K: Local administration on high alert as Jammu witnesses rainfall for 3rd consecutive day. Locals complain of high vegetable prices since last few days.
— ANI (@ANI) August 28, 2020
A customer, Jai, says, "Vegetables which were selling for Rs 30/kg, are now being sold at Rs 60/kg, we can't afford it." pic.twitter.com/Y9Ud0ZAuQq
ಮಹಾರಾಷ್ಟ್ರದಲ್ಲಿ ಮೂರು ದಿನ ಮಳೆ:
ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಮೋಡ ಮುಸುಗಿದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ಮೂರು ದಿನಗಳವರೆಗೂ ಅಂದರೆ ಆಗಸ್ಟ್.31ರವರೆಗೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಇನ್ನು, ಮಳೆಯ ದಾಖಲೆಯ ಪ್ರಕಾರ, 15 ಮಿ.ಮೀ ಮಳೆಯನ್ನು ಅಲ್ಪ, 15 ರಿಂದ 64.5 ಮಿ.ಮೀ ಮಳೆಯನ್ನು ಸಾಧಾರಣ ಮತ್ತು 64.5 ಮಿ.ಮೀಟರ್ ಗಿಂತ ಹೆಚ್ಚಿನ ಮಳೆಯನ್ನು ಭಾರಿ ಮಳೆ ಎಂದು ಗುರುತಿಸಲಾಗುತ್ತದೆ.