ಲಕ್ನೋ ರೈಲು ನಿಲ್ದಾಣದಲ್ಲಿ ಇಲಿ ಕೊಲ್ಲೋಕೆ ತಿಂಗಳಿಗೆ 40 ಸಾವಿರ
ಬ್ರಿಟಿಷರ ಕಾಲದಲ್ಲಿ ಕಟ್ಟಿದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಇಲಿಗಳು ಪ್ಲಾಟ್ ಫಾರ್ಮ್ ಕೆಳಗೆ ದೊಡ್ಡ ದೊಗರುಗಳನ್ನು ಕೊರೆದಿದ್ದು, ಈಗ ಇಲಿಗಳನ್ನು ಕೊಲ್ಲುವುದಕ್ಕೆ ಗುತ್ತಿಗೆ ಆಧಾರದಲ್ಲಿ ಜನರನ್ನು ನೇಮಿಸಲಾಗಿದೆ. ಖಾಸಗಿ ಕಂಪೆನಿಯೊಂದಕ್ಕೆ 4.76 ಲಕ್ಷಕ್ಕೆ ಇಲಿಗಳನ್ನು ಕೊಲ್ಲುವ ಗುತ್ತಿಗೆ ನೀಡಲಾಗಿದೆ.
1914ರಲ್ಲಿ ಶಂಕುಸ್ಥಾಪನೆಯಾದ ಇಲ್ಲಿನ ರೈಲು ನಿಲ್ದಾಣದ ಕಟ್ಟಡ ಕಟ್ಟಿ ಮುಗಿಸಿದ್ದು 1923ರಲ್ಲಿ. ರೈಲ್ವೆ ಇಲಾಖೆ ಆಸ್ತಿಗಳಿಗೆ, ಸರ್ಕಾರಿ ಕಡತಗಳಿಗೆ, ಪ್ರಯಾಣಿಕರ ವಸ್ತುಗಳಿಗೆ ಇಲಿಗಳಿಂದ ಭಾರಿ ಹಾನಿಯಾಗಿದೆ. ಆದ್ದರಿಂದ ಒಂದು ವರ್ಷದ ಗುತ್ತಿಗೆ ನೀಡಲಾಗಿದೆ. ಈ ತಿಂಗಳ ಕೊನೆಗೆ ಆ ಕಂಪೆನಿಯವರು ಕೆಲಸ ಶುರು ಮಾಡುತ್ತಾರೆ ಎಂದು ಅಧಿಕಾರಿ ಎ.ಕೆ.ಸಿನ್ಹಾ ತಿಳಿಸಿದ್ದಾರೆ.[ಮುನಿರಾಬಾದ್ ರೈಲು ನಿಲ್ದಾಣದಲ್ಲಿ ದಂಪತಿಗಳ ಶವ ಪತ್ತೆ]

ನಿಲ್ದಾಣದ ಪ್ರದೇಶ, ಪ್ಲಾಟ್ ಫಾರ್ಮ್, ಕಟ್ಟಡಗಳಲ್ಲಿ ಇಲಿಗಳನ್ನು ಕೊಲ್ಲುವುದಕ್ಕೆ ತಿಂಗಳಿಗೆ 40 ಸಾವಿರ ರುಪಾಯಿ ಖರ್ಚು ಬರುತ್ತದೆ. ಇಲಿಗಳನ್ನು ಕೊಲ್ಲುವುದಕ್ಕಾಗಿಯೇ ಗುತ್ತಿಗೆ ಪಡೆದ ರುಚಿಯಾದ ತಿಂಡಿಗಳನ್ನು ತಯಾರಿಸುತ್ತದಂತೆ. ಅದೂ ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿಗಳ ಪ್ರಕಾರ.
ಇದೇ ರೀತಿ 2013ರಲ್ಲೂ ಇಲಿಗಳನ್ನು ಕೊಲ್ಲಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಸಿಕ್ಕಿರಲಿಲ್ಲ. ಕಳೆದ ವರ್ಷ ಇಲಿಗಳ ಕಾಟಕ್ಕೆ ಕಚೇರಿ ಕಟ್ಟಡ, ಪ್ಲಾಟ್ ಫಾರ್ಮ್ ಮಾರಾಟಗಾರರಿಗೆ 10 ಲಕ್ಷ ರುಪಾಯಿ ಲುಕ್ಸಾನಾಗಿತ್ತು. ಬರೀ ವ್ಯಾಪಾರಿಗಳಿಗಷ್ಟೇ ಅಲ್ಲ, ಪ್ರಯಾಣಿಕರ ಲಗೇಜುಗಳಿಗೂ ಹಾನಿಯಾಗಿತ್ತು. ಪ್ರಯಾಣಿಕರು ಹೇಳುವ ಪ್ರಕಾರ, ಒಂದೊಂದು ಇಲಿಯೂ ಅರ್ಧ ಕೆ.ಜಿ.ಗಿಂತ ತೂಗುವಂತೆ ಕಾಣುತ್ತದೆ.[ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]
ತಿಂಡಿಗಳನ್ನು ಪೊಟ್ಟಣದಿಂದ ತೆಗೆಯುವ ಮುಂಚೆಯೇ ಇಲಿಗಳು ಕಡಿದು ಹಾಕಿರುತ್ತವೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಇಲ್ಲಿನ ತಿಂಡಿ ಮಾರಾಟಗಾರರು. ಮುಖ್ಯವಾದ ಸರ್ಕಾರಿ ಕಡತಗಳನ್ನು ಇಲಿ ತುಂಡುಗಳಾಗಿ ಮಾಡಿದ್ದ ವೇಳೆ, ಅವುಗಳನ್ನೆಲ್ಲ ಒಟ್ಟು ಮಾಡುವುದಕ್ಕೆ ನೌಕರರು ಬೆವರು ಹರಿಸುತ್ತಾರೆ.
ಚಾರ್ ಬಾಗ್ ತುಂಬ ಸುಂದರವಾದ ರೈಲು ನಿಲ್ದಾಣ. ಮೇಲು ಭಾಗದಿಂದ ನೋಡುವುದಕ್ಕೆ ಚದುರಂಗದ ಬೋರ್ಡ್ ನಂತೆ ಕಾಣುತ್ತದೆ. ಕಟ್ಟಡದ ಸ್ತಂಭಗಳು, ಗುಮ್ಮಟ ಆಟದ ಕಾಯಿಗಳಂತೆ ಕಾಣುತ್ತವೆ.[ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಆರಂಭಕ್ಕೆ ಸಚಿವರ ಮನವಿ]
ಇದು ಭಾರತದಲ್ಲೇ ತುಂಬ ಜನನಿಬಿಡ ರೈಲು ನಿಲ್ದಾಣಗಳ ಪೈಕಿ ಒಂದು. 85 ಪ್ರಯಾಣಿಕರ ರೈಲು ಇಲ್ಲಿಂದ ಹೊರಡುತ್ತವೆ. ದೇಶದ ನಾನಾ ಭಾಗಗಳಿಗೆ ಹೋಗುವ 300 ರೈಲುಗಳು ಈ ನಿಲ್ದಾಣದಿಂದಲೇ ತೆರಳುತ್ತವೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications