ಹಠಾತ್ ನಿಂತ ರೈಲು ಬೋಗಿ: ಕೈಯಿಂದಲೇ ತಳ್ಳಿ ಲೂಪ್ ಲೈನ್ಗೆ ತಂದ ಸಿಬ್ಬಂದಿ: Video
ನವದೆಹಲಿ, ಮಾರ್ಚ್ 24: ರೈಲು ಅನಾಹುತಗಳ ಕುರಿತು ನೀವು ಕೇಳಿರುತ್ತೀರಿ. ಅದರ ಅನೇಕ ವಿಡಿಯೋಗಳನ್ನು ನೋಡಿರುತ್ತೀರಿ. ಇದೀಗ ರೈಲ್ವೆ ಸಿಬ್ಬಂದಿಯೇ ಕೆಟ್ಟು ನಿಂತ ರೈಲನ್ನು ಕೈಯಿಂದ ತಳ್ಳಿದ ಅಪರೂಪದ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಹೌದು, ರೈಲ್ವೇ ದುರ್ಘಟನೆಗಳ ಕುರಿತು ಹಲವಾರು ದೃಶ್ಯಗಳು ಮತ್ತು ಸುದ್ದಿಗಳು ದೇಶಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಪದೇ ಪದೆ ಕಾಣಿಸಿಕೊಂಡಿವೆ. ಇತ್ತೀಚೆಗಷ್ಟೇ, ಉತ್ತರ ಪ್ರದೇಶದ ಅಮೇಥಿಯ ವೀಡಿಯೊದಲ್ಲಿ ಕೆಲವು ರೈಲ್ವೇ ಸಿಬ್ಬಂದಿಗಳು ಕೆಟ್ಟುಹೋದ ರೈಲು ಕೋಚ್ ಅನ್ನು ಕೈಯಿಂದ ತಳ್ಳಿದ ಘಟನೆ ನಡೆದಿದೆ.

ಹಠಾತ್ ನಿಂತ ರೈಲ್ವೆ ಬೋಗಿ
ವರದಿ ಪ್ರಕಾರ, ಅಮೇಥಿ ಹೊರವಲಯದಲ್ಲಿ ರೈಲು ಬೋಗಿ (ಇಂಜಿನ್) ಹಠಾತ್ ನಿಲುಗಡೆ ಆಗಿದೆ. ಏನು ಮಾಡಿದರೂ ಮರಳಿ ಆರಂಭವಾಗಿಲ್ಲ. ಇದು ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿತು. ಎಷ್ಟೇ ಪ್ರಯತ್ನ ಪಟ್ಟರೂ ಸಿಬ್ಬಂದಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಕಾರಣ ರೈಲನ್ನು ಸಿಬ್ಬಂದಿ ಕೈಯಿಂದಲೇ ತಳ್ಳಿದರು.
ಈ ಘಟನೆಯಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇಥಿ ರೈಲು ನಿಲ್ದಾಣ ಸಮೀಪ ಈ ರೈಲು ಬೋಗಿ ತಾಂತ್ರಿಕ ಸಮಸ್ಯೆಯ ಸ್ಥಗಿತಗೊಂಡಿತ್ತು. ಹಠಾತ್ ಸ್ಥಗಿತಗೊಂಡಿದ್ದ ರೈಲು ಕೋಚ್ ಮರಳಿ ಚಾಲನೆಗೊಳ್ಳಲಿಲ್ಲ.
ಲೂಪ್ ಟ್ರ್ಯಾಕ್ಗೆ ರೈಲ್ವೆ ಕೋಚ್ ತಳ್ಳಿದ ಸಿಬ್ಬಂದಿ
ಹೀಗಾಗಿ ಹಲವಾರು ರೈಲ್ವೇ ಅಧಿಕಾರಿಗಳು ಕೋಚ್ ಅನ್ನು ಮುಖ್ಯ ಟ್ರ್ಯಾಕ್ನಿಂದ ಲೂಪ್ ಟ್ರ್ಯಾಕ್ಗೆ ನೂಕಿದರು. ಇದರಿಂದ ಮುಖ್ಯ ಟ್ರ್ಯಾಕ್ ನಲ್ಲಿದ್ದ ರೈಲು ಕೋಚ್ ಲೂಪ್ ಟ್ರ್ಯಾಕ್ಗೆ ಬಂದು ಇತರ ರೈಲುಗಳು ಸರಾಗವಾಗಿ ತೆರಳಲು ಅನುಕೂಲವಾಯಿತು.
#WATCH : Railway men made to push train coach after snag in UP's Amethi.
— upuknews (@upuknews1) March 22, 2024
The incident happened in Uttar Pradesh's Amethi where a DPC coach, mainly used by Railway officials for inspection, broke down on the main line near the Nihalgarh Railway Station.#Amethi #IndianRailways… pic.twitter.com/2qlc7nE7f2
ಕೆಲ ರೈಲುಗಳು ವಿಳಂಬ
ವಿಡಿಯೋದಲ್ಲಿ ರೈಲ್ವೆ ಬೋಗಿಯನ್ನು ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಕೈಯಿಂದ ತಳ್ಳುತ್ತಿರುವ ದೃಶ್ಯ ನೀವು ಕಾಣಬಹುದು. ವರದಿಗಳ ಪ್ರಕಾರ ಈ ಘಟಮೆಯು ಉತ್ತರ ಪ್ರದೇಶದ ಅಮೇಥಿ ಜರುಗಿದೆ. ಅಲ್ಲಿ ಡಿಪಿಸಿ ಕೋಚ್ ಅನ್ನು ಹೆಚ್ಚಾಗಿ ರೈಲ್ವೇ ಅಧಿಕಾರಿಗಳು ತಪಾಸಣೆಗೆ ಬಳಸುತ್ತಾರೆ. ನಿಹಾಲ್ಗಢ್ ರೈಲು ನಿಲ್ದಾಣದ ಬಳಿ ಮುಖ್ಯ ಹಳಿಯಲ್ಲಿ ಮುರಿದು ಸಾಮಾನ್ಯ ರೈಲುಗಳಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ವರದಿ ಆಗಿದೆ.
ರೈಲ್ವೆ ಅಧಿಕಾರಿಗಳು ತಪಾಸಣೆಗಾಗಿ ಬಳಸುತ್ತಿದ್ದ ಡಿಪಿಸಿ ರೈಲು ನಿಹಾಲ್ಗಢ್ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಗುರುವಾರ ಕೆಟ್ಟು ಹೋಗಿತ್ತು. ಬಳಿಕ ರೈಲ್ವೆ ನೌಕರರ ಸಹಾಯದಿಂದ ನಿಲ್ದಾಣವರೆಗೆ ತಳ್ಳಿಕೊಂಡು ಬರಲಾಯಿತು. ನಂತರ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಯಿತು ಎಂದು ರೈಲ್ವೇ ಸಂರಕ್ಷಣಾ ಪಡೆ (ಆರ್ಪಿಎಫ್) ಇನ್ಸ್ಪೆಕ್ಟರ್ ಆರ್ಎಸ್ ಶರ್ಮಾ ಅವರು ಮಾಹಿತಿ ನೀಡಿದರು.
ಸಮಗ್ರ ತನಿಖೆಗೆ ಕೋರಿಕೆ
ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಮತ್ತು ಪ್ರದೇಶದ ರೈಲ್ವೆ ಕಾರ್ಯಾಚರಣೆಗಳು ಸುರಕ್ಷಿತ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ದುರಂತವು ರೈಲ್ವೇ ಉದ್ಯಮದಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳು ಮತ್ತು ನಿರ್ವಹಣೆ ಅಗತ್ಯವಿದೆ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಅವರು ಹೇಳಿದರು.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications