ಕೇದಾರನಾಥದತ್ತ 'ಆಮ್ ಆದ್ಮಿ'ಯಂತೆ ಹೊರಟ ರಾಹುಲ್
ಡೆಹ್ರಾಡೂನ್, ಏ.,23: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಕೇದರಾನಾಥ ಯಾತ್ರೆ ಕೈಗೊಂಡಿದ್ದಾರೆ. 'ಆಮ್ ಆದ್ಮಿ' ಅವತಾರದಲ್ಲಿ ರಾಹುಲ್ ಗಾಂಧಿ ಅವರು ಗೌರಿಕುಂಡದಿಂದ ಪಾದಯಾತ್ರೆ ಅಥವಾ ಅವರ ಭಾಷೆಯಲ್ಲಿ ಟ್ರೆಕ್ಕಿಂಗ್ ಕೈಗೊಂಡಿದ್ದಾರೆ.
55-56 ದಿನಗಳ ಕಾಲ ಭಾರತದಿಂದ ಕಣ್ಮರೆಯಾಗಿದ್ದ ರಾಹುಲ್ ಗಾಂಧಿ ಅವರು ಭಾರತಕ್ಕೆ ಬಂದ ಮೇಲೆ ರೈತರ ಸಮಾವೇಶ, ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಿ ಮೋದಿ ಸರ್ಕಾರವನ್ನು ಕಾಡಿದ್ದರು. ಈಗ ಹಿಮಾಲಯದತ್ತ ಮುಖ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.[ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?]
ಯಾತ್ರಾರ್ಥಿ
ರಾಹುಲ್
ಗಾಂಧಿ
ಅವರಿಗೆ
ಕಾಂಗ್ರೆಸ್ನ
ಹಿರಿಯ
ನಾಯಕರಾದ
ಅಂಬಿಕಾ
ಸೋನಿ,
ಉತ್ತರಾಖಂಡ
ಸಿಎಂ
ಹರೀಶ್
ರಾವತ್
ಸೇರಿದಂತೆ
ಹಲವು
ನಾಯಕರು
ಸಾಥ್
ನೀಡಲಿದ್ದಾರೆ
ಎಂದು
ಉತ್ತರಾಖಂಡ್
ಸಿಎಂ
ಅವರ
ಮಾಧ್ಯಮ
ವಕ್ತಾರ
ಸುರೇಂದ್ರ
ಕುಮಾರ್
ಹೇಳಿದ್ದಾರೆ.
[ಕೇದಾರನಾಥ
ಸೃಷ್ಟಿ
ಹೇಗಾಯ್ತು?]
ರಾಹುಲ್ ಗಾಂಧಿ ಯಾತ್ರೆ ವಿವರ
*
ಗುರುವಾರ
ಮುಂಜಾನೆ
ಗೌರಿಕುಂಡ
ಮತ್ತು
ಕೇದಾರನಾಥ
ನಡುವಿನ
16
ಕಿ.ಮೀ
ದೂರವನ್ನು
ಹೆಲಿಕಾಪ್ಟರ್
ಬಳಸದೆ,
ಪಾದಯಾತ್ರೆ
ಮೂಲಕ
ಕ್ರಮಿಸುವುದಾಗಿ
ತಿಳಿಸಿದರು.
*
ಗುರುವಾರ
5
ಕಿ.ಮೀ
ದೂರವನ್ನು
ಕ್ರಮಿಸಿ
ರಾತ್ರಿ
ಲಿಂಚೋಲಿಯಲ್ಲಿ
ತಂಗಲಿದ್ದಾರೆ.
*
ಶುಕ್ರವಾರ
ಮುಂಜಾನೆ
ಪಾದಯಾತ್ರೆ
ಆರಂಭಿಸಿ
ಬೆಳಗ್ಗೆ
8.30ರ
ವೇಳೆಗೆ
ಕೇದಾರನಾಥ
ದೇಗುಲ
ತಲುಪುವ
ನಿರೀಕ್ಷೆಯಿದೆ.
|
ಆಮ್ ಆದ್ಮಿಯಂತೆ ಹೊರಟ ರಾಹುಲ್
ರಾಹುಲ್ ಗಾಂಧಿ ಅವರ ಜೊತೆ ಉತ್ತರಾಖಂಡ್ ಸಿಎಂ ಹರೀಶ್ ರಾವತ್, ಅಂಬಿಕಾ ಸೋನಿ ಸೇರಿದಂತೆ ಇತರರು ಸಾಥ್ ನೀಡಿದ್ದಾರೆ.
|
ಗೌರಿಕುಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ
ಗುರುವಾರ ಮುಂಜಾನೆ ಗೌರಿಕುಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ.
|
ರಾಹುಲ್ ಪಾದಯಾತ್ರೆಗೆ ಪ್ರತ್ಯೇಕ ಹ್ಯಾಶ್ ಟ್ಯಾಗ್
ರಾಹುಲ್ ಪಾದಯಾತ್ರೆಗೆ ಪ್ರತ್ಯೇಕ ಹ್ಯಾಶ್ ಟ್ಯಾಗ್ #RGInKedarnath ಆರಂಭಿಸಿದ ಕಾಂಗ್ರೆಸ್ .. ಕಾಲಕಾಲಕ್ಕೆ ಅಪ್ಡೇಟ್ಸ್ ನೀಡುತ್ತಿದೆ.