Get Updates
Get notified of breaking news, exclusive insights, and must-see stories!

ಮೋದಿ ಸುಳ್ಳು ಹೇಳುತ್ತಿದ್ದಾರೆ: ಚೀನಾ ಭಾರತದ ಭೂಮಿಯನ್ನು ಕಸಿದುಕೊಂಡಿದೆ ಎಂದ ರಾಹುಲ್ ಗಾಂಧಿ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಚೀನಾ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾದ ಪಿಎಲ್‌ಎ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. "ಲಡಾಖ್‌ನ ಒಂದು ಇಂಚು ಕೂಡ ಚೀನಾ ವಶಪಡಿಸಿಕೊಂಡಿಲ್ಲ" ಎಂದು ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

china-occupying-ladakh

"ಲಡಾಖ್ ಒಂದು ಆಯಕಟ್ಟಿನ ಸ್ಥಳ. ಒಂದು ವಿಷಯ ಸ್ಪಷ್ಟವಾಗಿದೆ ಚೀನಾ ಭಾರತದ ಭೂಮಿಯನ್ನು ಕಸಿದುಕೊಂಡಿದೆ. ಲಡಾಖ್‌ನ ಒಂದು ಇಂಚು ಕೂಡ ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಹೇಳಿರುವುದು ಬೇಸರದ ಸಂಗತಿ. ಸುಳ್ಳು"' ಎಂದು ರಾಹುಲ್ ಗಾಂಧಿ ಹೇಳಿದರು. ಕಳೆದ ವಾರದಿಂದ ಲಡಾಖ್‌ನ ಕಾರ್ಗಿಲ್‌ನಲ್ಲಿ ಅವರು ಪ್ರವಾಸದಲ್ಲಿದ್ದು, ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಗಾಂಧಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಶ್ರೀನಗರಕ್ಕೆ ಹೋಗುವಾಗ, ಜನರೊಂದಿಗೆ ಸಂಕ್ಷಿಪ್ತ ಸಂವಾದಕ್ಕಾಗಿ ಅವರು ಡ್ರಾಸ್‌ನಲ್ಲಿ ತಂಗಲಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಗುರುವಾರ ಲಡಾಖ್‌ನ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ "ಪರಿಹರಿಯದ" ಸಮಸ್ಯೆಗಳ ಕುರಿತು ಭಾರತದ ಕಳವಳಗಳನ್ನು ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿಗೆ ತಿಳಿಸಿದರು, ಭಾರತದ ಸಾಮಾನ್ಯೀಕರಣಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ" ಎಂದು ಒತ್ತಿ ಹೇಳಿದರು.

ನಿಮ್ಮ ಮನದ ಮಾತು ಕೇಳಲು ಬಂದಿದ್ದೇನೆ

ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಕೆಲವು ತಿಂಗಳ ಹಿಂದೆ, ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದೇವೆ, ಅದನ್ನು 'ಭಾರತ್ ಜೋಡೋ ಯಾತ್ರೆ' ಎಂದು ಕರೆಯಲಾಯಿತು. ದೇಶದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ನಿಲ್ಲುವುದು ಇದರ ಗುರಿಯಾಗಿತ್ತು. ದ್ವೇಷದ ಅಂಗಡಿಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎನ್ನುವುದು ಯಾತ್ರೆಯ ಸಂದೇಶವಾಗಿತ್ತು. ನಾನು ಇದನ್ನು ಸ್ವತಃ ನೋಡಿದೆ. ಯಾತ್ರೆಯ ಸಮಯದಲ್ಲಿ, ಚಳಿಗಾಲದಲ್ಲಿ ಹಿಮದ ಕಾರಣ ನಾನು ಲಡಾಖ್‌ಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಲಡಾಖ್‌ನಲ್ಲಿ ಯಾತ್ರೆಯನ್ನು ನಡೆಸುವುದು ನನ್ನ ಉದ್ದೇಶವಾಗಿತ್ತು ಮತ್ತು ನಾನು ಅದನ್ನು ಈ ಬಾರಿ ಮೋಟಾರ್‌ಬೈಕ್‌ನಲ್ಲಿ ಮಾಡಿದ್ದೇನೆ" ಎಂದು ಹೇಳಿದರು.

ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, "ನಾಯಕರು ತಮ್ಮ 'ಮನ್ ಕಿ ಬಾತ್' ಮಾಡುವುದರಲ್ಲಿ ನಿರತರಾಗಿದ್ದಾರೆ. ನಾನು ನಿಮ್ಮ 'ಮನ್ ಕಿ ಬಾತ್' ಕೇಳಲು ಯೋಚಿಸಿದೆ. ಒಂದು ವಿಷಯ ಸ್ಪಷ್ಟವಾಗಿದೆ, ಗಾಂಧೀಜಿ ಮತ್ತು ಕಾಂಗ್ರೆಸ್‌ನ ಸಿದ್ಧಾಂತವು ಲಡಾಖ್‌ನ ರಕ್ತ ಮತ್ತು ಡಿಎನ್‌ಎಯಲ್ಲಿದೆ." ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಎರಡು ದಿನಗಳ "ವೈಯಕ್ತಿಕ ಭೇಟಿ" ಗಾಗಿ ಶ್ರೀನಗರವನ್ನು ತಲುಪಲಿದ್ದಾರೆ ಮತ್ತು ಮರುದಿನ ಅವರ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಅಧ್ಯಕ್ಷ ವಿಕಾರ್ ರಸೂಲ್ ವಾನಿ ಶುಕ್ರವಾರ ತಿಳಿಸಿದ್ದಾರೆ.

ಇಬ್ಬರು ಹಿರಿಯ ನಾಯಕರು "ಕುಟುಂಬ ಪ್ರವಾಸ" ದ ಸಮಯದಲ್ಲಿ ಶ್ರೀನಗರದಲ್ಲಿ ಯಾವುದೇ ಪಕ್ಷದ ನಾಯಕರೊಂದಿಗೆ ರಾಜಕೀಯ ಸಭೆಯನ್ನು ಹೊಂದಿರುವುದಿಲ್ಲ ಎಂದು ವಾನಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+