Get Updates
Get notified of breaking news, exclusive insights, and must-see stories!

ಋಷಿಕೇಶದಲ್ಲಿ ರಾಫ್ಟಿಂಗ್ ಸ್ಥಗಿತ: ಅಪಾಯದಮಟ್ಟ ಮೀರಿದ ಗಂಗಾನದಿ

ಋಷಿಕೇಶ ಜೂನ್ 26: ಭಾರೀ ಮಳೆಯಿಂದಾಗಿ ಹರಿದ್ವಾರದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಅಧಿಕಾರಿಗಳು ರಾಫ್ಟಿಂಗ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಎಲ್ಲಾ ಪ್ರವಾಹ ನಿಯಂತ್ರಣ ಚೆಕ್ ಪೋಸ್ಟ್‌ಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿದ್ದು, ಜಿಲ್ಲಾಡಳಿತದ ಅಧಿಕಾರಿಗಳು ರಾತ್ರಿಯಿಡೀ ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಋಷಿಕೇಶ ಸಮೀಪದ ಪೌರಿ, ತೆಹ್ರಿ ಮತ್ತು ಡೆಹ್ರಾಡೂನ್ ಜಿಲ್ಲೆಗಳ ಗಂಗಾನದಿಯಲ್ಲಿ ಮುಂದಿನ ನಿರ್ದೇಶನದವರೆಗೆ ರಾಫ್ಟಿಂಗ್ ಅನ್ನು ಬಂದ್ ಮಾಡಲಾಗಿದೆ.

Rafting activities suspended in Rishikesh: Ganges beyond danger level

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ನರೇಂದ್ರನಗರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ದೇವೇಂದ್ರ ನೇಗಿ ಅವರು ಗರ್ವಾಲ್ ವಿಭಾಗದಲ್ಲಿ ನಿರಂತರ ಮಳೆಯ ಕಾರಣ ರಾಫ್ಟಿಂಗ್ ಮುಂದುವರಿಸುವುದು ಅಪಾಯಕಾರಿ, ಗಂಗಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿವರ್ ರಾಫ್ಟಿಂಗ್ ಮತ್ತು ಸಂಬಂಧಿತ ಸಾಹಸಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಭೀಮಗೋಡ ಬ್ಯಾರೇಜ್ ನದಿ ನೀರಿನ ಮಟ್ಟದ ಅಂಕಿಅಂಶಗಳ ಪ್ರಕಾರ, ಸೋಮವಾರ ಬೆಳಿಗ್ಗೆ 291.80 ಮೀಟರ್‌ಗಳಷ್ಟು ಗಂಗಾನದಿ ಹರಿಯುತ್ತಿದೆ. ಇದು ಎಚ್ಚರಿಕೆಯ ಮಟ್ಟಕ್ಕಿಂತ (293 ಮೀ) ಕೇವಲ 1.20 ಮೀ ಕಡಿಮೆಯಾಗಿದೆ.

ಶನಿವಾರ ತಡರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹರಿದ್ವಾರ ನಗರದ ಕೆಲವು ಭಾಗಗಳು ಜಲಾವೃತಗೊಂಡಿವೆ. ನಗರದ ಜ್ವಾಲಾಪುರ, ಕಂಖಾಲ್, ರಾಣಿಪುರ ಮೌದ್, ರೋಶನಾಬಾದ್ ಮುಂತಾದ ಪ್ರದೇಶಗಳು ಹಾನಿಗೀಡಾಗಿವೆ. ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪುರಾನ್ ಸಿಂಗ್ ರಾಣಾ ಹೇಳಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಜಿಲ್ಲಾ ವಿಪತ್ತು ನಿರ್ವಹಣಾ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

''ಇಂದು ಬೆಳಿಗ್ಗೆಯಿಂದ ಭಾರೀ ಮಳೆಯಾಗಿದೆ. ಇದರಿಂದ ಹಲವೆಡೆ ಜಲಾವೃತವಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸದಿರುವುದು ಇದಕ್ಕೆ ಕಾರಣ. ಅಂಗಡಿಯೊಂದರ ಗಡಿ ಗೋಡೆ ಒಡೆದು ಬಿದ್ದಿದೆ. ನಾವು ಹರಿದ್ವಾರ ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇವೆ ಮತ್ತು ಕೆಲವರ ಮನೆಗಳಿಗೆ ನೀರು ನುಗ್ಗಿದೆ. ನಾವು ಅವರಿಗೆ ಅನಪೇಕ್ಷಿತ ಪರಿಹಾರವನ್ನು ಒದಗಿಸುತ್ತೇವೆ. ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಎಚ್ಚರಿಕೆ ನೀಡಿದೆ. ಹಾನಿಯನ್ನು ಅಂದಾಜಿಸಲಾಗುತ್ತಿದೆ' ಎಂದು ಎಸ್‌ಡಿಎಂ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ನಿವಾಸಿಗಳು, ಮಳೆಯಿಂದಾಗಿ ಗಂಗಾ ನದಿ ಉಕ್ಕಿ ಹರಿಯುತ್ತಿದೆ ಎಂದು ಮನೆ ಕುಸಿದು ಬಿದ್ದ ನಿವಾಸಿಗಳಲ್ಲಿ ಒಬ್ಬರಾದ ಕುಲಭೂಷಣ್ ಭಾರದ್ವಾಜ್ ಬೇಸರ ವ್ಯಕ್ತಪಡಿಸಿದರು. ಚರಂಡಿ ಕಟ್ಟಿಕೊಂಡಿದ್ದರಿಂದ ನೀರು ನಿಂತಿತ್ತು. ನಮ್ಮ ಮನೆಗಳಿಗೆ ನೀರು ನುಗ್ಗಿದೆ. ನಾವು ನಮ್ಮ ಪ್ರವೇಶದ್ವಾರದಲ್ಲಿ ನೀರು ಬಾರದಂತೆ ಹಾಸಿಗೆಗಳನ್ನು ಹಾಕಿದ್ದೇವೆ. ಆದರೆ ಇದು ನಮ್ಮ ಮನೆಗಳಿಗೆ ನೀರು ಪ್ರವೇಶಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದರು.

ಜಲಾವೃತ ಕುರಿತು ಮಾತನಾಡಿದ ಭಾರದ್ವಾಜ್, "ಬೆಳಿಗ್ಗೆ 6 ರಿಂದ 10 ರವರೆಗೆ ಎಲ್ಲಾ ಜನರು ತಮ್ಮ ಮನೆಗಳಿಂದ ನೀರು ತೆಗೆಯುವಲ್ಲಿ ತೊಡಗಿದ್ದರು. ಈಗ ನೀರಿನ ಮಟ್ಟ ಕುಸಿದಿರುವುದರಿಂದ ಜನರು ನಿರಾಳರಾಗಿದ್ದಾರೆ'' ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+