ಕುಲ್ಫಿಯಷ್ಟೇ ತಂಪಾದ ಹಿಮಾಚಲದ ಚೆಲುವೆಯರ ಸೆಲ್ಫಿ!
ದೇಶದಾದ್ಯಂತ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಸ್ವಲ್ಪ ತಂಪೆನಿಸುವಂಥ ಹಿಮಾಚಲದ ಚೆಲುವೆಯರ ಸೆಲ್ಫಿ ಫೋಟೋ ಇಲ್ಲಿದೆ. ಜತೆಗೆ ಇನ್ನೊಂದಿಷ್ಟು ಫೋಟೋ-ಮಾಹಿತಿ ನಿಮಗಾಗಿ
ಬಿಸಿಲ ತಾಪಕ್ಕೆ ದೇಶದಾದ್ಯಂತ ಜನ ಬೆವೆತು, ಬಸವಳಿಯುತ್ತಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ಯುವಕರು ಬಿಸಿಲಿನ ತಾಪದಿಂದ ಬೇಸತ್ತು ಕಾರಂಜಿಯ ತಣ್ಣನೆಯ ನೀರಿನಲ್ಲಿ ತಂಪು ಮಾಡಿಕೊಂಡಿದ್ದಾರೆ. ಪಂಜಾಬ್ ನ ಅಮೃತ್ ಸರ್ ನಲ್ಲಿ ಮಹಿಳೆಯರು ಸೀರೆಯಿಂದ ಮುಖ ಮುಚ್ಚಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಹಿಮಾಚಲ್ ದಿವಸದ ಅಂಗವಾಗಿ ಹಿಮಾಚಲ್ ಪ್ರದೇಶದ ಚೆಲುವೆಯರು ಅಲ್ಲಿನ ಸಾಂಪ್ರದಾಯಿಕ ದಿರಿಸು ತೊಟ್ಟು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ. ಇನ್ನು ಪಂಜಾಬ್ ನಲ್ಲಿ ಬೈಸಾಖಿ ಹಬ್ಬದ ಎರಡನೇ ದಿನ ಪ್ರದರ್ಶಿಸಿರುವ ಸಾಹಸ ಪ್ರದರ್ಶನ ಅದ್ಭುತವಾಗಿದೆ.[ಕೊನೆಗೂ ಪತ್ತೆಯಾಯ್ತು ಏಲಿಯನ್ಸ್ ಪುರಾವೆ: NASA ಹೊಸ ಡಿಸ್ಕವರಿ]
ಪಶ್ಚಿಮ ಬಂಗಾಲದ ಬಿರ್ಭುಮ್ ನ ದ್ವಾರಕದಲ್ಲಿ ಶಿವ ಗಜನ್ ಹಬ್ಬದ ಅಂಗವಾಗಿ ಭಕ್ತರು ನಾಲಗೆಗೆ ಕಂಬಿಗಳನ್ನು ಚುಚ್ಚಿಕೊಂಡಿದ್ದಾರೆ. ಸೋನಿಯಾ ಗಾಂಧಿಯವರ ಅಳಿಯ, ಪ್ರಿಯಾಂಕಾ ಗಾಂಧಿಯ ಗಂಡ ರಾಬರ್ಟ್ ವಾದ್ರಾ ತಮ್ಮ ಜನ್ಮದಿನವನ್ನು ದೆಹಲಿಯ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ, ಆಚರಿಸಿದ್ದಾರೆ. ಒಟ್ಟಾರೆ ದೇಶದ ನಾನಾ ಭಾಗದ ಚಿತ್ರ-ಸುದ್ದಿ ನಿಮ್ಮ ಕಣ್ಣೆದುರು ಇದೆ. ಒಪ್ಪಿಸಿಕೊಳ್ಳಿ

ಹಿಮಾಚಲದ ಚೆಲುವೆಯರು
ಶಿಮ್ಲಾ ಅಂದರೆ ಪುಳಕಗೊಳ್ಳುವ ಮಂದಿ ನಾವು. ಹಿಮಾಚಲ್ ದಿನದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ದಿರಿಸು ಧರಿಸಿ, ಹಣೆಯಲ್ಲಿ ದೊಡ್ಡ ಬೊಟ್ಟು ಇಟ್ಟುಕೊಂಡ ಹೆಣ್ಣುಮಕ್ಕಳು ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ಬೈಸಾಖಿ ಹಬ್ಬದ ಮುಂದುವರಿದ ಸಂಭ್ರಮ
ಬೈಸಾಖಿ ತುಂಬ ದೊಡ್ಡ ಹಬ್ಬ ಅವರಿಗೆ. ಅಂಥ ಬೈಸಾಖಿ ಹಬ್ಬದ ಎರಡನೇ ದಿನ ಅಟ್ಟಾರಿ-ವಾಘಾ ಗಡಿ ಭಾಗದಲ್ಲಿ ಬಿರ್ ಕಾಸ್ಲಾ ಸಿಖ್ ನಿಹಾಂಗ್ಸ್ ಗುಂಪಿನವರು ನೀಡಿದ ಸಾಹಸ ಪ್ರದರ್ಶನ ಇದು.

ಶಿವಗಜನ್ ಹಬ್ಬ
ಶಿವ ಗಜನ್ ಹಬ್ಬದ ಅಂಗವಾಗಿ ಪಶ್ಚಿಮ ಬಂಗಾಲದ ಬಿರ್ಭುಮ್ ಜಿಲ್ಲೆಯ ದ್ವಾರಕದಲ್ಲಿ ಭಕ್ತಾದಿಗಳು ನಾಲಗೆಗೆ ಕಂಬಿಗಳನ್ನು ಚುಚ್ಚಿಕೊಂಡು, ಕಂಡುಬಂದಿದ್ದು ಹೀಗೆ.

ವಾದ್ರಾ ಜನ್ಮದಿನ
ರಾಬರ್ಟ್ ವಾದ್ರಾ ತಮ್ಮ ಜನ್ಮದಿನವನ್ನು ನವದೆಹಲಿಯ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು

ಬಿಸಿಲ ತಾಪದಿಂದ ರಕ್ಷಣೆ
ಪಂಜಾಬ್ ನ ಅಮೃತ್ ಸರ್ ನಲ್ಲಿ ಬಿಸಿಲ ತಾಪದಿಂದ ರಕ್ಷಣೆ ಪಡೆಯಲು ಮಹಿಳೆಯರು ಸೀರೆ ಸೆರಗಿನಿಂದ ಮುಖ ಮುಚ್ಚಿಕೊಂಡಿದ್ದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಸ್ವಚ್ಛ ಭಾರತ ಅಭಿಯಾನದಲ್ಲಿ ಹೇಮಾ ಮಾಲಿನಿ
ಮಥುರಾದಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದಲ್ಲಿ ಸಂಸದೆ-ನಟಿ ಹೇಮಾಮಾಲಿನಿ ಭಾಗವಹಿಸಿದ್ದರು.

ಬಿಸಿಲ ತಾಪಕ್ಕೆ ತಣ್ಣನೆ ನೀರು
ನವದೆಹಲಿಯಲ್ಲಿ ಬಿಸಿಲಿನ ತಾಪ ಭಾರೀ ಹೆಚ್ಚಾಗಿದ್ದು, ಇಂಡಿಯಾ ಗೇಟ್ ಸಮೀಪ ಯುವಕರು ಕಾರಂಜಿಯ ನೀರಿನಲ್ಲಿ ಮೈ ತಣಿಯುವಂತೆ ಮೀಯುತ್ತಿದ್ದರು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications