ಇಸ್ರೋದ ಮತ್ತೊಂದು ಸಾಧನೆಗೆ ನಮ್ಮ ಚಪ್ಪಾಳೆ
ನವದೆಹಲಿ, ಜನವರಿ, 20: ಭಾರತ ಬಾಹ್ಯಾಕೇಶ ಕೇಂದ್ರ ಮತ್ತೊಂದು ಸಾಧನೆ ಮಾಡಿದೆ. ಪಿಎಸ್ ಎಲ್ ವಿ -ಸಿ 31 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟ ಕೇಂದ್ರದಿಂದ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ವಿಜ್ಞಾನಿಗಳು ಪರಿಶೀಲನೆ ನಡೆಸಿ ರಾಕೆಟ್ ಉಡಾವಣೆ ಮಾಡಿದರು. ಭಾರತೀಯ ಪ್ರಾದೇಶಿಕ ನೌಕಾಯಾನಶಾಸ್ತ್ರ ಉಪಗ್ರಹ ವ್ಯವಸ್ಥೆ-1ಇ (ಐಆರ್ ಎನ್ ಎಸ್ ಎಸ್) ಯನ್ನು ಉಪಗ್ರಹ ಹೊತ್ತೊಯ್ದಿದೆ.[ಉಪಗ್ರಹ ಉಡಾವಣೆ: ದೊಡ್ಡೋರೆಲ್ಲ ಇಸ್ರೋ ಬಳಿ ಬರೋದು ಯಾಕೆ?]
ನೌಕಾಯಾನಕ್ಕೆ
ಸಂಬಂಧಿಸಿದ
ಉಪಗ್ರಹ:
ಇಸ್ರೋ
ವಿಜ್ಞಾನಿಗಳು
ನೌಕಾಯಾನ
ವ್ಯವಸ್ಥೆಗೆ
ಸಂಬಂಧಪಟ್ಟ
ಏಳು
ಸರಣಿ
ಉಪಗ್ರಹಗಳನ್ನು
ತಯಾರಿಸಿದ್ದಾರೆ.
ಆ
ಸರಣಿಯ
ಐದನೇ
ಉಪಗ್ರಹವನ್ನು
ಉಡ್ಡಯನ
ಮಾಡಲಾಗಿದೆ.
ಇತರ
ನಾಲ್ಕು
ಉಪಗ್ರಹಗಳಿಗೆ
ಪೂರಕವಾಗಿ
ಪಿಎಸ್
ಎಲ್
ವಿ-ಸಿ
31
ಕೆಲಸ
ಮಾಡಲಿದೆ.
ಈ
ಏಳು
ಸರಣಿ
ಉಪಗ್ರಹಗಳು
ಯಶಸ್ವಿಯಾಗಿ
ಉಡಾವಣೆಗೊಂಡರೆ
ಭಾರತದ
ಶಕ್ತಿ
ಹೆಚ್ಚಾಗುವುದರಲ್ಲಿ
ಅನುಮಾನವಿಲ್ಲ.[ಮುಂದಿನ
ವರ್ಷ
ಮಂಗಳನ
ಮೇಲೆ
'ರಷ್ಯಾ'
ಮಂಗಗಳ
ಸಂಸಾರ]
ಇಸ್ರೋ 2016 ರಲ್ಲಿ ಕೈಗೊಂಡ ಮೊದಲ ಉಪಗ್ರಹ ಯಾನ ಇದಾಗಿದೆ. ಇನ್ನೆರಡು ಉಪಗ್ರಹಗಳನ್ನು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಉಡಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಈ ಮೂಲಕ ಭಾರತ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲಿದೆ.