ಬಜೆಟ್ ಆರ್ಥಿಕತೆಗೆ ಪ್ರೇರಕ: ಬಜೆಟ್ ಅನ್ನು ಕೊಂಡಾಡಿದ ಮೋದಿ
ನವದೆಹಲಿ, ಜನವರಿ 01: ಇಂದು ಮಂಡನೆಯಾದ 2018-2019ರ ಬಜೆಟ್ ಅನ್ನು ಪ್ರಧಾನಿ ಮೋದಿ ಅವರು ಇದೊಂದು ಅಭಿವೃದ್ಧಿ ಪರ ಬಜೆಟ್ ಎಂದು ಬಣ್ಣಿಸಿದ್ದಾರೆ.
ಅಭಿವೃದ್ಧಿಶೀಲ ಬಜೆಟ್ ಮಂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಅಭಿನಂದನೆಗಳು ಎಂದ ಅವರು ಈ ಬಜೆಟ್ ಭಾರತದ ಆರ್ಥಿಕತೆಗೆ ಭಾರಿ ಮುನ್ನಡೆ ದೊರಕಿಸಲಿದೆ ಎಂದರು.
ಅತ್ಯಂತ ದೂರಗಾಮಿ, ಆರ್ಥಿಕತೆ ಉತ್ತೇಜಕ ಹಾಗೂ ಬಡವರ ಪರ ಹಾಗೂ ಆರೋಗ್ಯವಂತ ರಾಷ್ಟ್ರ ಕಟ್ಟಲು ಈ ಬಜೆಟ್ ಪೂರಕವಾಗಿದೆ ಎಂದಿರುವ ಅವರು. 2022 ಅಷ್ಟರಲ್ಲಿ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಲು ಈ ಬಜೆಟ್ ನೆರವಾಗಲಿದೆ ಎಂದಿದ್ದಾರೆ.
ಕೃಷಿ ಪರವಾದ ಯೋಜನೆಗಳನ್ನು ಕೊಂಡಾಡಿದ ಮೋದಿ ಅವರು ಬಜೆಟ್ನಲ್ಲಿ ಕೃಷಿ ವಿಚಾರವಾಗಿ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಿ ವಿಶೇಷ ಆಪರೇಷನ್ ಗ್ರೀನ್ಸ್ ಹೆಸರಿನ ಮೂಲಕ ಶೀಘ್ರವಾಗಿ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಆರ್ಥಿಕತೆಗೆ ವೇಗ
ರೈತರು, ವಿದ್ಯಾರ್ಥಿಗಳು, ಮಧ್ಯಮವರ್ಗ, ಮಹಿಳೆಯರು, ಶೋಷಿತರು, ಹಿರಿಯರು, ವಾಣಿಜ್ಯೋದ್ಯಮಿಗಳು ಹೀಗೆ ಎಲ್ಲರನ್ನೂ ಗಮನದಲ್ಲಿರಿಸಿಕೊಂಡು ಮಂಡಿಸಲಾದ ಈ ಬಜೆಟ್ ಭಾರತದ ಆರ್ಥಿಕತೆಗೆ ವೇಗ ನೀಡಲಿದೆ ಎಂದು ಮೋದಿ ಹೇಳಿದರು.

ಬೆಂಬಲ ಬೆಲೆ
ರೈತರಿಗೆ ಈ ಬಜೆಟ್ ಅತಿ ಹೆಚ್ಚು ಕೊಡುಗೆಗಳನ್ನು ನೀಡಿದೆ ಎಂದ ಅವರು. ಬೆಂಬಲ ಬೆಲೆ, ಕಡಿಮೆ ದರದ ಸಾಲ, ರೈತರ ಕ್ರೆಡಿಟ್ ಕಾರ್ಡ್ ಮೂಲಕ ಸಾಲ. ಎಫ್ಪಿಓ ಗಳನ್ನು ತೆರಿಗೆ ಮಿತಿಯಿಂದ ಹೊರಗಿಟ್ಟಿರುವುದು. ರೈತರ ಉಪಕಸುಬುಗಳಿಗೆ ಆರ್ಥಿಕ ಸಹಾಯ ಇವೆಲ್ಲ ಯೋಜನೆಗಳು ರೈತರ ಆದಾಯವನ್ನು ಹೆಚ್ಚಿಸಲಿವೆ ಎಂದರು.

ವಿಶ್ವದ ದೊಡ್ಡ ಆರೋಗ್ಯ ಯೋಜನೆ
ಕುಟುಂಬದ ವರ್ಷದ 5 ಲಕ್ಷದ ವರೆಗಿನ ಆರೋಗ್ಯವ ವೆಚ್ಚವನ್ನು ಸರ್ಕಾರವೇ ಭರಿಸುವ ಭಾರತ್ ಆಯುಷ್ಮಾನ್ ಯೋಜನೆಯನ್ನು ಕೊಂಡಾಡಿದ ಮೋದಿ. ಮಧ್ಯಮ ವರ್ಗ ಮತ್ತು ಬಡವರ ಚಿಂತೆಯನ್ನು ಇದು ದೂರ ಮಾಡಲಿದೆ ಎಂದರು. ಆಯುಷ್ಮಾನ್ ಯೋಜನೆ ಇಡೀಯ ವಿಶ್ವದಲ್ಲೆ ಸರ್ಕಾರವೊಂದು ನೀಡುತ್ತಿರುವ ಅತಿ ದೊಡ್ಡ ಆರೋಗ್ಯ ಯೋಜನೆ ಇದು ಎಂದು ಹೊಗಳಿದ್ದಾರೆ.

ವಿದ್ಯಾರ್ಥಿಗಳಿಗೆ ಮತ್ತು ಆರೋಗ್ಯಕ್ಕೆ ಪೂರಕ
ಮೂರು ಲೋಕಸಭಾ ಸ್ಥಾನಗಳಿರುವ ಜಾಗದಲ್ಲಿ ಒಂದು ವೈದ್ಯಕೀಯ ಆಸ್ಪತ್ರೆ ಸ್ಥಾಪಿಸುವ ಯೋಜನೆಯ ಬಗ್ಗೆಯೂ ಮಾತನಾಡಿದ ಮೋದಿ ಅವರು ಇದೊಂದು ಅತ್ಯುತ್ತಮ ಯೋಜನೆ. ಬಡ, ಮಧ್ಯಮ ವರ್ಗದವರಿಗೆ ಹತ್ತಿರಲ್ಲಿ ಮೆಡಿಕಲ್ ಕಾಲೇಜು ಶಿಕ್ಷಣ ಸಿಗುವ ಜೊತೆಗೆ ಸ್ಥಳೀಯರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತವೆ ಎಂದರು.

ಮೇಕ್ ಇನ್ ಇಂಡಿಯಾಕ್ಕೆ ಪೂರಕ
ಒಟ್ಟಾರೆ ಬಜೆಟ್ ಸರ್ಕಾರದ ಗುರಿಗಳಿಗೆ ಪೂರಕವಾಗಿದ್ದು, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ಭೇಟಿ ಪಡಾವೊ ಭೇಟಿ ಬಚಾವೊ, ಮುಂತಾದ ಘೋಷಣೆಗಳಿಗೆ ಉತ್ತೇಜನೆ ನೀಡುವಂತಹಾ ಬಜೆಟ್ ಇದಾಗಿದೆ ಈ ಬಜೆಟ್ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಲಿದೆ ಎಂದು ಮೋದಿ ಹೊಗಳಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications