ರೈತರ ಪರ ಧ್ವನಿ ಎತ್ತಿದ್ದ ರಿಹಾನ ಟಾಪ್ ಲೆಸ್ ಫೋಟೋ: ಕೊರಳಲ್ಲಿ ಗಣೇಶನ ಪದಕ
ಬಾರ್ಬಡೋಸ್ ಮೂಲದ ಪಾಪ್ ಗಾಯಕಿ ರಿಹಾನ ಇದ್ದಕ್ಕಿದ್ದಂತೆಯೇ ಭಾರತದಲ್ಲಿ ಫೇಮಸ್ ಆಗಿದ್ದು ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ನಂತರ.
ಈಕೆಯ ರೈತರ ಪರ ಟ್ವೀಟ್ ದೇಶದಲ್ಲಿ ಭಾರೀ ಪರವಿರೋಧ ಚರ್ಚೆಗೆ ಗುರಿಯಾಗಿತ್ತು. ಬಣ್ಣದಲೋಕ ಕೂಡಾ ಈ ವಿಚಾರದಲ್ಲಿ ಇಬ್ಬಗೆಯ ನಿಲುವನ್ನು ತಾಳಿತ್ತು. ನಮ್ಮ ದೇಶದ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕೆಲವು ಸೆಲೆಬ್ರಿಟಿಗಳು ವಾದಿಸಿದರೆ, ಆಕೆ ಧ್ವನಿ ಎತ್ತಿದರೆ ತಪ್ಪೇ ಎಂದು ಕೆಲವರು ಸಮರ್ಥಿಸಿಕೊಂಡಿದ್ದರು.
ಇನ್ನು, ರೈತರ ಪರ ಹೋರಾಟಕ್ಕೆ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಂಬಂಧಿಕರು ಧ್ವನಿ ಎತ್ತಿದ್ದರು. ಆದರೆ, ಇದುವರೆಗೆ ರೈತರು ಮತ್ತು ಕೇಂದ್ರ ಸರಕಾರದ ನಡುವಿನ ಮಾತುಕತೆ ಯಾವುದೇ ಫಲ ನೀಡದೇ ಇರುವುದರಿಂದ ಹೋರಾಟ ಮುಂದುವರಿದಿದೆ.
ಈ ನಡುವೆ, ಗಾಯಕಿ ರಿಹಾನ ಟಾಪ್ ಲೆಸ್ ಫೋಟ್ ಒಂದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ. ಅವರ ಸಾಮಾಜಿಕ ಖಾತೆಯಲ್ಲಿ ಏನಾದರೂ ಹಾಕಿಕೊಳ್ಳಲಿ, ಅದು ಅವರ ವೈಯಕ್ತಿಕ ವಿಚಾರ. ಆದರೆ, ವಿಷಯ ಅದಲ್ಲಾ..
|
ಟಾಪ್ ಲೆಸ್ ಫೋಟೊ
ರಿಹಾನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟಾಪ್ ಲೆಸ್ ಫೋಟೊ ಒಂದನ್ನು ಹಾಕಿಕೊಂಡಿದ್ದಾರೆ. ಎದೆಭಾಗವನ್ನು ಕೈಯಲ್ಲಿ ಮುಚ್ಚಿಕೊಂಡಿರುವ ರಿಹಾನ, ಕೊರಳಿಗೆ ತಾನು ಹಾಕಿಕೊಂಡಿರುವ ಸರಕ್ಕೆ ಗಣೇಶನ ಪೆಂಡೆಂಟ್ ಹಾಕಿಕೊಳ್ಳುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.

ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ
ಈಕೆಯ ಟ್ವೀಟ್ ಸ್ವಾಭಾವಿಕವಾಗಿ ಅಸಂಖ್ಯಾತ ಹಿಂದೂಗಳನ್ನು ಕೆರಳಿಸಿದೆ. ಇನ್ನು, ಹಿಂದೂ ಧರ್ಮೀಯರ ಭಾವನೆಗೆ ಈಕೆ ಧಕ್ಕೆ ತಂದಿದ್ದಾರೆಂದು ಮುಂಬೈ ಮತ್ತು ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ತಾಣದಲ್ಲಿ ಈಕೆಯ ಫೋಟೋಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಸೇವೇಜ್ ಎಕ್ಸ್ ಫೆಂಟಿ ಲಿಂಗೆರಿ ಬ್ರಾಂಡ್
ಸೇವೇಜ್ ಎಕ್ಸ್ ಫೆಂಟಿ ಲಿಂಗೆರಿ ಬ್ರಾಂಡಿಗಾಗಿ ತೆಗೆದ ಫೋಟೊ ಶೂಟೌಟ್ ಇದಾಗಿದೆ. ಟ್ವಿಟ್ಟರ್ ನಲ್ಲಿ ಈ ಫೋಟೋಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಿಮ್ಮ ಕೀಳು ಅಭಿರುಚಿಗೆ ನಮ್ಮ ಧರ್ಮವೇ ಬೇಕೇ, ಯಾಕೆ ನಮ್ಮ ಧರ್ಮ, ಭಾವನೆ, ನಂಬಿಕೆಗಳ ಜೊತೆ ಆಟವಾಡುತ್ತಿದ್ದೀರಿ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.
|
ಇದೊಂದು ಪೆಂಡೆಂಟ್ ಆಗಿರಬಹುದು, ಆದರೆ ನಮಗೆ ಗಣೇಶ ದೇವರು
"ನಮ್ಮ ಧರ್ಮದ ಬಗ್ಗೆ ಕೀಳಾಗಿ ಕಾಮೆಂಟ್ ಮಾಡುವುದನ್ನು ನೋಡಿ ಸಾಕಾಗಿ ಹೋಗಿದೆ. ಇದನ್ನು ಪ್ರತಿಭಟಿಸಿದರೆ ಹಿಂದೂ ತೀವ್ರವಾದಿಗಳು ಎಂದು ನಮ್ಮನ್ನು ಜರಿಯಲಾಗುತ್ತದೆ. ಆಕೆಗೆ ಇದೊಂದು ಪೆಂಡೆಂಟ್ ಆಗಿರಬಹುದು, ಆದರೆ ನಮಗೆ ಗಣೇಶ ದೇವರು"ಎನ್ನುವ ಟ್ವೀಟ್.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications