"ಮತ್ತೊಂದು ವಿಧಾನದ ರಾಜಕೀಯ": ಬಿಬಿಸಿ ಸಾಕ್ಷ್ಯಚಿತ್ರ ಟೀಕಿಸಿದ ಎಸ್ ಜೈಶಂಕರ್
ಬಿಬಿಸಿ ಸಾಕ್ಷ್ಯಚಿತ್ರವನ್ನು 'ಮತ್ತೊಂದು ವಿಧಾನದ ರಾಜಕೀಯ' ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕರೆದಿದ್ದಾರೆ.
ನವದೆಹಲಿ ಫೆಬ್ರವರಿ 21: ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಹೇಳಿಕೆ ನೀಡಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರವನ್ನು 'ಮತ್ತೊಂದು ವಿಧಾನದ ರಾಜಕೀಯ' ಎಂದು ಅವರು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿನ ನಿರೂಪಣೆಯನ್ನು ಅವರು ಖಂಡಿಸಿದ್ದಾರೆ.
"ಇದು ಇತರ ವಿಧಾನಗಳಿಂದ ಮಾಡುವ ರಾಜಕೀಯವಾಗಿದೆ" ಎಂದು ಪಿಎಂ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಮತ್ತು ಬಿಲಿಯನೇರ್ ಜಾರ್ಜ್ ಸೊರೊಸ್ ಅವರ ಟೀಕೆಗೆ ಸಂಬಂಧಿಸಿದ ಪ್ರಶ್ನೆಗೆ ಡಾ.ಜೈಶಂಕರ್ ಪ್ರತಿಕ್ರಿಯಿಸಿದರು.

"ನೀವು ಡಾಕ್ಯುಮೆಂಟರಿ ಮಾಡಬೇಕಾ? ದೆಹಲಿಯಲ್ಲಿ 1984 ರಲ್ಲಿ ಅನೇಕ ಘಟನೆಗಳು ನಡೆದಿವೆ. ಆ ಬಗ್ಗೆ ನಾವು ಏಕೆ ಸಾಕ್ಷ್ಯಚಿತ್ರವನ್ನು ನೋಡಲಿಲ್ಲ? ಅಂದರೆ ಇದು ಆಕಸ್ಮಿಕವಾಗಿ ಮಾಡಿದ ಸಾಕ್ಷ್ಯಚಿತ್ರ ಎಂದು ನೀವು ಭಾವಿಸುತ್ತೀರಾ? ನಾನು ಇದನ್ನು ನಂಬುವುದಿಲ್ಲ. ಇದೊಂದು ಬೇರೆ ರೀತಿಯ ರಾಜಕೀಯ'' ಎಂದು ಸಚಿವರು ಹೇಳಿದರು. ಕೆಲವೊಮ್ಮೆ, ಭಾರತದ ರಾಜಕೀಯ ಅದರ ಗಡಿಯಲ್ಲಿ ಹುಟ್ಟಿಕೊಂಡಿಲ್ಲ, ಆದರೆ ಹೊರಗಿನಿಂದ ಬಂದಿದೆ ಎಂದು ಶ್ರೀ ಜೈಶಂಕರ್ ಟೀಕಿಸಿದರು.
ಬಿಬಿಸಿ ಸಾಕ್ಷ್ಯಚಿತ್ರದಲ್ಲಿ 2002 ರ ಗಲಭೆಗಳನ್ನು ತಡೆಯಲು ಪಿಎಂ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಯಾವುದೇ ಕೆಲಸ ಮಾಡಿಲ್ಲ ಎಂಬ ಆರೋಪಗಳಿವೆ. 'ಭಾರತದ ಬಗ್ಗೆ, ಸರ್ಕಾರದ ಬಗ್ಗೆ ನೀವು ಹೇಗೆ ಚಿತ್ರಣವನ್ನು ರೂಪಿಸುತ್ತೀರಿ? ಇದು ಒಂದು ದಶಕದಿಂದ ಮಾಡಿದ ಯೋಜನೆಯಾಗಿದೆ' ಎಂದು ಡಾ ಜೈಶಂಕರ್ ಹೇಳಿದರು. ವಿದೇಶಗಳಲ್ಲಿ ಇಂತಹ ಕಥೆಗಳ ಹಿಂದೆ ಭಾರತ ವಿರೋಧಿ ಅಜೆಂಡಾವನ್ನು ಮುಂದುವರಿಸುವ ಉದ್ದೇಶವಿದೆ ಎಂದು ಅವರು ಹೇಳಿದರು. ಇದು ಜಾಗತೀಕರಣಗೊಂಡ ಜಗತ್ತು, ಆ ಜನರು ಇಲ್ಲಿ ರಾಜಕೀಯ ಮಾಡಲು ಬರುತ್ತಾರೆ. ಅದಕ್ಕೆ ಅವಕಾಶಗಳನ್ನು ನೀಡುವುದು ಬೇಡ ಎಂದರು.

"ನಾವು ಕೇವಲ ಸಾಕ್ಷ್ಯಚಿತ್ರ ಅಥವಾ ಯುರೋಪಿಯನ್ ನಗರದಲ್ಲಿ ಯಾರೋ ಮಾಡಿದ ಭಾಷಣವನ್ನು ಅಥವಾ ಎಲ್ಲೋ ಒಂದು ಪತ್ರಿಕೆಯ ಸಂಪಾದನೆಗಳನ್ನು ಚರ್ಚಿಸುತ್ತಿಲ್ಲ. ನಾವು ಚರ್ಚಿಸುತ್ತಿದ್ದೇವೆ ವಾಸ್ತವವಾಗಿ ರಾಜಕೀಯವನ್ನು. ಈ ರಾಜಕೀಯವನ್ನು ಮಾಧ್ಯಮದಂತೆ ತೋರಿಸಲಾಗುತ್ತಿದೆ. ಇದೊಂದು 'ಇತರ ವಿಧಾನಗಳಿಂದ ರಾಜಕೀಯ ಯುದ್ಧ. ಇದು ಇನ್ನೊಂದು ವಿಧಾನದಿಂದ ಮಾಡಲಾಗುತ್ತಿರುವ ರಾಜಕೀಯ" ಎಂದು ಹೇಳಿದರು. ಜೊತೆಗೆ ಇದರ ಹಿಂದಿರುವವರು ರಾಜಕೀಯ ಕ್ಷೇತ್ರಕ್ಕೆ ಬರಲಿ ಎಂದು ಸವಾಲು ಹಾಕಿದರು.
"ರಾಜಕೀಯ ಕ್ಷೇತ್ರಕ್ಕೆ ಬರಲು ಧೈರ್ಯವಿಲ್ಲದ ಜನರು ಮಾಡುವ ರಾಜಕೀಯ ಇದು. ಅವರು ರಾಜಕೀಯ ಮಾಡುತ್ತಿದ್ದಾರೆ" ಎಂದು ಜೈಶಂಕರ್ ಕಿಡಿ ಕಾರಿದರು.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications