ಶಬರಿಮಲೆ ದೇವಸ್ಥಾನಕ್ಕೆ ಐಸಿಸ್ ಉಗ್ರರ ಭೀತಿ
ತಿರುವನಂತಪುರಂ, ನವೆಂಬರ್ 27: ಶಬರಿಮಲೆ ದೇವಸ್ಥಾನದಲ್ಲಿ ದಾಳಿ ನಡೆಸುವುದಾಗಿ ಐಸಿಸ್ ಉಗ್ರರು ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕೇರಳದ ಜಿಹಾದಿ ಗುಂಪುಗಳು ದೇವಸ್ಥಾನದ ನೀರಿಗೆ, ಆಹಾರಕ್ಕೆ ವಿಷ ಹಾಕಬಹುದು ಎಂದು ಮುನ್ನೆಚ್ಚರಿಕೆಯಲ್ಲಿ ತಿಳಿಸಲಾಗಿದೆ. ಜತೆಗೆ ಭಕ್ತರ ಮೇಲೆ ದಾಳಿ ನಡೆಸುವ ಸಾಧ್ಯತೆಗಳೂ ಇವೆ. ಹೀಗಾಗಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಲಾಗಿದೆ.

ಇತ್ತೀಚೆಗೆ ಕೇರಳ ಐಸಿಸ್ ಜಾಲದ ಮುಖ್ಯಸ್ಥ ರಶೀದ್ ಅಬ್ದುಲ್ಲಾ ಆಡಿಯೋ ಬಿಡುಗಡೆಯಾಗಿತ್ತು. ಈ 10 ನಿಮಿಷಗಳ ಆಡಿಯೋದಲ್ಲಿ ವಿವಿಧ ರೀತಿಯ ದಾಳಿಗಳನ್ನು ನಡೆಸುವಂತೆ ಆತ ಹೇಳಿದ್ದ. ತ್ರಿಶೂರಿನ ಪೂರಂ ಹಬ್ಬ ಮತ್ತು ಕುಂಭ ಮೇಳದಲ್ಲಿ ಆಹಾರಕ್ಕೆ ವಿಷವಿಕ್ಕುವಂತೆ ಆತ ಜಿಹಾದಿಗಳಿಗೆ ಕರೆ ನೀಡಿದ್ದ.
ಅಲ್ಲದೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಐಸಿಸ್ ಉಗ್ರರು ದಾಳಿ ನಡೆಸುವಂತೆ ಟ್ರಕ್ ಹರಿಸಿ ದಾಳಿ ನಡೆಸುವಂತೆ ಆತ ಆಡಿಯೋದಲ್ಲಿ ತಿಳಿಸಿದ್ದ.












Click it and Unblock the Notifications