ಗುಜರಾತ್ ಚುನಾವಣೆಗೂ ಮುನ್ನವೇ ಪ್ರಧಾನಿ ಮೋದಿ ಕೇದಾರನಾಥ-ಬದರಿನಾಥ ದೇವಸ್ಥಾನಕ್ಕೆ ಭೇಟಿ
ನವದೆಹಲಿ, ಅಕ್ಟೋಬರ್ 14: ದೀಪಾವಳಿ ಹಬ್ಬ ಆಚರಣೆಯ ಮುನ್ನವೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 21ರಂದು ಬದರಿನಾಥ್ ಮತ್ತು ಕೇದಾರನಾಥ ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಿದ್ಧತೆ ಆರಂಭಿಸಿದೆ. ಇನ್ನು ಗುಜರಾತ್ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಕೇದಾರನಾಥ-ಬದರಿನಾಥಕ್ಕೆ ಭೇಟಿ ನೀಡುತ್ತಿರುವುದು ಮತ್ತುಷ್ಟು ಕುತುಹಲ ಮೂಡಿಸಿದೆ. ಪ್ರಧಾನಿ ಮೋದಿ ಹಿಮಾಲಯ ದೇವಾಲಯಗಳಿಗೆ ಭೇಟಿ ನೀಡುವ ಬಗ್ಗೆ ಅಧಿಕಾರಿಗಳು ಮೌನವಾಗಿದ್ದರೂ, ಮೋದಿ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಅಲ್ಲಿ ನಡೆಯುತ್ತಿರುವ ಪುನರ್ನಿರ್ಮಾಣ ಯೋಜನೆಗಳನ್ನು ಪರಿಶೀಲಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೊದಲು ಕೇದಾರನಾಥದಲ್ಲಿ ಪೂಜೆ ಸಲ್ಲಿಸಿ, ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ಬದರಿನಾಥ ದೇಗುಲಕ್ಕೆ ಭೇಟಿ ನೀಡಿ, ಬದರಿನಾಥ ಮಹಾಯೋಜನೆಯಡಿ ನಡೆಯುತ್ತಿರುವ ಯೋಜನೆಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.
ಗ್ರಾಮಸ್ಥರು
ಮತ್ತು
ಯೋಧರೊಂದಿಗೆ
ಸಂವಾದ
ಪ್ರಧಾನಿಯವರು
ಮೊದಲು
ಕೇದಾರನಾಥದಲ್ಲಿ
ಪೂಜೆ
ಸಲ್ಲಿಸಲಿದ್ದು
ಅಲ್ಲಿ
ನಡೆಯುತ್ತಿರುವ
ಅಭಿವೃದ್ಧಿ
ಕಾಮಗಾರಿಯನ್ನು
ಪರಿಶೀಲಿಸಲಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ಇದಾದ
ಬಳಿಕ
ಪ್ರಧಾನಿ
ಬದರಿನಾಥ
ದೇಗುಲಕ್ಕೆ
ಭೇಟಿ
ನೀಡಿ
ಬದರಿನಾಥ
ಮಹಾಯೋಜನೆಯಡಿ
ನಡೆಯುತ್ತಿರುವ
ಯೋಜನೆಗಳ
ಪರಿಶೀಲನೆ
ನಡೆಸಲಿದ್ದಾರೆ.
ಮೋದಿ
ಬಹುಶಃ
ಗಡಿ
ಗ್ರಾಮವಾದ
ಮಾನಾಗೆ
ಭೇಟಿ
ನೀಡಲಿದ್ದಾರೆ
ಮತ್ತು
ಗ್ರಾಮಸ್ಥರು
ಮತ್ತು
ಯೋಧರೊಂದಿಗೆ
ಸಂವಾದ
ನಡೆಸಲಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ಕಳೆದ
ವಾರದಿಂದ
ಮೋದಿ
ಭೇಟಿಗೆ
ಸಿದ್ಧತೆಗಳು
ನಡೆಯುತ್ತಿವೆ
ಎಂದು
ವರದಿಯಾಗಿದೆ.