Get Updates
Get notified of breaking news, exclusive insights, and must-see stories!

ಉಸ್ತಾದ್ ದಾಗರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ, ಆಗಸ್ಟ್ 01: ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗಿತಕ್ಕೆ ಅವರು ನೀಡಿರುವ ಕೊಡುಗೆ ಪೀಳಿಗೆಗಳವರೆಗೆ ಸ್ಮರಿಸಲಾಗುತ್ತದೆ.

PM Modi condoles the demise of Ustad Hussain Sayeeduddin Dagar

'ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ಸಂಗೀತದಿಂದ ಭಾರತ ಮತ್ತು ವಿಶ್ವದಾದ್ಯಂತ ಜನ ಉತ್ಸಾಹಭರಿತರಾಗಿದ್ದರು, ಅವರು ಸಂಗೀತೋತ್ಸಾಹಿಗಳಿಗೆ ಸ್ಫೂರ್ತಿಯಾಗಿದ್ದರು' ಎಂದು ಪ್ರಧಾನಿ ತಿಳಿಸಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್(78) ಅವರಿಗೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ತಡರಾತ್ರಿ 12:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ದ್ರುಪದ್ ಗಾಯನದಲ್ಲಿ ಖ್ಯಾತಿ ಗಳಿಸಿದ್ದ ಉಸ್ತಾದ್ ಸಯೀದುದ್ದೀನ್ ಅವರು1948ರಿಂದ ಅವರು ಪುಣೆಯಲ್ಲಿ ನೆಲೆಸಿದ್ದರು. ಉಸ್ತಾದ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+