PKL 2025: ಡಿಡಿಕೆಸಿ ತಂಡದಿಂದ ಹೊಸ ಜರ್ಸಿ ಅನಾವರಣ! ಹೇಗಿದೆ?
ಪ್ರೋ ಕಬಡ್ಡಿ ಲೀಗ್ ಸೀಸನ್ನಲ್ಲಿ ದಬಾಂಗ್ ದೆಹಲಿ ಕೆ.ಸಿ. (ಡಿಡಿಕೆಸಿ) ತಂಡವು ವಿಶಿಷ್ಟ ಹಸಿರು ಜೆರ್ಸಿಯನ್ನು ಧರಿಸುವ ಮೂಲಕ ಪಿಕೆಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ. ಕ್ರೀಡಾಂಗಣದ ಕಬಡ್ಡಿ ಕ್ಷಣಗಳನ್ನು ನೈಜ ಪರಿಸರ ಕ್ರಮಗಳೊಂದಿಗೆ ಸಂಪರ್ಕಿಸುವ ಈ ನೂತನ ಪ್ರಯತ್ನ ತಂಡದ ಹಸಿರು ಭವಿಷ್ಯದತ್ತದ ನಿಜವಾದ ಬದ್ಧತೆಯನ್ನು ಈ ಜೆಸಿ ಪ್ರತಿಬಿಂಬಿಸುತ್ತದೆ ಎಂದು ತಂಡವು ಹೇಳಿಕೊಂಡಿದೆ.
'ರೇಡ್ ಫಾರ್ ಗ್ರೀನ್' ಅಭಿಯಾನದಡಿಯಲ್ಲಿ ದಬಾಂಗ್ ದೆಹಲಿ ಕೆ.ಸಿ. ಪ್ರತಿ ಯಶಸ್ವಿ ರೇಡ್ ಪಾಯಿಂಟ್ನಿಂದ ನೈಜ ಬದಲಾವಣೆಯ ಪರಿಣಾಮ ಉಂಟಾಗುತ್ತದೆ. ಪ್ರತಿ ಯಶಸ್ವಿ ರೇಡ್ ನಂತರ, ಎನ್ಸಿಆರ್ ಪ್ರದೇಶದ ಹೆಚ್ಚಿನ ಮಾಲಿನ್ಯ ಮತ್ತು ಕಡಿಮೆ ಹಸಿರು ಆವರಣವಿರುವ ಪ್ರದೇಶಗಳಲ್ಲಿ ಒಂದು ಮರವನ್ನು ನೆಡಲಾಗುತ್ತದೆ. ಈಗಾಗಲೇ ದಬಾಂಗ್ ದೆಹಲಿ ಕೆ.ಸಿ. ತಂಡವು 295 ಮರಗಳನ್ನು ನೆಟ್ಟಿದೆ. ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಮುಂದಾಗಿದೆ.

ಈ ಅಭಿಯಾನ ಅಭಿಮಾನಿಗಳನ್ನು ಹಸಿರು ಚಳುವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸಲು ಉದ್ದೇಶಿಸಿದೆ. "ಗ್ರೀನ್ ಫ್ಯಾನ್ ಆಫ್ ದಿ ಮ್ಯಾಚ್' ವಿಭಾಗದಡಿ ತಮ್ಮ ವೈಯಕ್ತಿಕ ಪರಿಸರ ಸ್ನೇಹಿ ಕ್ರಮಗಳನ್ನು ಹಂಚಿಕೊಳ್ಳುವ ಅಭಿಮಾನಿಗಳನ್ನು ಗೌರವಿಸಲಾಗುತ್ತದೆ. ದೆಹಲಿ ಹಂತದ ಮೊದಲ ಪಂದ್ಯದಲ್ಲಿ "ಗ್ರೀನ್ ಗೇಮ್ ಫಾರ್ ದಿ ಕ್ಲೈಮೇಟ್' ಆಯೋಜಿಸಲಾಗಿತ್ತು, ಇದರಲ್ಲಿ ನೈಜ ಸಮಯದ ಹಸಿರು ಮೆಟ್ರಿಕ್ಗಳು ಮತ್ತು ಅಭಿಮಾನಿಗಳ ಪ್ರತಿಜ್ಞೆಗಳು ಪ್ರದರ್ಶಿಸಲಾಗಿದೆ.
ಈ ಕುರಿತು ಮಾತನಾಡಿದ ದಬಾಂಗ್ ದೆಹಲಿ ಕೆ.ಸಿ. ಸಿಇಒ ಪ್ರಶಾಂತ್ ಮಿಶ್ರ ಅವರು, "ದಬಾಂಗ್ ದೆಹಲಿ ಕೆ.ಸಿ.ಯಲ್ಲಿ ನಾವು ಕ್ರೀಡೆಯ ಶಕ್ತಿ ಕ್ರೀಡಾಂಗಣದ ಮಿತಿಯನ್ನು ಮೀರಿ ಸಮಾಜದ ಒಳಿತಿಗೆ ಕೂಡ ಬಳಸಬಹುದು ಎಂಬುದನ್ನು ತೋರಿಸಿದ್ದೇವೆ. ಪ್ರತಿ ರೇಡ್, ಪ್ರತಿ ಚೀರಾಟ, ಮತ್ತು ಪ್ರತಿ ಅಭಿಮಾನಿಯ ಕ್ರಮವು ಸ್ವಚ್ಛ ಹಾಗೂ ಹಸಿರು ನಾಳೆಯ ನಿರ್ಮಾಣಕ್ಕೆ ಸಹಕಾರ ನೀಡುತ್ತದೆ. ಈ ಹಸಿರು ಜೆರ್ಸಿ ಕೇವಲ ಬಣ್ಣವಲ್ಲ, ಅದು ಹವಾಮಾನ ಸಕಾರಾತ್ಮಕ ಬದಲಾವಣೆಯತ್ತ ನಮ್ಮ ಬದ್ಧತೆಯ ಪ್ರತೀಕವಾಗಿದೆ ಎಂದರು.
ನಿನ್ನೆ ನಡೆದ ರೋಚಕ ಪಂದ್ಯದಲ್ಲಿ, ದಬಾಂಗ್ ದೆಹಲಿ ಕೆ.ಸಿ. ತಂಡವು ಪುಣೆರಿ ಪಲ್ಟನ್ ವಿರುದ್ಧ ತಮ್ಮ ವಿಶೇಷ ಹಸಿರು ಜೆರ್ಸಿಯಲ್ಲಿ ಮೈದಾನಕ್ಕಿಳಿದು ಹಸಿರು ಭವಿಷ್ಯದತ್ತದ ತಮ್ಮ ಬದ್ಧತೆಯನ್ನು ತೋರಿಸಿತು. ನಾಯಕ ಅಶು ಮಲಿಕ್ ಗೈರುಹಾಜರಿದ್ದರೂ, ದೆಹಲಿ ತಂಡದ ರೇಡರ್ಗಳು ಅದ್ಭುತ ತಂಡ ನಿಶ್ಚಯತೆಯನ್ನು ಪ್ರದರ್ಶಿಸಿದರು. ಅಜಿಂಕ್ಯ ಪವಾರ್ ಶ್ರೇಷ್ಠ "ಸೂಪರ್ 10' ದಾಖಲಿಸಿ ಮುನ್ನಡೆಸಿದರು. ದಬಾಂಗ್ ದೆಹಲಿ ಕೆ.ಸಿ. ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಮಾದರಿಯನ್ನು ನಿರ್ಮಿಸಲು ಉದ್ದೇಶಿಸಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD









Click it and Unblock the Notifications