Piyush Pandey: ಪದ್ಮಶ್ರೀ ಪುರಸ್ಕೃತ & ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ಇನ್ನಿಲ್ಲ
ಜಾಹೀರಾತು ಲೋಕ ಲಕ್ಷ ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತೆ, ಜಗತ್ತಿನಲ್ಲೇ ಅತಿದೊಡ್ಡ ಕ್ಷೇತ್ರಗಳಲ್ಲಿ ಜಾಹೀರಾತು ಲೋಕ ಕೂಡ ಒಂದಾಗಿದೆ. ಭಾರತದಲ್ಲೂ ಆಡ್ ಬ್ಯುಸಿನೆಸ್ ದೊಡ್ಡ ಕ್ಷೇತ್ರವಾಗಿ ಬೆಳೆದಿದ್ದು, ಆರಂಭದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರ ಪೈಕಿ ಪಿಯೂಷ್ ಪಾಂಡೆ ಅವರು ಮೊದಲಿಗರು. ಆದರೆ ಇದೀಗ ಅವರನ್ನು ಕಳೆದುಕೊಂಡು ಜಾಹೀರಾತು ಲೋಕ ಕಣ್ಣೀರು ಹಾಕುವಂತಾಗಿದೆ. ಹಾಗಿದ್ರೆ ಪಿಯೂಷ್ ಪಾಂಡೆ ಅವರ ಮರೆಯಲಾಗದ ಜಾಹೀರಾತುಗಳು ಯಾವುವು? ಬನ್ನಿ ತಿಳಿಯೋಣ.
ಸ್ಮರಣೀಯ ಜಾಹೀರಾತು ಅಭಿಯಾನಗಳ ಹಿಂದೆ ನಿಂತ ಸೃಜನಾತ್ಮಕ ಪ್ರತಿಭೆ, ಜಾಹೀರಾತು ಕ್ಷೇತ್ರದ ದಂತಕಥೆ ಎಂದು ಹೆಸರು ಮಾಡಿದ್ದ ಪಿಯೂಷ್ ಪಾಂಡೆ ಅವರು ಇಂದು ಭಾರತದ ಜಾಹೀರಾತು ಪ್ರೇಮಿಗಳನ್ನು ಅಗಲಿದ್ದಾರೆ. ತಮ್ಮ 70ರ ಹರೆಯದಲ್ಲಿ ಪಿಯೂಷ್ ಪಾಂಡೆ ಅವರು ಇಹಲೋಕ ತ್ಯಜಿಸಿದ್ದಾರೆ. ಒಗಿಲ್ವಿಯ ಎಕ್ಸಿಕ್ಯೂಟಿವ್ ಚೇರ್ಮನ್ & ಚೀಫ್ ಕ್ರಿಯೇಟಿವ್ ಆಫೀಸರ್ (ವಿಶ್ವಮಟ್ಟ) ಆಗಿದ್ದ ಪಾಂಡೆ ಅವರು ಸುಮಾರು 4 ದಶಕಗಳ ಕಾಲ ಜಾಹೀರಾತು ಲೋಕದಲ್ಲಿ ಸಂಚಲನ ಸೃಷ್ಟಿಸಿ ಗಮನ ಸೆಳೆದಿದ್ದರು.

ಜಾಹೀರಾತು ಲೋಕದ ದಿಗ್ಗಜ ಇನ್ನಿಲ್ಲ
ಅವರು ದೊಡ್ಡ ಹೆಸರು ಮಾಡಲು ಅವರ ವಿಭಿನ್ನ ರೀತಿ ಆಡ್ ಎಂದರೆ ಜಾಹೀರಾತುಗಳೇ ಪ್ರಮುಖ ಕಾರಣ ಆಗಿದ್ದವು. ಅಷ್ಟೊಂದು ಚಂದದ ಜಾಹೀರಾತುಗಳನ್ನ ಸೃಷ್ಟಿಸಿದ್ದರು. ಅವರ ವೃತ್ತಿಜೀವನ ಭಾವನೆಗಳಿಗೆ ತಾಕುವ ರೀತಿಯ ಜಾಹೀರಾತುಗಳನ್ನು ಸೃಷ್ಟಿಸಿ ಶತಕೋಟಿ ಜನರ ಎದುರು ಇಟ್ಟಿತ್ತು. ಫೆವಿಕಾಲ್, ಕ್ಯಾಡ್ಬರಿ, ಏಷಿಯನ್ ಪೇಂಟ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳಿಗಾಗಿಯೇ ಭಾರತದ ಜಾಹೀರಾತು ಕ್ಷೇತ್ರವನ್ನು ರೂಪಾಂತರಗೊಳಿಸಿ ಗಮನ ಸೆಳೆದಿದ್ದರು ಅವರು. ಆದರೆ, ಈಗ ಅವರ ಅಗಲಿಕೆ ಜಾಹೀರಾತು ಕ್ಷೇತ್ರವನ್ನ ಕಾಡುತ್ತಿದೆ.
ಅಂದಹಾಗೆ 1988ರಲ್ಲಿ ಒಗಿಲ್ವಿ ಅಂಡ್ ಮೇಥರ್ನಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದ ಪಿಯೂಷ್ ಪಾಂಡೆ ಅವರು, ಮೊದಲಿಗೆ ರಾಷ್ಟ್ರ ಏಕತಾ ಅಭಿಯಾನವಾದ ಮಿಲೇ ಸೂರು ಮೇರಾ ತುಮ್ಹಾರಾ ಗೀತೆಯ ಸಾಹಿತ್ಯವನ್ನ ರಚಿಸಿದರು. ಲೋಕ ಸೇವಾ ಸಂಚಾರ್ ಪರಿಷತ್ ಆಯೋಜಿಸಿ ದೂರದರ್ಶನ ತೆರೆಯಲ್ಲಿ ಪ್ರಸಾರವಾದ ಈ ಗೀತೆ ಶಾಸ್ತ್ರೀಯ ಮತ್ತು ಪ್ರಾದೇಶಿಕ ಸಂಗೀತವನ್ನು ಭೀಮಸೇನ್ ಜೋಶಿ & ಲತಾ ಮಂಗೇಶ್ಕರ್ ಸೇರಿ ಅನೇರಿಕ ಹಿರಿಯ ಕಲಾವಿದರ ಶಕ್ತಿಯೊಂದಿಗೆ ಸಂಯೋಜಿತವಾಗಿತ್ತು. ಇದು ಭಾರತದ ಏಕತೆಯಲ್ಲಿ ವೈವಿಧ್ಯತೆಯ ಶಾಶ್ವತ ಪ್ರತೀಕವಾಗಿ ಕೂಡ ಉಳಿಯಿತು.
ಪೋಲಿಯೊ ಲಸಿಕಾ ಜಾಗೃತಿ ಅಭಿಯಾನ
ವಾಣಿಜ್ಯ ಜಾಹೀರಾತು ಹೊರತಾಗಿ ಪಾಂಡೆ ಅವರು ಸಾಮಾಜಿಕ ಅಭಿಯಾನಗಳಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂಬುದೇ ಗಮನಾರ್ಹ ಸಂಗತಿಯಾಗಿದೆ. 1990ರ ದಶಕದ ಆರಂಭದಲ್ಲಿ, ಅವರು ದೋ ಬೂಂದ್ ಜಿಂದಗೀ ಕೀ ಎಂಬ ಪೋಲಿಯೊ ಲಸಿಕಾ ಜಾಗೃತಿ ಅಭಿಯಾನದ ಮೂಲಕ ಭಾರತೀಯರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್, ಜಾಕಿ ಶ್ರಾಫ್ & ಐಶ್ವರ್ಯಾ ರೈ ಸೇರಿದಂತೆ ಅನೇಕ ದೊಡ್ಡ ದೊಡ್ಡ ಸ್ಟಾರ್ಸ್ ಈ ಜಾಹೀರಾತಿನಲ್ಲಿ ಮಿಂಚಿದ್ದರು. ಈ ಜಾಹೀರಾತು ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ದೇಶದ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಲು ಪ್ರಮುಖ ಪರಿಣಾಮ ಬೀರಿತ್ತು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications