ಮುಂಬೈನಲ್ಲಿ ಮದುವೆ ನೋಡಿ, ಮನುಷ್ಯತ್ವ ಅಂದರೆ ಇದೇ ಅಲ್ಲವೆ?
ಎಂಥ ಮನುಷ್ಯ ಜೀವದ ಕಲ್ಲು ಹೃದಯವನ್ನೂ ಕರಗಿಸುವ ಘಟನೆಗಳು ನಡೆಯುತ್ತವೆ. ಮಹಾರಾಷ್ಟ್ರದಲ್ಲೂ ಅಂಥದ್ದೊಂದು ವಿಶೇಷ ಘಟಿಸಿದೆ. ಆಸಿಡ್ ದಾಳಿ ಸಂತ್ರಸ್ತೆಯನ್ನು ರವಿಸಿಂಗ್ ಎಂಬಾತ ಕೈ ಹಿಡಿದಿದ್ದಾರೆ. ಆ ಮೂಲಕ ಆದರ್ಶ ಎಂಬುದಕ್ಕೆ ನಿದರ್ಶನವಾಗಿದ್ದಾರೆ
ಮಹಾರಾಷ್ಟ್ರದ ರಾಜಧಾನಿ ಮುಂಬೈನ ಥಾಣೆಯಲ್ಲಿ ಆದರ್ಶ ಹಾಗೂ ಮಾನವೀಯತೆ ಬಿಂಬಿಸುವ ಮದುವೆಯೊಂದು ಆಗಿದೆ. ಆಸಿಡ್ ದಾಳಿ ಸಂತ್ರಸ್ತೆ ಲಲಿತಾ ಅಶೋಕ್ ಬೆನ್ ಬನ್ಸಿ ಎಂಬಾಕೆಯನ್ನು ರವಿ ಸಿಂಗ್ ಕೈ ಹಿಡಿದಿದ್ದಾರೆ. ರವಿ ಸಿಂಗ್ ಅಂಥವರ ಸಂತತಿ ಇನ್ನೂ ಸಾವಿರ ಸಾವಿರವಾಗಲಿ. ನಮ್ಮ ಮಧ್ಯೆಯೇ ಬದುಕುತ್ತಿರುವ ಇಂಥ ಹೆಣ್ಣುಮಕ್ಕಳ ಬದುಕಲ್ಲೂ ರವಿ ಸಿಂಗ್ ಅಂತಹವರ ಪ್ರವೇಶವಾಗಲಿ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗಲೇ ಚುನಾವಣೆಯ ಹುರುಪಿನಲ್ಲಿದ್ದಾರೆ. ತೆಲಂಗಾಣ ರಾಜ್ಯದ ನಲ್ಗೊಂಡದಲ್ಲಿ ಮನೆ ಮನೆ ಪ್ರಚಾರದಲ್ಲಿ ನಗು ಬೀರುತ್ತಾ ನೀರು ಸ್ವೀಕರಿಸುತ್ತಿರುವ ಅವರ ಭಂಗಿಯಲ್ಲಿ ಮತ್ತೇನಾದರೂ ವಿಶೇಷ ಕಾಣುತ್ತಿದೆಯಾ? ಪಕ್ಷ ಬಲಪಡಿಸಲು ದೇಶಾದ್ಯಂತ ಪ್ರವಾಸ ಮಾಡುತ್ತಿರುವ ಶಾಗೆ ಸಿಕ್ಕುತ್ತಿರುವ ಸ್ವಾಗತದ ಪರಿಯಿದು.[ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!]
ಆದರೆ, ಇದಕ್ಕೂ ಚುನಾವಣೆ ಫಲಿತಾಂಶಕ್ಕೂ ಸಂಬಂಧ ಇರಬಹುದು ಅಂತ ಅನ್ನಿಸುವುದಿಲ್ಲ. ನಿಮಗೆ ಏನನ್ನಿಸುತ್ತದೆ? ಇನ್ನು ಇಂಗ್ಲೆಂಡ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ಅಲ್ಲಿನ ರಾಜ-ರಾಣಿ ಸಂತಾಪ ಸೂಚಿಸಿದ್ದಾರೆ. ಇಷ್ಟು ಮತ್ತಿಷ್ಟು ಸುದ್ದಿ-ಚಿತ್ರಗಳು ನಿಮ್ಮ ಗಮನಕ್ಕಿರಲಿ.

ಹುಬ್ಬಳ್ಳಿ ನಿಲ್ದಾಣದಲ್ಲಿ ಮೈಸೂರ ತಪನೆ
ಹುಬ್ಬಳ್ಳಿಯಿಂದ ರೈಲು ಓಡೋಡಿ ಮೈಸೂರು ಸೇರುವ ಮುನ್ನ ಸಿಂಗಾರ-ಬಂಗಾರ ಆಗಿ ರೈಲು ನಿಲ್ದಾಣದಲ್ಲಿ ಕಂಡುಬಂದಿದ್ದು ಹೀಗೆ. ಮೇ ಇಪ್ಪತ್ಮೂರರಂದು ಮೈಸೂರಿಗೆ ಮೊದಲ ಪ್ರಯಾಣಕ್ಕೆ ಸಿದ್ಧವಾಗಿದ್ದ ಹೊಸ ರೈಲು ಮೊದಲಿಗೆ ಹುಬ್ಬಳ್ಳಿಯಿಂದ ಬೆಗಳೂರು ತಲುಪುತ್ತದೆ. ಆ ನಂತರ ಮೈಸೂರಿಗೆ ಪ್ರಯಾಣ ಮುಂದುವರಿಸುತ್ತದೆ.

ಮೃತರಿಗೆ ಸಂತಾಪ
ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಐಎಸ್ ಐಎಸ್ ಹೊತ್ತುಕೊಂಡಿದೆ. ಇಪ್ಪತ್ತಕ್ಕೂ ಹೆಚ್ಚು ಮಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಮೃತರ ಗೌರವಾರ್ಥವಾಗಿ ಬ್ರಿಟನ್ ನ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್ ಬಕಿಂಗ್ ಹ್ಯಾಮ್ ನ ಅರಮನೆಯಲ್ಲಿ ಗಾರ್ಡನ್ ಸಿಟಿ ಔತಣಕೂಟಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಿದರು.

ಕಮಲ ಕಹಳೆ
ತೆಲಂಗಾಣದ ನಲ್ಗೊಂಡದಲ್ಲಿ ಮನೆಮನೆ ಪ್ರಚಾರ ಕೈಗೊಂಡಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಪಾಕಿಸ್ತಾನಕ್ಕೆ ಪಕ್ಕಾ ಒದೆ
ಜಮ್ಮು-ಕಾಶ್ಮೀರದ ನೌಶೇರಾದಲ್ಲಿ ಪಾಕಿಸ್ತಾನದ ಒಳನುಸುಳುಕೋರರ ವಿರುದ್ಧದ ಕ್ರಮದ ಭಾಗವಾಗಿ ಭಾರತೀಯ ಸೇನೆ ನಡೆಸಿದ ದಾಳಿಯ ವಿಡಿಯೋದಿಂದ ಸೆರೆ ಹಿಡಿಯಲಾದ ದೃಶ್ಯವಿದು.

ಮಾನವೀಯ ಮದುವೆ
ಆಸಿಡ್ ದಾಳಿ ಸಂತ್ರಸ್ತೆ ಲಲಿತಾ ಅಶೋಕ್ ಬೆನ್ ಬನ್ಸಿ ಎಂಬಾಕೆಯನ್ನು ರವಿ ಸಿಂಗ್ ಮುಂಬೈನ ಥಾಣೆಯಲ್ಲಿ ಮದುವೆಯಾದ ನಂತರ ನವದಂಪತಿ ಪ್ರೇಮದ ಚಿಹ್ನೆಯನ್ನು ತೋರಿದ ರೀತಿಯಿದು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications