Pawan Kalyan: ಪವನ್ ಕಲ್ಯಾಣ್ ವಿರುದ್ಧ ಕಾಮಿಡಿ ವಿಡಿಯೋ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಬಂಧನ
Pawan Kalyan: ದೇಶದಲ್ಲಿ ಮತ್ತೊಬ್ಬ ಸ್ಟ್ಯಾಂಡ್-ಅಪ್ ಕಾಮಿಡಿಯನ್ಗೆ ಸಂಕಷ್ಟ ಎದುರಾಗಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಅವಮಾನಿಸಿ, ಆನ್ಲೈನ್ ವಿಡಿಯೋ ಮಾಡಿರುವ ಆರೋಪದ ಮೇಲೆ ಏಪ್ರಿಲ್ 14 ರಂದು ಪ್ರಯಾಗರಾಜ್ನಲ್ಲಿ ಕಾಕಿನಾಡ ಪೊಲೀಸರು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಅವರನ್ನು ಬಂಧಿಸಿದ್ದಾರೆ.
ಏಪ್ರಿಲ್ 14 ರಂದು ಸಂಜೆ 7 ಗಂಟೆಗೆ ಅನುದೀಪ್ ಕಟಿಕಲಾ ಅವರನ್ನು ಬಂಧಿಸಲಾಗಿದೆ. ಅನುದೀಪ್ ಕಟಿಕಲಾ ಎನ್ನುವವರು ಅವರ ಪೋಷಕರೊಂದಿಗೆ ಕಾಕಿನಾಡಕ್ಕೆ ರೈಲಿನಲ್ಲಿ ಹೋಗುವಾಗ ಅವರ ಬಂಧನವಾಗಿದೆ ಎಂದು ಹೇಳಲಾಗಿದೆ. ಪ್ರಥಮ ಮಾಹಿತಿ ವರದಿಯ (ಎಫ್ಐಆರ್) ಪ್ರತಿಯನ್ನು ಪರಿಶೀಲಿಸಿದ ವಕೀಲರು, ಪೊಲೀಸ್ ಕ್ರಮವು ಔಪಚಾರಿಕ ಪ್ರಕ್ರಿಯೆಗಿಂತಲೂ ಹೆಚ್ಚಾಗಿದೆ. ಈ ವಿಷಯಕ್ಕೆ ತುರ್ತು ಬಂಧನ ಅವಶ್ಯವಿರಲಿಲ್ಲ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ ಕಟಿಕಲಾ ಅವರು ತಮ್ಮ ಮೊಬೈಲ್ ಫೋನ್ ಬಳಕೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಜಗನ್ನಾಥಪುರಂನ ಕೆನಾಲ್ ರಸ್ತೆಯ ನಿವಾಸಿ 51 ವರ್ಷದ ಬಡೇ ವೆಂಕಟ ಕೃಷ್ಣ ಅವರ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರುದಾರರು 2014 ರಿಂದ ಜನ ಸೇನಾ ಪಕ್ಷದ (ಜೆಎಸ್ಪಿ) ಕಾರ್ಯಕರ್ತರಾಗಿದ್ದಾರೆ. 2022 ರಿಂದ ಪೂರ್ವ ಗೋದಾವರಿ ಜಿಲ್ಲಾ ಜೆಎಸ್ಪಿಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಪಕ್ಷವು ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿದೆ.
ಅನುದೀಪ್ ಕಟಿಕಲಾ ಅಫೀಷಿಯಲ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 29.57 ಸೆಕೆಂಡುಗಳ ವಿಡಿಯೋದಲ್ಲಿ ಪವನ್ ಕಲ್ಯಾಣ್ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು, ವ್ಯಂಗ್ಯ ಮತ್ತು ಅಸಭ್ಯ ಭಾಷೆಯಿಂದ ಅವರ ಖ್ಯಾತಿಗೆ ಹಾನಿ ಮಾಡಲಾಗಿದೆ. ಶಾಂತಿಯನ್ನು ಕದಡಲು ಮತ್ತು ದ್ವೇಷವನ್ನು ಪ್ರಚೋದಿಸಲು ಸುಳ್ಳು ಮಾಹಿತಿಯನ್ನು ಹರಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲವು ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲು
ಇನ್ನು ಅನುದೀಪ್ ಕಟಿಕಲಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000 ರ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಕಟಿಕಲಾ ವಿರುದ್ಧ ಎಫ್ಐಆರ್ನಲ್ಲಿ ಆರೋಪ ಮಾಡಲಾಗಿದೆ. ಬಿಎನ್ಎಸ್ ಅಡಿಯಲ್ಲಿ, ಅವರು ಸೆಕ್ಷನ್ 356(2) ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ, ವ್ಯಕ್ತಿಯ ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಸುಳ್ಳು ಹೇಳಿಕೆಗಳಿಗೆ ದಂಡ ವಿಧಿಸುವಿಕೆ; ಸೆಕ್ಷನ್ 353(2) ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳಿಗೆ, ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಸುಳ್ಳು ಮಾಹಿತಿಯ ಪ್ರಸರಣವನ್ನು ಉದ್ದೇಶ ಮತ್ತು ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಯಾವುದೇ ಪದ, ಸನ್ನೆ ಅಥವಾ ಕೃತ್ಯಕ್ಕೆ ಸೆಕ್ಷನ್ 79 ರ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 67 ಅನ್ನು ಅನ್ವಯಿಸಿದ್ದಾರೆ, ಇದು ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದನ್ನು ಅಥವಾ ರವಾನಿಸುವುದನ್ನು ನಿಷೇಧಿಸುತ್ತದೆ.
ಅನುದೀಪ್ ಕಟಿಕಲಾ ಯಾರು
ಅನುದೀಪ್ ಕಟಿಕಲಾ ಐಐಟಿ ಬಾಂಬೆ ಪದವೀಧರ ಮತ್ತು ಹೈದರಾಬಾದ್ ಮೂಲದ ಸಿಲ್ಲಿ ಸೌತ್ ಕಾಮಿಡಿ ಕ್ಲಬ್ನ ಸಂಸ್ಥಾಪಕರಾಗಿದ್ದಾರೆ. ಇತ್ತೀಚೆಗೆ 'ದಿ ಟಾಲಿವುಡ್ ರೋಸ್ಟ್ ಶೋ' ಎಂಬ ಶೀರ್ಷಿಕೆಯ ಅಡಿ ಶೋ ಪ್ರದರ್ಶಿಸಿದ್ದರು. ಈ ಪ್ರದರ್ಶನವು ಪವನ್ ಕಲ್ಯಾಣ್ ಅವರ ಅಣ್ಣ ಮತ್ತು ನಟ ರಾಮ್ ಚರಣ್ ಅವರ ತಂದೆ ನಟ ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗದ "ಮೆಗಾ ಫ್ಯಾಮಿಲಿ" ಎಂದು ಅವರು ಉಲ್ಲೇಖಿಸಿದ ನಟರ ಹೆಸರನ್ನು ಉಲ್ಲೇಖಿಸಲಾಗಿತ್ತು.
How can you comment personally in the name of standup comedy on Telugu heros and in this video you commented on DCM @PawanKalyan
— Shiva (@Mygodshiva) April 10, 2026
Mr @kanudeep95 if you want to get the fame this is not the right way. Better you join in politics pic.twitter.com/p8605F7NkY
ವೈರಲ್ ಆಗಿರುವ ವಿಡಿಯೋದಲ್ಲಿ, ಕಟಿಕಲಾ ಅವರು, ಪವನ್ ಕಲ್ಯಾಣ್ ಅವರ ಮದುವೆ ವಿಷಯಗಳನ್ನು ಉಲ್ಲೇಖಿಸುತ್ತಾ, "ಪವನ್ ಕಲ್ಯಾಣ್ ಅವರಿಂದ ನಾನು ಕಲಿತ ಒಂದು ವಿಷಯವೆಂದರೆ ನಿಮ್ಮ ಹೆಂಡತಿಗೆ ಹೇಗೆ ವಿಚ್ಛೇದನ ನೀಡಬೇಕೆಂದು. ಎಲ್ಲಾ ಪುರುಷರು ಅದನ್ನು ಕಲಿಯಬೇಕು" ಎಂದು ಹೇಳಿದ್ದರು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಗ್ಗೆ ಮಾಡಿರುವ ಹಾಸ್ಯದ ವಿಡಿಯೋವನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಸಹ ಬಳಸಿಕೊಂಡು ಟ್ರೋಲ್ ಮಾಡುತ್ತಿರುವುದರಿಂದ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ.














Click it and Unblock the Notifications