Get Updates
Get notified of breaking news, exclusive insights, and must-see stories!

ಬೆಲೆ ಏರಿಕೆಗೆ ಮುಸ್ಲಿಮರು ಕಾರಣ ಎಂದ ಅಸ್ಸಾಂ ಸಿಎಂ ವಿರುದ್ಧ ತಿರುಗಿಬಿದ್ದ ಅಸಾದುದ್ದೀನ್ ಓವೈಸಿ

ತರಕಾರಿ ಬೆಲೆ ಹೆಚ್ಚಳಕ್ಕೆ ಮುಸ್ಲಿಂ ವ್ಯಾಪಾರಿಗಳು ಕಾರಣ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರ ಆರೋಪಕ್ಕೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು "ಮಿಯಾ ಭಾಯ್‌" ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಸ್ಸಾಂನಲ್ಲಿ ತರಕಾರಿ ಬೆಲೆ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ , ಮುಸ್ಲಿಂ ತರಕಾರಿ ವ್ಯಾಪಾರಿಗಳು ಬೆಲೆಗಳನ್ನು ಹೆಚ್ಚಿಸಿದ್ದಾರೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಅಸ್ಸಾಮಿ ಜನರು ತರಕಾರಿಗಳನ್ನು ಮಾರಾಟ ಮಾಡಿದರೆ, ಅವರು ತಮ್ಮ ಅಸ್ಸಾಮಿ ಜನರಿಗೆ ಹೆಚ್ಚಿನ ಬೆಲೆಗೆ ಮಾರುವುದಿಲ್ಲ ಎಂದು ಹೇಳಿದರು.

 Owaisi Slams Assam CM for Blaming Muslim Vendors on Vegetable Price Hike

"ತರಕಾರಿಗಳ ಬೆಲೆಯನ್ನು ಇಷ್ಟು ಹೆಚ್ಚಿಸಿದ ಜನರು ಯಾರು? ಅವರು ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುವ ಮಿಯಾ ವ್ಯಾಪಾರಿಗಳು" ಎಂದು ಶರ್ಮಾ ಹೇಳಿಕೆ ನೀಡಿದ್ದರು. ಅಸ್ಸಾಂನಲ್ಲಿ ವಾಸಿಸುವ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಸ್ಥಳೀಯ ಭಾಷೆಯಲ್ಲಿ ಮಿಯಾ ಎನ್ನಲಾಗುತ್ತದೆ. ಅವರನ್ನು ಬಾಂಗ್ಲಾದೇಶದಿಂದ ವಲಸೆ ಬಂದವರು ಎಂದು ನಂಬಲಾಗಿದೆ.

ಸಿಎಂ ಬಿಸ್ವಂತ್ ಶರ್ಮಾ, ಮಿಯಾ ಸಮುದಾಯದವರನ್ನು ಕೋಮುವಾದಿಗಳು ಎಂದು ಆಗಾಗ್ಗೆ ದೂಷಿಸುತ್ತಿರುತ್ತಾರೆ. ಮಿಯಾ ಸಮುದಾಯದವರಿಂದ ಅಸ್ಸಾಮಿ ಸಂಸ್ಕೃತಿ ಮತ್ತು ಭಾಷೆ ವಿರೂಪವಾಗಿದೆ, ಮಿಯಾಗಳು ಹೊರಗಿನವರು ಎಂದು ಆಗಾಗ್ಗೆ ತಮ್ಮ ಮಾತುಗಳಲ್ಲಿ ಉಲ್ಲೇಖಿಸುತ್ತಾರೆ.

"ಮಿಯಾ ವ್ಯಾಪಾರಿಗಳು ಗುವಾಹಟಿಯಲ್ಲಿ ಅಸ್ಸಾಮಿ ಜನರಿಗೆ ಹೆಚ್ಚಿನ ಬೆಲೆಗೆ ತರಕಾರಿಗ ಮಾರಾಟ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಅಸ್ಸಾಮಿ ವ್ಯಾಪಾರಿಗಳು ಇಂದು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೆ, ಅವರು ತಮ್ಮ ಅಸ್ಸಾಮಿ ಜನರಿಂದ ಎಂದಿಗೂ ಹೆಚ್ಚಿನ ಶುಲ್ಕ ವಿಧಿಸುತ್ತಿರಲಿಲ್ಲ" ಎಂದು ಅವರು ಹೇಳಿದರು.

ಶರ್ಮಾ ವಿರುದ್ಧ ಓವೈಸಿ ಟೀಕೆ

ಶರ್ಮಾ ಅವರ ಹೇಳಿಕೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಓವೈಸಿ ತೀಕ್ಷ್ಣವಾದ ಉತ್ತರ ನೀಡಿದ್ದಾರೆ. "ಎಮ್ಮೆ ಹಾಲು ಕೊಡದಿದ್ದರೂ ಅಥವಾ ಕೋಳಿ ಮೊಟ್ಟೆ ಇಡದಿದ್ದರೂ ಮಿಯಾಜಿಯನ್ನು ದೂಷಿಸುವ ಇಂತಹ ಮಂಡಲಿ (ಗುಂಪು) ದೇಶದಲ್ಲಿದೆ. ಬಹುಶಃ ಅವರು ತಮ್ಮ 'ವೈಯಕ್ತಿಕ' ವೈಫಲ್ಯಗಳನ್ನು ಮಿಯಾ ಭಾಯಿಯ ಮೇಲೂ ಆರೋಪಿಸುತ್ತಾರೆ." ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದರು. ಪ್ರಧಾನಿ ಮತ್ತು ವಿದೇಶಿ ಮುಸ್ಲಿಮರ ನಡುವೆ ಆಳವಾದ ಸ್ನೇಹವಿದೆ ಎಂದರು. ಮುಸ್ಲಿಂ ರಾಷ್ಟ್ರಗಳಿಂದ ಟೊಮ್ಯಾಟೊ, ಪಾಲಕ, ಆಲೂಗಡ್ಡೆ ಇತ್ಯಾದಿಗಳನ್ನು ಕೇಳುವ ಮೂಲಕ ಬೆಲೆ ಏರಿಕೆಯನ್ನು ನಿರ್ವಹಿಸಿ ಎಂದು ವ್ಯಂಗ್ಯವಾಡಿದರು.

ಗುವಾಹಟಿಯಲ್ಲಿ ಮಿಯಾ ಸಮುದಾಯದವರಿಗೆ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಈ ರೀತಿಯ ಹೇಳಿಕೆ ರಾಜ್ಯದ ಮುಖ್ಯಮಂತ್ರಿಗೆ ಸೂಕ್ತವಲ್ಲ, ಅವರು ರಾಜ್ಯದ ಮುಖ್ಯಸ್ಥರು ಮತ್ತು ಅದು ಅಲ್ಲ. ಅವರು ಇಂತಹ ಟೀಕೆಗಳನ್ನು ಮಾಡುತ್ತಿರುವುದು ಸರಿ. ಸಿಎಂ ಹೇಳಿಕೆಯಿಂದ ನಾವು ನಿರಾಶೆಗೊಂಡಿದ್ದೇವೆ ಎಂದು ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಶರ್ಮಾ ಅವರ ಹೇಳಿಕೆಯು ಮುಸ್ಲಿಮರು ಮತ್ತು ಯುವಕರು ಸೇರಿದಂತೆ ಇತರ ಅಸಾಮಿ ಜನರ ನಡುವೆ ಕಂದಕವನ್ನು ಸೃಷ್ಟಿಸುತ್ತದೆ ಎಂದು ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+