ರಾಹುಲ್ ಗಾಂಧಿಗೆ ನೀರು ಕುಡಿಸಿದ ವರ್ತಕರ ಪ್ರತಿಭಟನೆ
ನವದೆಹಲಿ, ಏಪ್ರಿಲ್. 06: ದೇಶದಲ್ಲಿ ಪ್ರತಿಭಟನೆಗಳಿಗೆ ಬರವಿಲ್ಲ. ನೀರಿಗೆ ಆಗ್ರಹಿಸಿ ಪ್ರತಿಭಟನೆ, ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ಹೀಗೆ ಬಗೆ ಬಗೆಯ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ.
ಅಬಕಾರಿ ಸುಂಕ ಹೆಚ್ಚಳ ಖಂಡಿಸಿ ನವದೆಹಲಿಯಲ್ಲಿ ಚಿನ್ನಾಭರಣ ವರ್ತಕರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದರು. ಬಿಸಿಲ ಬೇಗೆ ತಾಳಲಾರದೇ ನೀರು ಕುಡಿದರು. ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರಿ ಬೈಶಾಲಿ ದಾಲ್ಮಿಯಾ ಟಿಎಂಸಿಯಿಂದ ಕಣಕ್ಕಿಳಿದ್ದು ನಾಮಪತ್ರ ಸಲ್ಲಿಕೆ ಮಾಡಿ ಹೊರಬಂದರು.
ಇನ್ನಷ್ಟು ಸುದ್ದಿಗಳು, ಚಿತ್ರಗಳು, ವೈಚಿತ್ರಗಳು ದೇಶದ ತುಂಬ ನಡೆದು ಹೋದುವು. ಅವುಗಳನ್ನೆಲ್ಲ ಒಟ್ಟು ಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ(ಪಿಟಿಐ ಚಿತ್ರಗಳು)

ಸೌರವ್ ಗಂಗೂಲಿ ಹಾಜರಿ
ಕೋಲ್ಕತಾದಲ್ಲಿ ಟಾಟಾ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಸೌರವ್ ಗಂಗೂಲಿ.

ಪ್ರತಿಭಟನೆ
ಅಬಕಾರಿ ಸುಂಕ ಹೆಚ್ಚಳ ವಿರೋಧಿಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಆಲ್ ಇಂಡಿಯಾ ಬುಲಿಯನ್ ಮತ್ತು ಸ್ವಾರನ್ ಕರ್ ಫೆಡರೇಶನ್ ನ ಪದಾಧಿಕಾರಿಗಳು.

ನೀರು ಕುಡಿದ ರಾಹುಲ್
ಅಬಕಾರಿ ಸುಂಕ ಹೆಚ್ಚಳ ವಿರೋಧಿಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಆಲ್ ಇಂಡಿಯಾ ಬುಲಿಯನ್ ಮತ್ತು ಸ್ವಾರನ್ ಕರ್ ಫೆಡರೇಶನ್ ನವರ ಜತೆ ಕೈಜೋಡಿಸಿದ್ದ ರಾಹುಲ್ ಗಾಂಧಿ ಬಿಸಿಲಿಗೆ ಬಳಲಿ ನೀರು ಕುಡಿದರು.

ಸೆಲ್ಫಿ ಸಂಭ್ರಮ
ಗುಹವಾಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತೆಯರು.

ನಾಮಪತ್ರ ಸಲ್ಲಿಕೆ
ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರಿ ಬೈಶಾಲಿ ದಾಲ್ಮಿಯಾ ಟಿಎಂಸಿಯಿಂದ ಕಣಕ್ಕಿಳಿದ್ದು ನಾಮಪತ್ರ ಸಲ್ಲಿಕೆ ಮಾಡಿ ಹೊರಬಂದರು.

ಇವರು ಬರಾಕ್ ಒಬಾಮಾ
ವಾಷಿಂಗ್ ಟನ್ ನಲ್ಲಿ ತೆರಿಗೆ ನೀತಿ ಬಗ್ಗೆ ಮಾತನಾಡುತ್ತಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಒಂದು ಕ್ಷಣ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.

ಇದು ಬೆಂಗಳೂರಿನ ತಾಜ್ ಮಹಲ್
ಬೆಂಗಳೂರಿನಲ್ಲಿ ನಿರ್ಮಿಸಿದ್ದ ಸಂಚಾರಿ ತಾಜ್ ಮಹಲ ನ ದೃಶ್ಯ ವೈಭವ.

ಜಾಕಿ ಚಾನ್ ಅಲ್ಲ
ಜೈಪುರದ ಮ್ಯೂಸಿಯಂ ಬಳಿ ನಿರ್ಮಿಸಲಾಗಿರುವ ಹಾಲಿವುಡ್ ನಟ ಜಾಕಿಚಾನ್ ಪ್ರತಿಮೆ ಎದುರು ನಿಂತು ಫೋಸ್ ನೀಡಿದ ಬಾಲಿವುಡ್ ನಟ ಸೋನು ಸೂದ್.

ಸಾಧುಗಳಿಗೆ ನಮನ
ಸಿಂಹ ಹಸ್ತ ಮಹಾ ಕುಂಭಕ್ಕೆ ಉಜ್ಜಯಿನಿಗೆ ಆಗಮಿಸಿದ ನಾಗಾ ಸಾಧುಗಳು ಕಂಡಿದ್ದು ಹೀಗೆ..












Click it and Unblock the Notifications