Nation wants to know ಅರ್ನಬ್ ವಿರುದ್ಧ ನೋಟಿಸ್ ಏಕೆ?
"Nation wants to know:" ಎಂಬ ವಾಕ್ಯ ಹೇಳಿದೊಡನೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಕಣ್ಮುಂದೆ ಬರುತ್ತಾರೆ. ಆದರೆ, ಈ ಜನಪ್ರಿಯ ವಾಕ್ಯ ಈಗ ವಿವಾದಕ್ಕೀಡಾಗಿದೆ.
ಬೆಂಗಳೂರು, ಏಪ್ರಿಲ್ 18: "Nation wants to know:" ಎಂಬ ವಾಕ್ಯ ಹೇಳಿದೊಡನೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಕಣ್ಮುಂದೆ ಬರುತ್ತಾರೆ. ಆದರೆ, ಈ ಜನಪ್ರಿಯ ವಾಕ್ಯ ಈಗ ವಿವಾದಕ್ಕೀಡಾಗಿದೆ. ಈ ವಾಕ್ಯದ ಹಕ್ಕು ಯಾರಿಗೆ ಸೇರುತ್ತದೆ? ಜನಪ್ರಿಯತೆ ತಂದುಕೊಟ್ಟ ಅರ್ನಬ್ ಅವರಿಗೆ ಸೇರುತ್ತದೆಯೋ ಅಥವಾ ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ಸೇರುತ್ತದೆಯೋ?
ಒಟ್ಟಾರೆ, ಇನ್ಮುಂದೆ ಟಿವಿ ಶೋಗಳಲ್ಲಿ ಬಳಸದಂತೆ ಅರ್ನಬ್ ಅವರಿಗೆ ಬೆದರಿಕೆ ಒಡ್ಡಲಾಗಿದೆ. ಈ ಜನಪ್ರಿಯ ವಾಕ್ಯದ ಟ್ರೇಡ್ ಮಾರ್ಕ್ ಲೈಸನ್ ಪಡೆಯಲು ಮಾಧ್ಯಮ ಸಂಸ್ಥೆ ಮುಂದಾಗಿದೆ. ಹೀಗಾಗಿ, ಅರ್ನಬ್ ಅವರು ಮಾಧ್ಯಮಗಳ ಮುಂದೆ ಈ ವಾಕ್ಯ ಬಳಸಿದರೆ ಜೈಲಿಗೆ ಕಳಿಸಬೇಕಾಗುತ್ತದೆ ಎಂಬ ಬೆದರಿಕೆ ಬಂದಿದೆ.[ವಿಡಿಯೋ: ಸಂವಿಧಾನ ಹಕ್ಕಿಗಾಗಿ ಹೋರಾಟ, ಅರ್ನಬ್ ರಿಪಬ್ಲಿಕ್ ಟಿವಿ]

ನಿಮ್ಮ ಎಲ್ಲಾ ಹಣದ ಬ್ಯಾಗ್, ವಕೀಲರ ಪಡೆಯೊಂದಿಗೆ ಬಂದು ನನ್ನನ್ನು ಬಂಧಿಸಲು ಯತ್ನಿಸಿ, ಈ ವಾಕ್ಯದ ಹಕ್ಕು ನಮ್ಮೆಲ್ಲರಿಗೂ ಸೇರಿದ್ದು, ಯಾವುದೇ ಒತ್ತಡ, ಬೆದರಿಕೆ ನನ್ನ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರ್ನಬ್ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಹೇಳಿಕೊಂಡಿದ್ದಾರೆ. ಇಲ್ಲಿ ತನಕ ಅರ್ನಬ್ ಅವರಿಗೆ 6 ಲೀಗಲ್ ನೋಟಿಸ್ ಕಳಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಅರ್ನಬ್ ಹೇಳಿದ್ದಾರೆ.[ಅರ್ನಬ್ 'ರಿಪಬ್ಲಿಕ್' ಟಿವಿ ಆರಂಭಕ್ಕೆ ಕಾಲ ಕೂಡಿ ಬಂತು!]
More From
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications