ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ಮಂದಿರವನ್ನು ಹೆಚ್ಚಿನ ಮುಸ್ಲಿಮರು ವಿರೋಧಿಸುತ್ತಿಲ್ಲ : ರವಿಶಂಕರ್

By Sachhidananda Acharya
|
Google Oneindia Kannada News

ಅಯೋಧ್ಯೆ, ನವೆಂಬರ್ 16: ರಾಮ ಮಂದಿರ ನಿರ್ಮಾಣವನ್ನು ಹೆಚ್ಚಿನ ಮುಸ್ಲಿಮರು ವಿರೋಧಿಸುತ್ತಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.

ಅಯೋಧ್ಯೆ ವಿವಾದದಲ್ಲಿ ಸಂಧಾನ ಅಗತ್ಯವಿಲ್ಲ: ವಿಹಿಂಪಅಯೋಧ್ಯೆ ವಿವಾದದಲ್ಲಿ ಸಂಧಾನ ಅಗತ್ಯವಿಲ್ಲ: ವಿಹಿಂಪ

ಇಂದು ಅಯೋಧ್ಯೆಗೆ ಭೇಟಿ ನೀಡಿದ ಅವರು, "ನನಗೆ ಗೊತ್ತು ಕೆಲವರು ಇದನ್ನು ಒಪ್ಪಿಕೊಳ್ಳಲಿಕ್ಕಿಲ್ಲ. ಆದರೆ ಹೆಚ್ಚಿನ ಮುಸ್ಲಿಮರು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿಲ್ಲ," ಎಂದು ಹೇಳಿದ್ದಾರೆ.

 Muslims by and large are not opposing the Ram temple: Sri Sri Ravishankar

"ಕೆಲವೊಮ್ಮೆ ಪರಿಹಾರ ಸಾಧ್ಯವಿಲ್ಲ ಎಂದು ಅನಿಸುತ್ತದೆ. ಆದರೆ ನಮ್ಮ ಜನರು, ಯುವಕರು ಮತ್ತು ಎರಡೂ ಸಮುದಾಯಗಳ ನಾಯಕರು ಇದನ್ನು ಸಾಧ್ಯವಾಗಿಸಬಹುದು," ಎಂದು ಅಭಿಪ್ರಾಯಪಟ್ಟರು.

ಅಯೋಧ್ಯೆ: ಮಧ್ಯಸ್ಥಿಕೆಗೆ ಬಂದ ರವಿಶಂಕರ್ ರನ್ನು ಗೇಲಿ ಮಾಡಿದ ಓವೈಸಿಅಯೋಧ್ಯೆ: ಮಧ್ಯಸ್ಥಿಕೆಗೆ ಬಂದ ರವಿಶಂಕರ್ ರನ್ನು ಗೇಲಿ ಮಾಡಿದ ಓವೈಸಿ

ಎರಡೂ ಪಂಗಡಗಳು ಒಪ್ಪಿಕೊಂಡಲ್ಲಿ ಆಯೋಧ್ಯೆ ವಿವಾದ ಬಗೆಹರಿಸಲು ಮಧ್ಯವರ್ತಿಯಾಗಲು ತಾವು ಸಿದ್ಧ ಎಂದು ಶ್ರೀ ಶ್ರೀ ರವಿಶಂಕರ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ರವಿಶಂಕರ್ ಸಂಧಾನ ಪ್ರಯತ್ನಕ್ಕೆ ಬಿಜೆಪಿ ನಾಯಕರು, ವಿಶ್ವ ಹಿಂದೂ ಪರಿಷತ್ ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು.

English summary
“I know some may not agree with this, but Muslims by and large are not opposing the Ram temple,” sadi Art of Living priest Sri Sri Ravishankar after visiting Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X