ಮುನುಗೋಡು ಉಪಚುನಾವಣೆ: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಬಂಧನ

ಹೈದರಾಬಾದ್‌, ನವೆಂಬರ್‌ 3: ಮುನುಗೋಡು ಉಪ ಚುನಾವಣೆ ಕ್ಷೇತ್ರಕ್ಕೆ ಇಂದು ಮತದಾನ ಬಿರುಸಿನಿಂದ ಸಾಗಿದೆ. ಈ ನಡುವೆ ಬುಧವಾರ ರಾತ್ರಿ ಅಬ್ದುಲ್ಲಾಪುರಮೆಟ್‌ನ ವಿಜಯವಾಡ ಹೆದ್ದಾರಿಯಲ್ಲಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ರನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಉಪಚುನಾವಣೆ ನಡೆಯುತ್ತಿರುವ ಮುನುಗೋಡು ಕ್ಷೇತ್ರದಿಂದ ಸ್ಥಳೀಯರಲ್ಲದವರು ಮತ್ತು ಟಿಆರ್‌ಎಸ್ ಮುಖಂಡರನ್ನು ಹೊರಗೆ ಕಳುಹಿಸಬೇಕು ಎಂದು ಒತ್ತಾಯಿಸಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಪ್ರತಿಭಟನೆ ನಡೆಸಿದರು. ಆರಂಭದಲ್ಲಿ ಪೊಲೀಸರು ಬಂಡಿ ಸಂಜಯ್ ಅವರ ಬೆಂಗಾವಲು ಪಡೆಯನ್ನು ಮಲಕ್‌ಪೇಟ್‌ನಲ್ಲಿ ನಂತರ ವನಸ್ಥಲಿಪುರಂನಲ್ಲಿ ತಡೆದರು ಮತ್ತು ಅಂತಿಮವಾಗಿ ಅವರನ್ನು ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು.

ಮುನುಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ರಾಜಗೋಪಾಲ್ ರೆಡ್ಡಿ ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದರು, ಚುನಾವಣಾಧಿಕಾರಿ (ಆರ್‌ಒ) ಮತ್ತು ನಲ್ಗೊಂಡ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮುನುಗೋಡಿಗೆ ಹೊರಗಿನಿಂದ ಪ್ರಚಾರಕ್ಕೆ ಬಂದಿರುವ ಟಿಆರ್‌ಎಸ್ ಮುಖಂಡರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Munugodu by-election: Telangana BJP president Bandi Sanjay arrested

ಕೆ.ರಾಜಗೋಪಾಲ್ ರೆಡ್ಡಿ ಅವರು ತಮ್ಮ ಕಾರ್ಯಕರ್ತರೊಂದಿಗೆ ಮುನುಗೋಡು ವಿಧಾನಸಭಾ ಕ್ಷೇತ್ರದ ಚುಂಡೂರಿನ ಆರ್‌ಒ ಕಚೇರಿಗೆ ಮೆರವಣಿಗೆ ನಡೆಸಿದರು. ಮುನುಗೋಡು ಮತದಾರರಲ್ಲದ ಟಿಆರ್‌ಎಸ್‌ ಮುಖಂಡರು ಗ್ರಾಮಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದು, ಇದಕ್ಕೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಸುಮ್ಮನಿರಲು ಏಕೆ ಅವಕಾಶ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು.

ಮುನುಗೋಡು ವಿಧಾನಸಭಾ ಉಪಚುನಾವಣೆಯ ಮತದಾನ ಆರಂಭವಾಗಿದೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನವೆಂಬರ್ 6ರಂದು ಮತ ಎಣಿಕೆ ನಡೆಯಲಿದೆ. ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯು ರಾಜ್ಯದ ಎಲ್ಲಾ ಪ್ರಮುಖ ಪಕ್ಷಗಳಿಗೆ ನಿರ್ಣಾಯಕವಾಗಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ವಿರೋಧ ಪಕ್ಷಗಳಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಸ್ಪರ್ಧೆ ನಡೆಸುತ್ತಿವೆ.

ಮುನುಗೋಡು ಉಪಚುನಾವಣೆಗೆ 298 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 2,41,855 ಮತದಾರರು ಮತದಾನ ಮಾಡಲಿದ್ದಾರೆ. 47 ಅಭ್ಯರ್ಥಿಗಳು ಕಣದಲ್ಲಿದ್ದರೆ, ಬಿಜೆಪಿಯ ರಾಜ್ ಗೋಪಾಲ್ ರೆಡ್ಡಿ, ಟಿಆರ್‌ಎಸ್‌ನ ಮಾಜಿ ಶಾಸಕ ಕುಸುಕುಂಟ್ಲ ಪ್ರಭಾಕರ ರೆಡ್ಡಿ ಮತ್ತು ಕಾಂಗ್ರೆಸ್‌ನ ಪಾಲ್ವಾಯಿ ಶ್ರವಂತಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Munugodu by-election: Telangana BJP president Bandi Sanjay arrested

ಮುನುಗೋಡು ಮಾತ್ರವಲ್ಲದೆ ಮಹಾರಾಷ್ಟ್ರ, ಹರಿಯಾಣ, ಬಿಹಾರ, ಒಡಿಶಾ ಮತ್ತು ಉತ್ತರ ಪ್ರದೇಶ ರಾಜ್ಯಗಳ ಇತರ ಆರು ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯುತ್ತಿದೆ. ಚುನಾವಣೆ ನಡೆಯುವ ಇತರ ಆರು ವಿಧಾನಸಭಾ ಕ್ಷೇತ್ರಗಳೆಂದರೆ ಮಹಾರಾಷ್ಟ್ರದಿಂದ ಅಂಧೇರಿ ಪೂರ್ವ, ಹರ್ಯಾಣದ ಆದಂಪುರ, ಉತ್ತರ ಪ್ರದೇಶದ ಗೋಲಾ ಗೋಕ್ರನಾಥ್ ಮತ್ತು ಒಡಿಶಾದಿಂದ ಧಮ್‌ನಗರ ಕ್ಷೇತ್ರಗಳಾಗಿವೆ. ಬಿಹಾರದ ಎರಡು ಕ್ಷೇತ್ರಗಳಾದ ಮೊಕಾಮಾ ಮತ್ತು ಗೋಪಾಲ್‌ಗಂಜ್ ಉಪಚುನಾವಣೆಗಳು ನಡೆಯಲಿವೆ.

ಏತನ್ಮಧ್ಯೆ, ಮುನುಗೋಡು ಉಪಚುನಾವಣೆಯ ಪ್ರಚಾರದ ಕೊನೆಯ ದಿನ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) (ಟಿಆರ್‌ಎಸ್) ಮತ್ತು ಬಿಜೆಪಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯ ನಂತರ ಪಕ್ಷದ ಮುಖಂಡ ಈಟಾಲ ರಾಜೇಂದರ್ ಮೇಲೆ ಹಲ್ಲೆ ನಡೆಸಿದ ಗುಂಪಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಚುನಾವಣಾ ಆಯೋಗಕ್ಕೆ ಬುಧವಾರ ಮನವಿ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+