ಶೀಘ್ರವೇ ಮುಂಬೈನಿಂದ ದೆಹಲಿಗೆ ಎಲೆಕ್ಟ್ರಿಕ್ ಹೆದ್ದಾರಿ: ನಿತಿನ್ ಗಡ್ಕರಿ
ನವದೆಹಲಿ,ಜು.12: ದೆಹಲಿ ಮತ್ತು ಮುಂಬೈ ನಡುವೆ ವಿದ್ಯುತ್ ಹೆದ್ದಾರಿ ನಿರ್ಮಿಸಲು ಭಾರತ ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೈಡ್ರಾಲಿಕ್ ಟ್ರೇಲರ್ ಮಾಲೀಕರ ಸಂಘ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ವಿದ್ಯುತ್ ಹೆದ್ದಾರಿಯು ಸಾಮಾನ್ಯವಾಗಿ ಅದರ ಮೇಲೆ ಚಲಿಸುವ ವಾಹನಗಳಿಗೆ ಓವರ್ಹೆಡ್ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜು ಮಾಡುವ ರಸ್ತೆಯನ್ನು ಸೂಚಿಸುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿದ್ಯುತ್ ಹೆದ್ದಾರಿಗಳಲ್ಲಿ ಟ್ರಾಲಿ ಬಸ್ನಂತೆಯೇ ಟ್ರಾಲಿ ಟ್ರಕ್ಗಳನ್ನು ಓಡಿಸಲು ಗಡ್ಕರಿ ಗುರಿಯನ್ನು ಹೊಂದಲಾಗಿದೆ ಎಂದರು.
ಕೇಂದ್ರ ಸರ್ಕಾರ 2.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗಗಳನ್ನು ನಿರ್ಮಿಸುತ್ತಿದೆ. ನಮ್ಮ ಯೋಜನೆ ದೆಹಲಿಯಿಂದ ಮುಂಬೈಗೆ ಎಲೆಕ್ಟ್ರಿಕ್ ಹೈವೇ ಮಾಡುವುದಾಗಿದೆ. ಟ್ರಾಲಿ ಬಸ್ನಂತೆ ನೀವು ಟ್ರಾಲಿ ಟ್ರಕ್ಗಳನ್ನು ಸಹ ಓಡಿಸಬಹುದು. ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಎಥೆನಾಲ್, ಮೆಥನಾಲ್ ಮತ್ತು ಹಸಿರು ಹೈಡ್ರೋಜನ್ನಂತಹ ಪರ್ಯಾಯ ಇಂಧನಗಳನ್ನು ಬಳಸಬೇಕೆಂದು ಅವರು ಭಾರೀ ವಾಹನಗಳ ಮಾಲೀಕರನ್ನು ಒತ್ತಾಯಿಸಿದರು.

ಎಲ್ಲಾ ಜಿಲ್ಲೆಗಳನ್ನು ಚತುಷ್ಪಥ ರಸ್ತೆಗಳ ಮೂಲಕ ಸಂಪರ್ಕಿಸುವ ನಿರ್ಧಾರವನ್ನು ತಮ್ಮ ಸಚಿವಾಲಯ ತೆಗೆದುಕೊಂಡಿದೆ. ಮಾಲಿನ್ಯವು ಒಂದು ದೊಡ್ಡ ಕಳವಳವಾಗಿದೆ ಎಂದ ಗಡ್ಕರಿ, ಎಥೆನಾಲ್, ಮೆಥೆನಾಲ್ ಮತ್ತು ಹಸಿರು ಹೈಡ್ರೋಜನ್ಗಳಂತಹ ಪರ್ಯಾಯ ಇಂಧನವನ್ನು ಬಳಸಲು ನಾನು ಭಾರೀ ವಾಹನ ಮಾಲೀಕರನ್ನು ವಿನಂತಿಸುತ್ತೇನೆ. ಏಕೆಂದರೆ ಅವುಗಳು ಕಡಿಮೆ ವೆಚ್ಚದಾಯಕ ಮತ್ತು ಆಮದು ಬದಲಿಗಳಾಗಿವೆ ಎಂದರು.
ಈ ವೇಳೆ ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ಟಿಒ) ಭ್ರಷ್ಟಾಚಾರದಿಂದ ಭಾರಿ ವಾಹನ ಮಾಲೀಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಚಿವರು ಒಪ್ಪಿಕೊಂಡರು. ಆದ್ದರಿಂದ, ನಾವು ಆರ್ಟಿಒಗಳು ಒದಗಿಸುವ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ರಸ್ತೆ ಅಪಘಾತಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವುದು ತಮ್ಮ ಗುರಿಯಾಗಿದೆ. ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು, ನಮಗೆ ತರಬೇತಿ ಪಡೆದ ಚಾಲಕರು ಬೇಕಾಗಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತಕ್ಕೆ ಎಲ್ಲಾ ರೀತಿಯ ಸಾರಿಗೆ ಅಗತ್ಯವಿದೆ. ಚೀನಾ, ಯುರೋಪಿಯನ್ ಯೂನಿಯನ್ ಮತ್ತು ಯುಎಸ್ಗೆ ಹೋಲಿಸಿದರೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚ ಹೆಚ್ಚು ಎಂದು ಗಡ್ಕರಿ ಹೇಳಿದರು.












Click it and Unblock the Notifications