ಮದುವೆ ಒಲ್ಲೆ ಎಂದವಳನ್ನು ಎತ್ತಿಕೊಂಡು ಸಪ್ತಪದಿ ತುಳಿದ ವ್ಯಕ್ತಿ- ವಿಡಿಯೋ ವೈರಲ್
ಜೈಪುರ ಜೂನ್ 7: 23 ವರ್ಷದ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಕೊಂಡ ಅಘಾತಕಾರಿ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಅಪಹರಿಸಿದ ವ್ಯಕ್ತಿ ಯುವತಿಯನ್ನು ಹೊತ್ತುಕೊಂಡು ಸಪ್ತಪದಿ ತುಳಿದಿದ್ದಾನೆ. ಈ ಘಟನೆಯು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ರಾಜಸ್ಥಾನದ ಮರುಭೂಮಿ ಮಧ್ಯದಲ್ಲಿ ಕೆಲವು ಜನರ ಸಮ್ಮುಖದಲ್ಲಿ ಮದುವೆ ನಡೆಯುತ್ತಿದ್ದಂತೆ ಕಾಣಿಸುತ್ತದೆ. ಯುವತಿ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆಯ ಮದುವೆಗೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿದೆ. ಜೂನ್ 12 ಕ್ಕೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಜೂನ್ 1ಕ್ಕೆ ಈ ಘಟನೆ ನಡೆದಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜಸ್ಥಾನದ ಮರುಭೂಮಿಯ ಮಧ್ಯದಲ್ಲಿ ಕೆಲವು ಜನರ ಸಮ್ಮುಖದಲ್ಲಿ ಮದುವೆ ನಡೆಯುತ್ತಿದ್ದಂತೆ ಮಹಿಳೆ ಅಳುತ್ತಿರುವುದನ್ನು ತೋರಿಸಿದೆ.
मीडिया द्वारा ये वीडियो जैसलमेर का बताया जा रहा है। रिपोर्ट्स के अनुसार एक लड़की को सरेआम किडनैप करके एक बंजर वीराने में आग जलाकर उसके साथ ज़बरदस्ती शादी कर ली। ये बेहद चौंकाने वाली और डराने वाली घटना है। @AshokGehlot51 जी मामले की जाँच कर कार्यवाही करें। pic.twitter.com/mZee4oJgSy
— Swati Maliwal (@SwatiJaiHind) June 6, 2023
ಅಪಹರಣಕ್ಕೊಳಗಾದ ಯುವತಿಯನ್ನು ಪುರುಷನ ತೋಳುಗಳಲ್ಲಿ ಹಿಡಿದಿಟ್ಟುಕೊಂಡು ಬಲವಂತವಾಗಿ ಬೆಂಕಿಯ ಸುತ್ತಲೂ ಸುತ್ತುವ ಮೂಲಕ ಮದುವೆಯ ಆಚರಣೆಯನ್ನು ನಡೆಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದನ್ನು ಹಿಂದೂ ಸಂಪ್ರದಾಯಗಳಲ್ಲಿ ಸಪ್ತಪದಿ ಎಂದು ಕರೆಯಲಾಗುತ್ತದೆ.

DCW ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಗಮನಾರ್ಹವಾಗಿ ವೈರಲ್ ವೀಡಿಯೊವನ್ನು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
"ಜೈಸಲ್ಮೇರ್ನ ಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸಾರವಾಗುತ್ತಿದೆ. ವರದಿಗಳ ಪ್ರಕಾರ, ಹುಡುಗಿಯನ್ನು ಸಾರ್ವಜನಿಕವಾಗಿ ಅಪಹರಿಸಿ ಬಂಜರು ಮರುಭೂಮಿಯಲ್ಲಿ ಬೆಂಕಿ ಹಚ್ಚಿ ಅವಳನ್ನು ಮದುವೆಯಾಗುವಂತೆ ಒತ್ತಾಯಿಸಲಾಗಿದೆ. ಇದು ಅತ್ಯಂತ ಆಘಾತಕಾರಿ ಮತ್ತು ಭಯಾನಕ ಘಟನೆಯಾಗಿದೆ. @AshokGehlot51 ಈ ವಿಷಯವನ್ನು ತನಿಖೆ ಮಾಡಿ ಮತ್ತು ಕ್ರಮ ಕೈಗೊಳ್ಳಿ'' ಎಂದು ಮಲಿವಾಲ್ ಒತ್ತಾಯಿಸಿದ್ದಾರೆ.

ಜೈಸಲ್ಮೇರ್ನಲ್ಲಿ ಸಂತ್ರಸ್ತೆಯ ಕುಟುಂಬಸ್ಥರ ಪ್ರತಿಭಟನೆ
ಸಂತ್ರಸ್ತೆಯ ಕುಟುಂಬ ಸದಸ್ಯರು ಜೈಸಲ್ಮೇರ್ನ ಜಿಲ್ಲಾಧಿಕಾರಿಗಳ ಹೊರಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಂತ್ರಸ್ತೆಯ ಕುಟುಂಬವು ಜೂನ್ 12 ಕ್ಕೆ ಅವಳ ಮದುವೆಯನ್ನು ನಿಶ್ಚಯಿಸಿತ್ತು, ಆದರೆ ಆರೋಪಿಯು ಆಕೆಯ ಮದುವೆಗೆ ತೊಂದರೆ ನೀಡುವುದಾಗಿ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದನು. ಈ ಬಗ್ಗೆ ಕುಟುಂಬಸ್ಥರು ತಲೆ ಕೆಡಿಸಿಕೊಳ್ಳದೇ ಇದ್ದಾಗ ವ್ಯಕ್ತಿ ಬಲವಂತವಾಗಿ ಯುವತಿಯನ್ನು ಹೊತ್ತುಕೊಂಡು ಸಪ್ತಪದಿ ತುಳಿದಿದ್ದಾನೆ.
ಜೈಸಲ್ಮೇರ್ ಪೊಲೀಸರು ಮಲಿವಾಲ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದರು. ಜೂನ್ 1, 2023 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಜೈಸಲ್ಮೇರ್ನ ಮೊಹನ್ಗಢದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ವೀಡಿಯೊದಲ್ಲಿ ಕಂಡುಬರುವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಪ್ರಕಾರ ಬಲವಂತದ ಮದುವೆಗಳ ಕುರಿತಾದ ದತ್ತಾಂಶದ ಪ್ರಕಾರ, 2021 ರ ವೇಳೆಗೆ ಭಾರತದಲ್ಲಿ 28,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.












Click it and Unblock the Notifications