ಮೇಕ್ ಇನ್ ಇಂಡಿಯಾ ಪ್ರತಿಭೆ ಸಿಕ್ಕಿದ್ದು ನಕಲಿ ನೋಟು ದಂಧೇಲಿ!
ನಕಲಿ ನೋಟು ದಂಧೇಲಿ ಸಿಕ್ಕಿಹಾಕಿಕೊಂಡವನ ಹೆಸರು ಅಭಿನವ್. ಎಂಜಿನಿಯರ್ ಆಗಿದ್ದ ಈತನ ಆವಿಷ್ಕಾರ ಮೇಕ್ ಇನ್ ಇಂಡಿಯಾದಲ್ಲಿ ಆಯ್ಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋಡಿ ಈತನ ಬಗ್ಗೆ ಮೆಚ್ಚುಗೆ ಮಾತಾಡಿದ್ದರು
ಮೊಹಾಲಿ, ಡಿಸೆಂಬರ್ 3: ಪಂಜಾಬ್ ನ ಮೊಹಾಲಿಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಪರ್ಮಿಂದರ್ ಸಿಂಗ್ ಈಚೆಗೆ ಹೊಚ್ಚ ಹೊಸ ಅಡಿ ಕಾರೊಂದನ್ನು ವಶಪಡಿಸಿಕೊಂಡಿದ್ದಾಗಿ ಹೇಳಿದರು. ಅದರಲ್ಲಿ ಅತಿ ಗಣ್ಯರ ಜತೆ ಮಾತ್ರ ವ್ಯವಹಾರ ಮಾಡಲಾಗುತ್ತಿತ್ತಂತೆ. ಅದು ಏನಪ್ಪ ಅಂದರೆ ನೋಟು ಬದಲಿ ದಂಧೆ. ಹಾಗಂತ ಸಾಚಾ ನೋಟನ್ನೇನೂ ಕೊಡ್ತಿರಲಿಲ್ಲ. ಪೊಲೀಸರಿಗೆ ಸಿಕ್ಕಿದ್ದು ನಲವತ್ತೆರಡು ಲಕ್ಷ ರುಪಾಯಿ ನಕಲಿ ನೋಟು.
ಅಲ್ಲಿ ಮೂವರಿದ್ದರು. ಅದರಲ್ಲಿ ಇಬ್ಬರು ತಪ್ಪಿಸಿಕೊಂಡರೆ ಒಬ್ಬ ಸಿಕ್ಕಿಹಾಕಿಕೊಂಡ. ಈ ಮೂವರ ಗ್ಯಾಂಗ್ ನಕಲಿ ನೋಟನ್ನೇ ಅಸಲಿ ಎಂದು ಯಾಮಾರಿಸಿ, ಅದಕ್ಕೂ ಕಮಿಷನ್ ಪಡೆಯುತ್ತಿದ್ದರಂತೆ. ಸಿಕ್ಕಿಹಾಕಿಕೊಂಡನಲ್ಲ ಆತನ ಹೆಸರು ಅಭಿನವ್. ಎಂಜಿನಿಯರಿಂಗ್ ವಿದ್ಯಾರ್ಥಿ. ದೃಷ್ಟಿ ದೋಷ ಇರುವವರಿಗಾಗಿ ಅವರು ಬಳಸುವ ಸ್ಟಿಕ್ ಗೆ ಅಳವಡಿಸುವ ಸೆನ್ಸಾರ್ ಉತ್ಪಾದಿಸುವುದು ಈತನ ವ್ಯಾಪಾರವಾಗಿತ್ತು.[ಪಾಕ್, ಬಾಂಗ್ಲಾ ಗಡಿಯಲ್ಲಿ ನಕಲಿ ನೋಟಿಗೆ ಪೂರ್ಣವಿರಾಮ]

ಚಂಡೀಗಢದ ಈತನ ಕಚೇರಿಯಲ್ಲಿ 2 ಸಾವಿರ ರುಪಾಯಿ ನಕಲಿ ನೋಟು ಮುದ್ರಣ ಮಾಡಲಾಗಿದೆ. ಇವರಿಂದ ವಶಪಡಿಸಿಕೊಂಡ ನೋಟುಗಳಲ್ಲಿ ಒಂದೇ ಸೀರಿಯಲ್ ನಂಬರ್ ಇದ್ದವಂತೆ. ಇನ್ನೂ ಆಸಕ್ತಿಕರ ವಿಷಯ ಅಂದರೆ, ಆರೋಪಿ ಅಭಿನವ್ ಇದ್ದಾನಲ್ಲ, ಆತ ಕಂಡುಹಿಡಿದ 'ಫ್ರೀಡಂ ಡಿವೈಸ್' ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಆಯ್ಕೆಯಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈತನನ್ನು ಹೊಗಳಿದ್ದರು.
ಅಭಿನವ್ ನ ಡಿವೈಸ್ ಈ ವರ್ಷ ಅಧಿಕೃತವಾಗಿ ಬಿಡುಗಡೆಯಾಗಿ, ಯಶಸ್ಸು ಕಂಡು ಭಾರತ ಸೇರಿದಂತೆ ಹದಿನೈದಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿತ್ತು. ಈತ ತನ್ನ ಆವಿಷ್ಕಾರಕ್ಕಾಗಿ 'ಮಿಲಾಪ್' ಹೆಸರಿನಲ್ಲಿ ಹಣ ಚಂದಾ ಎತ್ತುವ ಅಭಿಯಾನ ಕೂಡ ಮಾಡಿದ್ದ. ಈಗಲೂ ಈತನ ಮೋಸದ ಆವಿಷ್ಕಾರವೂ ಏನೂ ಕಡಿಮೆಯಿಲ್ಲ.[2 ಸಾವಿರ ರೂ. ನಕಲಿ ನೋಟು ಚಲಾವಣೆ: ಇಬ್ಬರ ಬಂಧನ]
ನಕಲಿ ನೋಟು ನೀಡಿ, ಅದರಲ್ಲೂ ಎರಡು ಸಾವಿರದ ನೋಟು ನೀಡಿ, ಮೋಸ ಮಾಡುವ ವಿಧಾನ ಕಂಡುಹಿಡಿಯುವುದಕ್ಕೆ ತಲೆ ಎಷ್ಟು ಖರ್ಚು ಮಾಡಿದ್ದಾನೋ, ಜತೆಗೆ ಆಡಿ ಕಾರಿನಲ್ಲಿ ಶ್ರೀಮಂತರ ಜತೆ ಮಾತ್ರ ವ್ಯವಹಾರ ಮಾಡುತ್ತಿತ್ತಂತೆ ಈತನ ತಂಡ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications