Get Updates
Get notified of breaking news, exclusive insights, and must-see stories!

Maharashtra cabinet expansion: ಅಜಿತ್ ಪವಾರ್‌ಗೆ ಹಣಕಾಸು ಖಾತೆ ನೀಡಿದ ಶಿಂಧೆ- ಎನ್‌ಸಿಪಿ ನಾಯಕನೇ ಮುಂದಿನ ಸಿಎಂ ಎಂದ ಶಿವಸೇನಾ

ಮುಂಬೈ, ಜುಲೈ 14: ಮಹಾರಾಷ್ಟ್ರ ಸರ್ಕಾರಕ್ಕೆ ಹೊಸದಾಗಿ ಸೇರ್ಪಡೆಗೊಂಡ ಎನ್‌ಸಿಪಿ ಸಚಿವರಿಗೆ ಖಾತೆಗಳನ್ನು ಹಂಚಲಾಗಿದೆ. ಶಿವಸೇನಾ ( ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ ) ನಾಯಕರ ಪ್ರತಿರೋಧದ ನಡುವೆಯೂ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನಾ ಖಾತೆಯನ್ನು ನೀಡಲಾಗಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಶಿಂಧೆ ಅವರ ಬಲವನ್ನು ಕುಗ್ಗಿಸುವ ತಂತ್ರಗಳು ನಡೆಯುತ್ತಿವೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಎನ್‌ಸಿಪಿಯಿಂದ ಬಂದಿರುವ ಹೊಸ ಸಚಿವರಿಗೆ ಅವಕಾಶ ಕಲ್ಪಿಸಲು ಬಿಜೆಪಿ ಆರು ಖಾತೆಗಳನ್ನು ಬಿಟ್ಟುಕೊಟ್ಟಿದೆ. ಶಿವಸೇನೆ ನಾಲ್ಕು ಖಾತೆಗಳನ್ನು ತ್ಯಜಿಸಿದೆ.

ಅಜಿತ್ ಪವಾರ್ ನೇತೃತ್ವದ ಬಣವು ಮಹಾರಾಷ್ಟ್ರದ ಸಹಕಾರ ಇಲಾಖೆಯ ಮೇಲೆ ತನ್ನ ಹಿಡಿತವನ್ನು ಸಾಧಿಸಿದೆ. ಇದು ಮೊದಲಿನಿಂದಲೂ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಹಿಡಿತದಲ್ಲಿದೆ.

Maharashtra cabinet expansion

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಹೊಸದಾಗಿ ಸೇರ್ಪಡೆಯಾದ ಎನ್‌ಸಿಪಿ ಸಚಿವರಿಗೆ ಹೊಸ ಖಾತೆಗಳನ್ನು ಹಂಚಿದ್ದಾರೆ. ತಮ್ಮ ಬಣದ ನಾಯಕರ ಪ್ರತಿರೋಧದ ನಡುವೆಯೂ ಶಿಂಧೆ ಅವರು ಪವಾರ್‌ಗೆ ಹಣಕಾಸು ಮತ್ತು ಯೋಜನಾ ಖಾತೆಯನ್ನು ನೀಡಿದ್ದಾರೆ.

ಜುಲೈ 2 ರಂದು ಪವಾರ್ ಅವರು ಇತರ ಎಂಟು ಎನ್‌ಸಿಪಿ ಶಾಸಕರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಸಿಎಂ ಶಿಂಧೆ ನೇತೃತ್ವದ ಮೈತ್ರಿಕೂಟ ಸರ್ಕಾರಕ್ಕೆ ಸೇರ್ಪಡೆಗೊಂಡರು.

ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಅಜಿತ್‌ ಪವಾರ್‌ ಅವರು ಹಣಕಾಸು ಸಚಿವರಾಗಿದ್ದರು.

29 ಎನ್‌ಸಿಪಿ ಶಾಸಕರ ಬೆಂಬಲವನ್ನು ಪಡೆಯುವ ಮೂಲಕ ತಮ್ಮ ಚಿಕ್ಕಪ್ಪ ಶರದ್‌ ಪವಾರ್ ಅವರೊಂದಿಗೆ ಸಂಬಂಧ ಮುರಿದುಕೊಂಡು ಬಿಜೆಪಿ- ಶಿವಸೇನಾ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದಾರೆ.

ಮಹಾರಾಷ್ಟ್ರ ಸರ್ಕಾರಕ್ಕೆ ಅಜಿತ್ ಪವಾರ್ ಬಣ ಸೇರ್ಪಡೆಗೊಂಡಿರುವ ಬಗ್ಗೆ ಶಿಂಧ ಬಣದ ಶಿವಸೇನಾ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Maharashtra cabinet expansion

ಇದುವರೆಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಳಿ ಹಣಕಾಸು ಇಲಾಖೆ ಇತ್ತು. ಇದು ನಾಲ್ಕನೇ ಬಾರಿಗೆ ಪವಾರ್ ಅವರು ಕೈಸೇರಿದೆ.

ಬಿಜೆಪಿ ಬಳಿ ಇದ್ದ ಸಹಕಾರ, ಆಹಾರ ಮತ್ತು ನಾಗರಿಕ ಪೂರೈಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವೈದ್ಯಕೀಯ ಶಿಕ್ಷಣ ಮತ್ತು ವಿಶೇಷ ನೆರವು, ಕ್ರೀಡೆ ಮತ್ತು ಯುವ ಕಲ್ಯಾಣ ಖಾತೆಗಳನ್ನು ಈಗ ಹೊಸದಾಗಿ ಸೇರ್ಪಡೆಗೊಂಡ ಎನ್‌ಸಿಪಿ ನಾಯಕರಿಗೆ ಹಂಚಲಾಗಿದೆ.

ಶಿವಸೇನೆಯಿಂದ ಕೃಷಿ, ಆಹಾರ ಮತ್ತು ಔಷಧ ಆಡಳಿತ, ಪರಿಹಾರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣೆ ಮತ್ತು ವಿಶೇಷ ನೆರವು ಇಲಾಖೆಗಳ ಖಾತೆಗಳನ್ನು ಮರುಹಂಚಿಕೆ ಮಾಡಲಾಗಿದೆ.

ಕುತೂಹಲಕಾರಿಯಾಗಿ, ದಶಕಗಳಿಂದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಸಹಕಾರ ಇಲಾಖೆಯನ್ನು ಅಜಿತ್ ಪವಾರ್ ನೇತೃತ್ವದ ಬಣ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಅತುಲ್ ಸೇವ್ ಅವರು ಇಲ್ಲಿಯವರೆಗೆ ಸಹಕಾರಿ ಖಾತೆಯನ್ನು ನಿಭಾಯಿಸುತ್ತಿದ್ದರು.

ಎನ್‌ಸಿಪಿ ಪ್ರಬಲ ನಾಯಕ ಛಗನ್ ಭುಜಬಲ್ ಅವರಿಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ರಕ್ಷಣೆ ಖಾತೆಯನ್ನು ನೀಡಲಾಗಿದೆ. ಹಿಂದಿನ ಎಂವಿಎ ಸರ್ಕಾರದಲ್ಲಿ ಅವರು ಅದೇ ಇಲಾಖೆಗಳನ್ನು ಹೊಂದಿದ್ದರು.

Maharashtra cabinet expansion

ಸಮ್ಮಿಶ್ರ ಸರ್ಕಾರದ ನೂತನ ಕೃಷಿ ಸಚಿವರಾಗಿ ಧನಂಜಯ್ ಮುಂಡೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಬ್ದುಲ್ ಸತ್ತಾರ್ ಅವರ ಬಳಿ ಖಾತೆ ಇತ್ತು.

ಹಸನ್ ಮುಶ್ರಿಫ್ ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ವಿಶೇಷ ನೆರವು ಖಾತೆಯನ್ನು ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಅದಿತಿ ತತ್ಕರೆ ಅವರಿಗೆ ನೀಡಲಾಗಿದೆ. ಈ ಹಿಂದೆ ಶಿವಸೇನೆಯ ಸಂಜಯ್ ರಾಥೋಡ್ ಅವರ ಬಳಿ ಇದ್ದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಖಾತೆಯನ್ನು ಧರ್ಮರಾವ್ ಅತ್ರಮ್ ಪಡೆದುಕೊಂಡಿದ್ದಾರೆ.

ಬಿಜೆಪಿಯ ಗಿರೀಶ್ ಮಹಾಜನ್ ಅವರ ಬಳಿ ಇದ್ದ ಕ್ರೀಡಾ ಮತ್ತು ಯುವ ಕಲ್ಯಾಣ ಖಾತೆಯನ್ನು ಸಂಜಯ್ ಬನ್ಸೋಡೆ ಅವರಿಗೆ ನೀಡಲಾಗಿದೆ. ಅನಿಲ್ ಪಾಟೀಲ್ ಅವರಿಗೆ ಪರಿಹಾರ, ಪುನರ್ವಸತಿ ಮತ್ತು ವಿಪತ್ತು ನಿರ್ವಹಣೆಯನ್ನು ಹಂಚಲಾಗಿದೆ.

'ಖಾತೆ ಹಂಚಿಕೆಯ ಅಧಿಕಾರವು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಲ್ಲಿದೆ. ನಾವು ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದೇವೆ. ಅವರು ನೀಡುವ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ' ಎಂದು ಅಜಿತ್‌ ಪವಾರ್ ಹೇಳಿದ್ದಾರೆ.

ಅಜಿತ್‌ ಪವಾರ್‌ ಮುಂದಿನ ಸಿಎಂ

ಎನ್‌ಸಿಪಿ ನಾಯಕ ಅಜಿತ್‌ ಪವಾರ್ ಅವರು ಮಹಾರಾಷ್ಟ್ರದ ಮುಂದಿನ ಸಿಎಂ ಆಗಲಿದ್ದಾರೆ ಎಂದು ಶಿವಸೇನಾ ( ಉದ್ಧವ್‌ ಠಾಕ್ರೆ ಬಣ ) ಹಿರಿಯ ನಾಯಕ ಸಂಜಯ್‌ ರಾವತ್‌ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+