Kunal Kamra: ಕುನಾಲ್ ಕಾಮ್ರಾಗೆ ಬಿಗ್ ರಿಲೀಫ್ ಕೊಟ್ಟ ಮದ್ರಾಸ್ ಹೈಕೋರ್ಟ್
ಬಂಧನದ ಭೀತಿಯಲ್ಲಿದ್ದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾಗೆ ಮದ್ರಾಸ್ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಕುನಾಲ್ ವಿರುದ್ಧ ಮುಂಬೈನಲ್ಲಿ ದಾಖಲಾಗಿರುವ ಎಫ್ಐಆರ್ ಗೆ ಸಂಬಂಧಿಸಿದಂತೆ ಶುಕ್ರವಾರ ಮದ್ರಾಸ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಗ್ಗೆ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಕುನಾಲ್ ವಿರುದ್ಧ ದೂರು ದಾಖಲಾಗಿತ್ತು.
ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಕುನಾಲ್ ಕಾಮ್ರಾ ಅವರಿಗೆ ಏಪ್ರಿಲ್ 7ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ತಮಿಳುನಾಡು ಸರ್ಕಾರ ಮತ್ತು ಮುಂಬೈನ ಖಾರ್ ಪೊಲೀಸ್ ಠಾಣೆಗೆ ನೋಟಿಸ್ ಜಾರಿ ಮಾಡಿದೆ.

ಕುನಾಲ್ ಕಾಮ್ರಾ ಪರ ವಕೀಲ ವಿ ಸುರೇಶ್ ವಾದ ಮಾಡಿದರು. ಕುನಾಲ್ಗೆ ಏಕನಾಥ್ ಶಿಂಧೆ ನಾಯಕತ್ವದ ಶಿವಸೇನೆಯ ಸದಸ್ಯರು, ಮಂತ್ರಿಗಳು ಸೇರಿದಂತೆ ಹಲವರಿಂದ ಕೊಲೆ ಬೆದರಿಕೆ ಮತ್ತು ದೈಹಿಕ ಹಲ್ಲೆಯ ಬೆದರಿಕೆಗಳು ಬರುತ್ತಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಕುನಾಲ್ ಕಾಮ್ರಾ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ, ಅವರು ಕೋಟ್ಯಧಿಪತಿಯ ಮಗನ ಬಗ್ಗೆ ಮತ್ತು ಇತರ ಹಲವು ವಿಚಾರಗಳ ಬಗ್ಗೆ ಹಾಸ್ಯ ಮಾಡಿದ್ದಾರೆ ಎಂದು ವಕೀಲ ಸುರೇಶ್ ವಾದಿಸಿದರು. ಅದೆಲ್ಲವೂ ವಿಡಂಬನಾತ್ಮಕವಾಗಿ ಮಾಡಿದ ಹಾಸ್ಯವಾಗಿದೆ. ವಿಡಂಬನೆಯು ನಾಗರಿಕರ ಮೂಲಭೂತ ವಾಕ್ ಸ್ವಾತಂತ್ರ್ಯದ ಹಕ್ಕಿನ ಅಂಗೀಕೃತ ಭಾಗವಾಗಿದೆ ಎಂದು ವಾದಿಸಿದರು.
ವಾದ ವಿವಾದ ಕೇಳಿದ ಮದ್ರಾಸ್ ಹೈಕೋರ್ಟ್, ಅರ್ಜಿದಾರರು ಸ್ಟ್ಯಾಂಡ್-ಅಪ್ ಹಾಸ್ಯಗಾರ. ಜನವರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ್ದ ಹಾಸ್ಯದ ತುಣುಕುಗಳ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಅರ್ಜಿದಾರರು ತಮಗೆ ಜೀವ ಬೆದರಿಕೆ ಇದೆ, ಮಹಾರಾಷ್ಟ್ರದ ನ್ಯಾಯಾಲಗಳನ್ನು ಸಂಪರ್ಕಿಸಲು ಆಗುತ್ತಿಲ್ಲ ಎಂದಿದ್ದಾರೆ. ಈ ನ್ಯಾಯಾಲದ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಒಲವು ತೋರುತ್ತಿದೆ ಎಂದು ಹೇಳಿದೆ.
ಹಲವು ಎಫ್ಐಆರ್ ದಾಖಲು
ಏಕನಾಥ್ ಶಿಂಧೆ ಅವರ ವಿರುದ್ಧದ ಹೇಳಿಕೆ ನೀಡಿದ್ದಕ್ಕಾಗಿ ಕುನಾಲ್ ಕಾಮ್ರಾ ವಿರುದ್ಧ ಹಲವು ಎಫ್ಐಆರ್ ದಾಖಲಾಗಿವೆ. ಕಾಮ್ರಾ ಶುಕ್ರವಾರ ಬೆಳಿಗ್ಗೆ ಮದ್ರಾಸ್ ಹೈಕೋರ್ಟ್ಗೆ ಪ್ರಯಾಣಿಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.
ವಕೀಲ ಸುರೇಶ್ ತಮಿಳುನಾಡಿನ ವಿಲ್ಲುಪುರಂ ಪಟ್ಟಣದ ಖಾಯಂ ನಿವಾಸಿಯಾಗಿದ್ದು, ಮದ್ರಾಸ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸಲು ನ್ಯಾಯವ್ಯಾಪ್ತಿಯನ್ನು ಹೊಂದಿದೆ ಎಂದು ಸೂಚಿಸಿ, ಕಮ್ರಾ ಅವರ ಅರ್ಜಿಯ ತುರ್ತು ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದರು.












Click it and Unblock the Notifications