Get Updates
Get notified of breaking news, exclusive insights, and must-see stories!

ತಮಿಳುನಾಡಿನ ಎರಡು ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ

ಚೆನ್ನೈ, ಡಿಸೆಂಬರ್‌ 16: ತಮಿಳುನಾಡಿನ ನಾರಿಕೊರವನ್ ಮತ್ತು ಕುರಿವಿಕ್ಕರನ್ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಮಸೂದೆಯನ್ನು ಲೋಕಸಭೆ ಗುರುವಾರ ಅಂಗೀಕರಿಸಿದೆ.

ಎಐಎಡಿಎಂಕೆ ಸಂಸದ ಪಿ ರವೀಂದ್ರನಾಥ್ ಅವರು 267 ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ಮೇಲೆ ಭಾರತೀಯ ಮಾನವಶಾಸ್ತ್ರೀಯ ಸಮೀಕ್ಷೆ ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿದ ಜನಾಂಗೀಯ ಸಮೀಕ್ಷೆಯ ಸ್ಥಿತಿಯ ಕುರಿತು ಸ್ಪಷ್ಟೀಕರಣವನ್ನು ಕೋರಿದ್ದರು. ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಸಂಸದರು ತುಣುಕು ವಿಧಾನವನ್ನು ಅಳವಡಿಸಿಕೊಳ್ಳುವ ಬದಲು ಬುಡಕಟ್ಟುಗಳ ಸಮಗ್ರ ಪಟ್ಟಿಯನ್ನು ತಯಾರಿಸಬೇಕು. ಅಲ್ಲದೆ ಅವರನ್ನು ಪರಿಶಿಷ್ಟ ಪಂಗಡಗಳಾಗಿ ಸೇರಿಸಲು ಮತ್ತು ಗುರುತಿಸಲು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಸೂದೆಯನ್ನು ಉಲ್ಲೇಖಿಸಿದ ಮಾಡಿದ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಅರ್ಜುನ್ ಮುಂಡಾ, ಈ ಕ್ರಮದಲ್ಲಿ ಯಾವುದೇ ರಾಜಕೀಯ ಒಳಗೊಂಡಿಲ್ಲ ಮತ್ತು ಇದು ತಮಿಳುನಾಡು ಸರ್ಕಾರದ ಸಲಹೆಯನ್ನು ಅನುಸರಿಸುತ್ತದೆ. ಎರಡು ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವ ನಿರ್ಧಾರದಿಂದ ಸುಮಾರು 27,000 ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ (ಎನ್‌ಸಿಎಂ) ಸಾಂವಿಧಾನಿಕ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದರು. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾಯಿದೆ, 1992 ಅನ್ನು ಸಂಸತ್ತು ಜಾರಿಗೊಳಿಸುವುದರೊಂದಿಗೆ ಎನ್‌ಸಿಪಿ ಅನ್ನು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ.

ಏಕಕಾಲದಲ್ಲಿ ಚುನಾವಣೆಗಳಿಂದ ಉಳಿತಾಯ

ಏಕಕಾಲದಲ್ಲಿ ಚುನಾವಣೆಗಳಿಂದ ಉಳಿತಾಯ

ಲಿಖಿತ ಉತ್ತರದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ಚುನಾವಣೆಗಳು ದೊಡ್ಡ ಬಜೆಟ್ ವ್ಯವಹಾರ ಮತ್ತು ದುಬಾರಿ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ಬೊಕ್ಕಸಕ್ಕೆ ಭಾರಿ ಉಳಿತಾಯವಾಗುತ್ತದೆ. ಏಕಕಾಲಿಕ ಚುನಾವಣೆಗಳು ಅಸಮಕಾಲಿಕ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಿಂದಾಗಿ ಮಾದರಿ ನೀತಿ ಸಂಹಿತೆಯ ದೀರ್ಘಾವಧಿಯ ಜಾರಿಯಿಂದಾಗಿ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ತಡೆಯುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮಗಳ ಜಾಹೀರಾರಿಗೆ 3,723.38 ಕೋಟಿ ವ್ಯಯ

ಕಾರ್ಯಕ್ರಮಗಳ ಜಾಹೀರಾರಿಗೆ 3,723.38 ಕೋಟಿ ವ್ಯಯ

ಲೋಕಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳಿಗೆ 1951-52, 1957, 1962 ಮತ್ತು 1967 ರಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದವು. ಆದಾಗ್ಯೂ, 1968 ಮತ್ತು 1969 ರಲ್ಲಿ ಕೆಲವು ಶಾಸಕಾಂಗ ಅಸೆಂಬ್ಲಿಗಳ ಅವಧಿಪೂರ್ವ ವಿಸರ್ಜನೆಯಿಂದಾಗಿ ವ್ಯವಸ್ಥೆಗೆ ಅಡ್ಡಿಯಾಯಿತು. ಕೇಂದ್ರೀಯ ಸಂವಹನ ಕೇಂದ್ರದ ಮೂಲಕ ಕಳೆದ ಐದು ವರ್ಷಗಳಲ್ಲಿ ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳ ಜಾಹೀರಾತುಗಳಿಗಾಗಿ ಸರ್ಕಾರವು 3,723.38 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಗುರುವಾರ ರಾಜ್ಯಸಭೆಗೆ ತಿಳಿಸಲಾಗಿದೆ.

2017-18ರಲ್ಲಿ 1,220.89 ಕೋಟಿ ಜಾಹೀರಾತು ಖರ್ಚು

2017-18ರಲ್ಲಿ 1,220.89 ಕೋಟಿ ಜಾಹೀರಾತು ಖರ್ಚು

ಲಿಖಿತ ಉತ್ತರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಕಳೆದ ಐದು ವರ್ಷಗಳಲ್ಲಿ ಜಾಹೀರಾತು ಮತ್ತು ಪ್ರಚಾರದ ಮೇಲಿನ ಖರ್ಚು ಹೆಚ್ಚಿಲ್ಲ. ಸರ್ಕಾರವು ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ, 2017-18ರಲ್ಲಿ 1,220.89 ಕೋಟಿ ರೂಪಾಯಿಗಳನ್ನು ಜಾಹೀರಾತುಗಳಿಗಾಗಿ ಖರ್ಚು ಮಾಡಲಾಗಿದೆ. 2018-19 ರಲ್ಲಿ 1,106.88 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಇದು 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿರುತ್ತದೆ.

2020-21ರಲ್ಲಿ ರೂ 349.09 ಕೋಟಿ ಖರ್ಚು

2020-21ರಲ್ಲಿ ರೂ 349.09 ಕೋಟಿ ಖರ್ಚು

2019-20ರಲ್ಲಿ ಸರ್ಕಾರ 627.67 ಕೋಟಿ ರೂ. 2020-21ರಲ್ಲಿ ರೂ 349.09 ಕೋಟಿ ಮತ್ತು 2021-22ರಲ್ಲಿ ರೂ 264.78 ಕೋಟಿ ಖರ್ಚಾಗಿದೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ಡಿಸೆಂಬರ್ 9ರವರೆಗೆ ಜಾಹೀರಾತುಗಳಿಗಾಗಿ 154.07 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಠಾಕೂರ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+