ಬೆಂಗಳೂರು, ಮೇ 25: ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಅಂತಿಮ ಘಟ್ಟದತ್ತ ಸಾಗಿದೆ. ಇಂದು ಶನಿವಾರ (ಮೇ 25) ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾರರು ಮತ ಚಲಾಯಿಸಲಿದ್ದಾರೆ.
ಇದು 08 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ. ಆಯಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಈಗಾಗಲೇ ಮತಗಟ್ಟೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ನಂತರ ಜೂನ್ 01ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 04ರಂದು ಸಾರ್ವತ್ರಿಕ ಚುನಾವಣೆಯ ಎಲ್ಲ ಹಂತಗಳ ಫಲಿತಾಂಶವು ಪ್ರಕಟಗೊಳ್ಳಲಿದೆ.
ಇಂದಿನ 6ನೇ ಹಂತದ ಮತದಾನಕ್ಕೆ ಸಂಬಂಧಿಸಿದ ವಿಷಯಗಳು, ಘಟನಾವಳಿಗಳು, ಪ್ರಮುಖರ ಮತದಾನ ಹಾಗೂ ಆಯಾ ಸಮಯದಲ್ಲಿನ ಮತದಾನ ಪ್ರಮಾಣ ಸೇರಿದಂತೆ ಅನೇಕ ಲೈವ್ ಅಂಶಗಳನ್ನು ನೀವು 'ಒನ್ಇಂಡಿಯಾ ಕನ್ನಡ'ದ ನೇರಪ್ರಸಾರದಲ್ಲಿ ತಿಳಿಯಬಹದು.
May 25, 2024, 8:39 pm IST
ಶನಿವಾರ 6ನೇ ಹಂತದ ಮತದಾನ ನಡೆಯಿತು. ಸಂಜೆ 7.45ರ ತನಕ ಒಟ್ಟಾರೆ ಶೇ 59.06ರಷ್ಟು ಮತದಾನವಾಗಿದೆ.
May 25, 2024, 7:30 pm IST
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ 6ನೇ ಹಂತದಲ್ಲಿ ಸಂಜೆ 5 ಗಂಟೆಯ ತನಕ ಶೇ 57.7ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಇದುವರೆಗೂ ಶೇ 77.99ರಷ್ಟು ಮತದಾನವಾಗಿದೆ.
May 25, 2024, 6:04 pm IST
ದೆಹಲಿ
ಶನಿವಾರ 6ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ನವದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ. ಎಲ್. ಸಂತೋಷ್ ಮತದಾನ ಮಾಡಿದರು.
Performed my duty towards Democracy & exercises my rights . Voted at Booth No 63 of New Delhi AC of New Delhi PC . Voted for Viksit Bharat . pic.twitter.com/1z4w3GdeSd
— B L Santhosh ( Modi Ka Parivar ) (@blsanthosh) May 25, 2024
May 25, 2024, 5:37 pm IST
ತ್ರಿಪುರ
ತ್ರಿಪುರ ಬಿಜೆಪಿ ಅಧ್ಯಕ್ಷ ರಾಜೀವ್ ಭಟ್ಟಾಚಾರ್ಜಿ ಮತನಾಡಿ,"ದೇಶದಲ್ಲಿ ಇದುವರೆಗೂ ನಡೆದ ಮತದಾನದ ಟ್ರೆಂಡ್ ನೋಡಿದರೆ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ" ಎಂದರು.
May 25, 2024, 4:14 pm IST
ಮಧ್ಯಾಹ್ನ 3 ಗಂಟೆವರೆಗೆ 58 ಸ್ಥಾನಗಳಲ್ಲಿ 49% ಮತದಾನ
ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ 70% ಮತದಾನವಾಗಿದೆ, ಆದರೆ ಉತ್ತರ ಪ್ರದೇಶದಲ್ಲಿ 43.95 % ಮತದಾನವಾಗಿದೆ. ದೆಹಲಿಯಲ್ಲಿ 44.58% ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ರಜೌರಿ ಕ್ಷೇತ್ರದಲ್ಲಿ 44.41% ಮತದಾನ ಆಗಿದೆ. ಜಾರ್ಖಂಡ್ನಲ್ಲಿ 54.34%, ಹರಿಯಾಣದಲ್ಲಿ 46.26 ಮತ್ತು ಬಿಹಾರದಲ್ಲಿ 45.21% ಮತದಾನ ಆಗಿದೆ.
May 25, 2024, 4:10 pm IST
ಮಧ್ಯಾಹ್ನ 3 ಗಂಟೆಯವರೆಗೆ ಶೇ.44.58ರಷ್ಟು ಮತದಾನ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ 44.58% ಮತದಾನವಾಗಿದೆ. ಪೂರ್ವ ದೆಹಲಿ ಕ್ಷೇತ್ರದಲ್ಲಿ 44.70%, ಈಶಾನ್ಯ ದೆಹಲಿಯಲ್ಲಿ 47.85% ಮತ್ತು ದಕ್ಷಿಣ ದೆಹಲಿ ಕ್ಷೇತ್ರದಲ್ಲಿ 42.96% ಮತದಾನವಾಗಿದೆ ಎಂದು ಕೇಂದ್ರ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
May 25, 2024, 2:41 pm IST
ಜಾರ್ಖಂಡ್
ಮಾಜಿ ಸಿಎಂ ಪತ್ನಿ ಕಲ್ಪನಾ ಸೊರೆನ್ ಮತ ಚಲಾವಣೆ
ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಮತದಾನ ಮಾಡಿದರು. ಮತದಾನದ ಮಾಹಿತಿಯನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡರು. ಇಂದು, ಅನ್ಯಾಯದ ವಿರುದ್ಧ ನ್ಯಾಯದ ಬೃಹತ್ ವಿಜಯಕ್ಕಾಗಿ ಈ ಮಹಾ ಚುನಾವಣೆಯ ಉತ್ಸವದಲ್ಲಿ ಭಾಗವಹಿಸುವ ಮೂಲಕ ನಾನು ಮತದಾನದ ಹಕ್ಕನ್ನು ಚಲಾಯಿಸಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಮತಗಟ್ಟೆಯನ್ನು ತಲುಪಿ ಮತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಅವರು ಕರೆ ನೀಡಿದರು.
#WATCH | Kalpana Soren, wife of former Jharkhand CM Hemant Soren & JMM candidate for Gandey assembly by-election arrives at a polling station in Ranchi to cast her vote for #LokSabhaElections2024pic.twitter.com/fvY9wtxTQU
ಲೋಕಸಭಾ ಚುನಾವಣೆಯ 6 ನೇ ಹಂತದ ಮತದಾನ ನಡೆಯುತ್ತಿರುವ ಎಲ್ಲ ರಾಜ್ಯಗಳಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮತದಾನದ ಪ್ರಮಾಣ ಸರಿಸುಮಾರು 39.13 ರಷ್ಟು ಆಗಿದೆ. ರಾಜ್ಯವಾರು ಮತದಾರರ ಮಾಹಿತಿ ನೋಡುವುದಾದರೆ, 'ಬಿಹಾರದಲ್ಲಿ- 36.48%, ಹರಿಯಾಣ- 36.48%, ಜಮ್ಮು ಮತ್ತು ಕಾಶ್ಮೀರ- 35.22%, ಜಾರ್ಖಂಡ್- 42.54%, ದೆಹಲಿಯ NCT- 34.37%, ಒಡಿಶಾ 35.69%, ಉತ್ತರ ಪ್ರದೇಶ 37.23 % ಮತ್ತು ಪಶ್ಚಿಮ ಬಂಗಾಳದಲ್ಲಿ 54.80 % ಮತದಾನ ಆಗಿದೆ ಎಂದು ಕೇಂದ್ರ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
— Election Commission of India (@ECISVEEP) May 25, 2024
May 25, 2024, 1:45 pm IST
ಪಶ್ಚಿಮ ಬಂಗಾಳ
ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟನೆ
ಪಶ್ಚಿಮ ಬಂಗಾಳದಲ್ಲಿ ಇಂದು ಮತದಾನ ಸರಾಗವಾಗಿ ಸಾಗಿತ್ತು. ಇಲ್ಲಿನ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಪ್ರತಿಭಟನಾಕಾರರ ಗುಂಪು ಘಟಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಿರಾನ್ ಚಟರ್ಜಿ ಅವರನ್ನು ತಡೆದು ನಿಲ್ಲಿಸಿತು. ಚಟರ್ಜಿ ಅವರು ಬೆಳಗ್ಗೆಯಿಂದಲೇ ಕ್ಷೇತ್ರದ ವಿವಿಧ ಬೂತ್ಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಟಿಎಂಸಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ. ನಮ್ಮ ಕಾರ್ಯಕರ್ತರನ್ನು ಪೋಲಿಂಗ್ ಏಜೆಂಟ್ಗಳನ್ನು (ಮತಗಟ್ಟೆಯಲ್ಲಿ) ಕುಳಿತುಕೊಳ್ಳಲು ಬಿಡುತ್ತಿಲ್ಲ. ಪೊಲೀಸರು, ಕೇಂದ್ರ ರಕ್ಷಣಾ ಪಡೆ ಟಿಎಂಸಿ ಸೋಲಿಸಲು ಈ ಮೂಲಕ ಪ್ರಯತ್ನಿಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ನೋಡು ನೋಡುತ್ತಲೆ ಗುಂಪುಗೂಡಿ ಪ್ರತಿಭಟನೆ ಆರಂಭಿಸಲಾಯಿತು. ನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
May 25, 2024, 1:21 pm IST
ಹಿಮಾಚಲ ಪ್ರದೇಶ
ಬಿಜೆಪಿಗೆ ಅತ್ಯಧಿಕ ಸ್ಥಾನ: ಕೇಂದ್ರ ಗೃಹ ಸಚಿವ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಮಾಚಲ ಪ್ರದೇಶದಲ್ಲಿ ಹಮೀರ್ಪುರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ಉದ್ದೇಶಿಸಿ ಮಾತನಾಡಿದರು. 5 ಹಂತದ ಚುನಾವಣೆಗಳು ಪೂರ್ಣಗೊಂಡಿವೆ, ಇಂದು ಆರನೇ ಹಂತದ ಮತದಾನ ನಡೆಯುತ್ತಿದೆ. ಪ್ರಧಾನಿ ಮೋದಿ 5 ಹಂತಗಳಲ್ಲಿ 310 ದಾಟಿದ್ದಾರೆ. ಮೋದಿ ಆರು ಮತ್ತು ಏಳನೇ ಹಂತದಲ್ಲಿ 400 ದಾಟಲಿದ್ದಾರೆ. ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#WATCH Una, Himachal Pradesh: Union Home Minister Amit Shah, while addressing a rally in Hamirpur Lok Sabha constituency, says, "5 phases of elections have been completed, today the sixth phase of voting is going on. PM Modi has crossed 310 in 5 phases. PM Modi has to be made the… pic.twitter.com/gFz0FRi8KO
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಜಾರ್ಖಂಡ್ನ ರಾಂಚಿಯ ಜವಾಹರ್ ವಿದ್ಯಾ ಮಂದಿರ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರು ಮತದಾನ ಮಾಡಲಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ಲೋಕಸಭೆಯ ಆರನೇ ಹಂತದ ಮತದಾನದಲ್ಲಿ ಮತದಾರರ ಉತ್ಸಾಹ ಕಂಡು ಬಂತು. ಈ ಮತದಾನ ಪ್ರಕ್ರಿಯೆಯಲ್ಲಿ ತೃತೀಯಲಿಂಗಿ ಮತದಾರರೂ ಮತ ಚಲಾಯಿಸಿದರು. 1-ವಾಲ್ಮೀಕಿ ನಗರ, 2-ಪಶ್ಚಿಮ ಚಂಪಾರಣ್, 3-ಪೂರ್ವ ಚಂಪಾರಣ್, 4-ಶಿವ್ಹಾರ್, 16-ವೈಶಾಲಿ, 17-ಗೋಪಾಲಗಂಜ್, 18-ಸಿವಾನ್, 19-ಮಹಾರಾಜ್ಗಂಜ್ ನಲ್ಲಿ ಮತದಾನ ಮುಂದುವರಿದಿದೆ.
May 25, 2024, 12:58 pm IST
ದೆಹಲಿ
ದೆಹಲಿ ಎನ್ಸಿಟಿಯಲ್ಲಿ 1.52 ಕೋಟಿ ಅರ್ಹ ಮತದಾರರು
2.52 ಲಕ್ಷಕ್ಕೂ ಹೆಚ್ಚು ಮೊದಲ ಬಾರಿಗೆ ಮತದಾರರು ಸೇರಿದಂತೆ 1.52 ಕೋಟಿ ಅರ್ಹ ಮತದಾರರನ್ನು ಹೊಂದಿರುವ ಬಿಜೆಪಿ ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಎಎಪಿ ಮತ್ತು ಕಾಂಗ್ರೆಸ್ ಒಳಗೊಂಡಿರುವ ಪ್ರತಿಪಕ್ಷ ಭಾರತ ಬಣವು ನಾಲ್ಕು-ಮೂರು ಸೀಟು-ಪಾಲಿಕೆಯ ಸೂತ್ರದ ಅಡಿಯಲ್ಲಿ ಸ್ಪರ್ಧ ನಡೆದಿದೆ. ದೆಹಲಿ ಇದು ಜಂಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಮೊದಲ ಲೋಕಸಭಾ ಚುನಾವಣೆ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
May 25, 2024, 12:38 pm IST
ಪಶ್ಚಿಮ ಬಂಗಾಳ
58 ಕ್ಷೇತ್ರಗಳಲ್ಲಿ 11 ಗಂಟೆವರೆಗೆ 25.76% ಮತದಾನ
ಇಂದು ನಡೆಯುತ್ತಿರುವ ಲೋಕಸಭೆಯ ಆರನೇ ಹಂತದ ಚುನಾವಣೆಯಲ್ಲಿ ಎಲ್ಲ 58 ಸ್ಥಾನಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇಕಡಾ 25.76ರಷ್ಟು ಮತದಾನ ಆಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ 36.88%, ಯುಪಿಯಲ್ಲಿ 27.06% ದಾಖಲಾಗಿದೆ. ದೆಹಲಿಯಲ್ಲಿ 21.69% ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ರಜೌರಿ ಕ್ಷೇತ್ರದಲ್ಲಿ 23.1% ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಹೆಚ್ಚು ಮತದಾನ ಆಗಿದೆ ಎಂದು ಚುನಾವಣಾ ಸಮಿತಿ ತಿಳಿಸಿದೆ.
May 25, 2024, 12:30 pm IST
ಪಶ್ಚಿಮ ಬಂಗಾಳ
ಬಿಜೆಪಿ ಅಭ್ಯರ್ಥಿಗಳಿಗೆ ಗ್ರಾಮಸ್ಥರ 'ಗೋಬ್ಯಾಕ್' ಘೋಷಣೆ
ತಮ್ಲುಕ್ನ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಮತದಾನ ವೇಳೆ ತೀವ್ರ ಹಿನ್ನಡೆ ಆಯಿತು. ಮತದಾರರಲ್ಲಿ ಕೆಲವರು ಅಭಿಜಿತ್ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು. ಅದೇ ರೀತಿ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಿರಾನ್ ಚಟ್ಟೋಪಾಧ್ಯಾಯ ಅವರಿಗೆ ಕೇಶ್ಪುರ ಗ್ರಾಮಸ್ಥರಿಂದ ಮತದಾನಕ್ಕೆ ಅಡ್ಡಿಪಡಿಸಿದರು. ಇಲ್ಲಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ಮೇಲೆ ನಿಮ್ಮ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
May 25, 2024, 12:15 pm IST
ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ಶೇ. 12.33 ಮತದಾನ
ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇಕಡಾ 12.33 ರಷ್ಟು ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಲಿದೆ. ಅಲಹಾಬಾದ್ನಲ್ಲಿ ಶೇ.9.37, ಅಂಬೇಡ್ಕರ್ ನಗರದಲ್ಲಿ ಶೇ.14.61, ಅಜಂಗಢದಲ್ಲಿ ಶೇ.14.17, ಬಸ್ತಿಯಲ್ಲಿ ಶೇ.14.26, ಭದೋಹಿಯಲ್ಲಿ ಶೇ.12.84, ಡೊಮರಿಯಾಗಂಜ್ನಲ್ಲಿ ಶೇ.13.38, ಜಾನ್ಪುರದಲ್ಲಿ ಶೇ.12.91ರಷ್ಟು ಮತದಾನವಾಗಿದೆ.
May 25, 2024, 12:12 pm IST
ಬಿಹಾರ
ಸರತಿ ಸಾಲಿನಲ್ಲಿ ನಿಂತು ಬಿಹಾರದ ಜನರಿಂದ ಮತದಾನ
ಬಿಹಾರದ ಶಿವಹರ್ ಕ್ಷೇತ್ರದಲ್ಲಿ ಲೋಕಸಭೆಯ ಆರನೇ ಹಂತದ ಮತದಾನದಲ್ಲಿ ಮತದಾರರಲ್ಲಿ ಅತ್ಯುತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು, ಮತ ಚಲಾಯಿಸಿದರು. ಎಲ್ಲರು ಒಟ್ಟಾಗಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿ ಆದರು.
शिवहर: लोकसभा के छठे चरण के मतदान में मतदाताओं में दिखा उत्साह। कोई भी वोट छूटे नहीं, आएं हम सब मिलकर वोट करें।
छठे चरण के लोकसभा निर्वाचन क्षेत्र- 1-वाल्मीकि नगर, 2-पश्चिमी चंपारण, 3-पूर्वी चंपारण, 4-शिवहर, 16-वैशाली, 17-गोपालगंज, 18-सिवान, 19-महाराजगंज pic.twitter.com/5so07xhkyD
— Chief Electoral Officer, Bihar (@CEOBihar) May 25, 2024
May 25, 2024, 12:08 pm IST
ದೆಹಲಿ
ಕುಟುಂಬ ಸಮೇತರಾಗಿ ECI ಮುಖ್ಯಸ್ಥರಿಂದ ಮತದಾನ
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಂದು ದೆಹಲಿಯಲ್ಲಿ ಮತ ಚಲಾಯಿಸಿದರು. ಬಳಿಕ ಮತಗಟ್ಟೆಯ ಹೊರಗೆ ತಮ್ಮ ಶಾಯಿಯ ಬೆರಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು. ಇವರ ಉಸ್ತುವಾರಿಯಲ್ಲಿ ಭಾರತದ ಸಾರ್ವತ್ರಿಕ ಚುನಾವಣೆ 2024ರ 5 ಹಂತಗಳಲ್ಲಿ ಮತದಾನ ಯಶಸ್ವಿಯಾಗಿ ನಡೆದಿದೆ, ಇದೀಗ 6 ನೇ ಹಂತದ ಮತದಾನ ನಡೆಯುತ್ತಿದೆ.
CEC Rajiv Kumar votes with his family and proudly displays his inked finger outside a Polling Station in Delhi.
— Election Commission of India (@ECISVEEP) May 25, 2024
May 25, 2024, 12:05 pm IST
ಬಿಹಾರ
ಬಿಹಾರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ 23.67% ಮತದಾನ
ಬಿಹಾರದಲ್ಲಿ 8 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬಿಹಾರದಲ್ಲಿ ಆರನೇ ಹಂತದಲ್ಲಿ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯವರೆಗೆ ಬಿಹಾರದಲ್ಲಿ ಒಟ್ಟು ಶೇ.23.67ರಷ್ಟು ಮತದಾನವಾಗಿದೆ. ಗೋಪಾಲಗಂಜ್ ಕ್ಷೇತ್ರದಲ್ಲಿ 22.61% ಮತದಾನ, ವೈಶಾಲಿಯಲ್ಲಿ ಶೇ.27.98 % ಮತದಾನ, ಮಹಾರಾಜಗಂಜ್ 23.57% ಮತದಾನ, ಪಶ್ಚಿಮ ಚಂಪಾರಣ್ ಶೇ 23.84% ಮತದಾನ, ಪೂರ್ವ ಚಂಪಾರಣ್ ಶೇ.23.10ರಷ್ಟು ಮತದಾನ, ಸಿವಾನ್ 22.42%, ಶೆಯೋಹರ್ ನಲ್ಲಿ ಶೇ 25.77% ಹಾಗೂ ವಾಲ್ಮೀಕಿನಗರದಲ್ಲಿ ಬೆಳಗ್ಗೆ 11ರವರೆಗೆ ಶೇ.20.11 ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
May 25, 2024, 11:54 am IST
ದೆಹಲಿ
ಅಮಾನತುಗೊಂಡಿರುವ ನೂಪುರ್ ಶರ್ಮಾ ಮತದಾನ
ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಇಂದು ದೆಹಲಿಯಲ್ಲಿ ಮತ ಚಲಾಯಿಸಿದರು. ಮೇ 2022 ರಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವು ಮೂಲಕ ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿದ್ದರು. ನಂತರ ಅವರನ್ನು ಪಕ್ಷದ ವಕ್ತಾರರ ಜವಾಬ್ದಾರಿಯಿಂದ ಬಿಜೆಪಿಯು ಜೂನ್ 2022 ರಲ್ಲಿ ಮಾನತುಗೊಳಿಸಿತ್ತು. ಇಂದು ಅವರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ.
ಇಂದು ದೆಹಲಿ ಆರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಷ್ಟ್ರಪತಿ ಭವನದ ಸಂಕೀರ್ಣದಲ್ಲಿರುವ ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತದಾರರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ಮತದಾನ ಮಾಡಿದ ಹೆಮ್ಮೆಯ ಮತದಾರ ಎಂದು ಶಾಹಿ ಗುರುತಿನ ಬೆರೆಳು ಪ್ರದರ್ಶಿಸಿದರು.
May 25, 2024, 11:14 am IST
ದೆಹಲಿ
ದೆಹಲಿ ಸಿಎಂ ಕೇಜ್ರಿವಾಲ್ ಮತದಾನ
ನವದದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಕುಟುಂಬ ಸದಸ್ಯರೊಂದಿಗೆ ದೆಹಲಿಯ ಮತಗಟ್ಟೆಗೆ ಆಗಮಿಸಿ ಆರನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಸದ್ಯ ಇವರು ಅಬಕಾರಿ ನೀತಿ ಹಗರಣ, ಹಣ ವರ್ಗಾವಣೆ ಪ್ರಕರಕ್ಕೆ ಸಂಬಂಧಿಸಿದಂತೆ ಜೂನ್ 1ರವರೆಗೆ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
6ನೇ ಹಂತದ ಚುನಾವಣೆಗೆ ಮತದಾ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 10.82ರಷ್ಟು ಮತದಾನವಾಗಿದೆ. ಬಿಹಾರ- 9.66% ಹರಿಯಾಣ- 8.31% ಜಮ್ಮು ಮತ್ತು ಕಾಶ್ಮೀರ- 8.89% ಜಾರ್ಖಂಡ್- 11.74% ದೆಹಲಿ- 8.94% ಒಡಿಶಾ- 7.43% ಉತ್ತರ ಪ್ರದೇಶ-12.33 ಪಶ್ಚಿಮ ಬಂಗಾಳ- 16.54% ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
May 25, 2024, 9:47 am IST
ದೆಹಲಿ
ಸ್ವಾತಿ ಮಲಿವಾಲ್ ಮತದಾನ, ಜಾಗೃತಿ
ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತದಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ಭಾಗವಹಿಸುವಂತೆ ಒತ್ತಾಯಿಸಿದರು. ಮತದಾನ ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. "ಭಾರತದಲ್ಲಿ, ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಅವರು ಪ್ರತಿಪಾದಿಸಿದರು.
#WATCH | Aam Aadmi Party Rajya Sabha MP Swati Maliwal says "It is a very big day for the democracy. I want to appeal to everyone, especially women to come out and cast their votes. In India, women's participation in politics is very important." pic.twitter.com/xZFpcbxquK
ಇಂದು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಯಾವೆಲ್ಲ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ ಎಂಬುದವರ ವಿವರ ಈ ಕಾರ್ಡ್ನಲ್ಲಿದೆ.
May 25, 2024, 9:25 am IST
ದೆಹಲಿ
ರೈಹಾನ್ ರಾಜೀವ್ ವಾದ್ರಾ ಮತದಾನ: ಹೇಳಿಕೆ
ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ರಾಜೀವ್ ವಾದ್ರಾ ಮತದಾನ ಬಳಿಕ ಮಾತನಾಡಿದರು. ಮತದಾನ ದೇಶದ ಬದಲಾಣೆಗೆ ಬಹಳ ಮುಖ್ಯವಾಗಿದೆ. ಇದು ಮುಖ್ಯವಾದ ಚುನಾವಣೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸಂವಿಧಾನವನ್ನು ಉಳಿಸಲು ಮತ್ತು ಧನಾತ್ಮಕತೆಯನ್ನು ತರುವ ರೀತಿಯಲ್ಲಿ ಮತ ಚಲಾಯಿಸಲು ನಾನು ಎಲ್ಲಾ ಯುವಕರನ್ನು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.
#WATCH | After casting vote, Raihan Rajiv Vadra, son of Robert Vadra and Congress leader Priyanka Gandhi Vadra says, "I think this is a very important election. I encourage all the youth to vote to save our Constitution and to vote in a way that brings positive change."
ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಮಕ್ಕಳಾದ ರೈಹಾನ್ ರಾಜೀವ್ ವಾದ್ರಾ ಮತ್ತು ಮಿರಯಾ ವಾದ್ರಾ ಅವರು ಇಂದು ದೆಹಲಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತದಾನಕ್ಕಾಗಿ ಮಕ್ಕಳು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡು ಬಂದವು.
May 25, 2024, 8:43 am IST
ದೆಹಲಿ
ಮತದಾನ ಮಾಡಿದ ಮೊದಲ ಹಿರಿಯ ನಾಗರಿಕರು
NCW ಮುಖ್ಯಸ್ಥೆ ರೇಖಾ ಶರ್ಮಾ ಅವರು ಬೂತ್ನಲ್ಲಿ ಮೊದಲ ಹೆಮ್ಮೆಯ ಹಿರಿಯ ನಾಗರಿಕರಾಗಿ ಮತ ಚಲಾಯಿಸಿದರು.
ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯು) ಮುಖ್ಯಸ್ಥೆ ರೇಖಾ ಶರ್ಮಾ ಅವರು ಶನಿವಾರ ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ ಮತದಾನ ಮಾಡಿದರು. ನಿರ್ದಿಷ್ಟ ಬೂತ್ನಲ್ಲಿ ಮತ ಚಲಾಯಿಸಿದ ಮೊದಲ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಯನ್ನು ಅವರು ವ್ಯಕ್ತಪಡಿಸಿದರು.
May 25, 2024, 8:37 am IST
ದೆಹಲಿ
ಕಾಂಗ್ರೆಸ್ ಆಯ್ಕೆಯಿಂದ ದೇಶದ ಸೈನ್ಯ ದುರುಪಯೋಗ
ಈಶಾನ್ಯ ದೆಹಲಿಯ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಅವರು ಇಂದು ಮತದಾನ ಮಾಡಿದರು. ಕಾಂಗ್ರೆಸ್ (ಕನ್ಹಯ್ಯಾ ಕುಮಾರ್) ಆಯ್ಕೆ ಮಾಡಿದರೆ ಅವರು ದೇಶದ ಸೈನ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಮತದಾರರು ಸಹ ಅವರಿಗೆ ಮತ ಹಾಕುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಮತ ನಿರಾಕರಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವು ದೇಶದ ಅಭಿವೃದ್ಧಿಗಾಗಿ ಮತ್ತು ಪ್ರಧಾನಿ ಮೋದಿಗೆ ಮತ ಹಾಕಬೇಕು ಎಂದು ಅವರ ಹೇಳಿದರು.
#WATCH | Delhi: MP & BJP candidate from North-East Delhi, Manoj Tiwari says "The candidate chosen by Congress (Kanhaiya Kumar) has been abusing the army of the country. I think even the traditional voters will not vote for him. They will refuse to vote but will not cast their… pic.twitter.com/1R3frEUrpF
ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಇಂದು ಮತದಾನ ಮಾಡಿದರು. ಅವರು ಈ ಬಾರಿಯ ಲೋಕಸಭಾ ಚುನಾವಣೆಯ ರಸ್ನಲ್ಲಿ ಇಲ್ಲವಾದರೂ ಸಹಿತ ಅವರು ಅತ್ಯಂತ ಜನಪ್ರಿಯ ಹಾಲಿ ಸಂಸದರಲ್ಲಿ ಒಬ್ಬರಾಗಿದ್ದಾರೆ. ಮತದಾನದ ಮೂಲಕ ಅವರು ಜಾಗೃತಿ ಮೂಡಿಸಿದರು.
READ MORE
6:45 PM, 24 May
ಇಂದು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಹರಿಯಾಣದಂತಹ ಕೆಲವು ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲೋಕಸಭಾ ಕ್ಷೇತ್ರಗಳು 6 ನೇ ಹಂತದಲ್ಲಿ ಮತದಾನ ಪ್ರಕ್ರಿಯೆಗೆ ಸಾಕ್ಷಿಯಾಗಲಿವೆ.
6:46 PM, 24 May
ಇದೇ ಮೇ 20ರಂದು 49 ಲೋಕಸಭಾ ಕ್ಷೇತ್ರಗಳಿಗೆ ಐದನೇ ಹಂತದ ಮತದಾನ ನಡೆದಿತ್ತು. ಮುಂದೆ ಜೂನ್ 1ರಂದು ಕೊನೆಯ 07ನೇ ಹಂತದ ಮತದಾನ ನಡೆಯಲಿದೆ. ಜೂನ್ 04ರಂದು ಈ ಏಳು ಹಂತಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
6:46 PM, 24 May
ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧವಾಗಿ ಒಗ್ಗೂಡಿರುವ ವಿಪಕ್ಷಗಳು ಈಗಾಗಲೇ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಈ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಹಠ ತೊಟ್ಟಿರುವ ಮೈತ್ರಿಕೂಟವು ಹಲವು ಭರವಸೆಗಳನ್ನು ತನ್ನ ಪ್ರಣಾಳಿಕೆ ಘೋಷಿಸಿದೆ. ಉದ್ಯೋಗ ಸೃಷ್ಟಿ, ಆರ್ಥಿಕತೆ ಸುಧಾರಣೆಯಂತಹ ಹಲವು ಅಂಶಗಳನ್ನು ಜಾರಿತ ತರುವ ಭರವಸೆ ನೀಡಿದೆ.
6:16 AM, 25 May
ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಭದ್ರತೆ
ಆರನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮತ್ರು ಸಿಬ್ಬಂದಿ ಇವಿಎಂ, ವಿವಿ ಪ್ಯಾಟ್ ಗಳ ಸಹಿತ ಶುಕ್ರವಾರ ಸಂಜೆ ನಿಗದಿತ ವಾಹನಗಳಲ್ಲಿ ಅಯಾ ಮತಗಟ್ಟೆಗೆ ತೆರಳಿದರು. ಇಂದು ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ
ಒಡಿಶಾದ ಭುವನೇಶ್ವರದಲ್ಲಿರುವ ಮತಗಟ್ಟೆಯಲ್ಲಿ ಸಿದ್ಧತೆಗಳು, ಅಣಕು ಮತದಾನ ನಡೆಯಿತು. 2024 ರ ಸಾರ್ವತ್ರಿಕ ಚುನಾವಣೆಯ 6 ನೇ ಹಂತದಲ್ಲಿ ಒಡಿಶಾದ 6 ಸಂಸದೀಯ ಕ್ಷೇತ್ರಗಳು ಮತ್ತು 42 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ.
Voting will be held in 6 Parliamentary constituencies and 42 Assembly constituencies in Odisha, in the 6th phase of 2024 general elections. pic.twitter.com/Z29I8IhREw
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಚಾಂದಿನಿ ಚೌಕ್, ಈಶಾನ್ಯ ದೆಹಲಿ, ವಾಯುವ್ಯ ದೆಹಲಿ, ನವದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರಗಳ ಮತದಾರರು ಇಂದು ಮತದಾನ ಮಾಡಲಿದ್ದಾರೆ.
6:45 AM, 25 May
ದೆಹಲಿ LG ಆದೇಶದ ಮತದಾನಕ್ಕೆ ಅಡಚಣೆ: ಎಎಪಿ
ಭಾರತ ಬಣವನ್ನು ಬೆಂಬಲಿಸುವ ಗಣನೀಯ ಸಂಖ್ಯೆಯ ಮತದಾರರಿರುವ ಪ್ರದೇಶಗಳಲ್ಲಿ ಮತದಾನಕ್ಕೆ ಅಡ್ಡಿಯಾಗುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದೆಹಲಿ ಪೊಲೀಸರಿಗೆ ಆದೇಶಗಳನ್ನು ನೀಡಿದ್ದಾರೆ. ಹೀಗೆಂದು ಎಂದು ದೆಹಲಿ ಜಲ ಸಚಿವ ಅತಿಶಿ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
7:11 AM, 25 May
1.14 ಲಕ್ಷ ಮತಗಟ್ಟೆಗಳ ಸ್ಥಾಪನೆ
ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನಕ್ಕಾಗಿ 1.14 ಲಕ್ಷ ಮತಗಟ್ಟೆಗಳಲ್ಲಿ ಸುಮಾರು 11.4 ಲಕ್ಷ ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 11.13 ಕೋಟಿ ಮತದಾರರು 5.84 ಕೋಟಿ ಪುರುಷರು; 5.29 ಕೋಟಿ ಮಹಿಳೆಯರು ಮತ್ತು 5120 ತೃತೀಯಲಿಂಗಿ ಮತದಾರರು ಇದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
7:28 AM, 25 May
ಒಡಿಶಾ ಬಿಜೆಪಿ ಅಭ್ಯರ್ಥಿಯಿಂದ ದೇಗುಲ ಭೇಟಿ
ಒಡಿಶಾ ರಾಜ್ಯದ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಪುರಿಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇಂದು ಪುರಿ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ. ಮತದಾನಕ್ಕೂ ಮೊದಲು ಅವರು ದೇವರ ಮೊರೆ ಹೋಗಿದ್ದು ಕಂಡು ಬಂತು.
ಇಂದು ದೆಹಲಿಯಲ್ಲೂ ಆರನೇ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಇಂದು ದೆಹಲಿದೆ ಭಾರತ್ ನಗರದ SKV ಯಲ್ಲಿ ಮತದಾನದ ನಂತರ EVM/VVPAT ಭದ್ರವಾಗಿ ಇರಿಸುವ ದೃಷ್ಟಿಯಿಂದ ಈ ಭಾಗದಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಇಂದು ಸಂಜೆ 5ಗಂಟೆಯಿಂದ ನಾಳೆ ಮೇ 26ರ ಬೆಳಗ್ಗೆ 5 ಗಂಟೆವರೆಗೂ ಈ ಸಂಚಾರ ನಿರ್ಬಂದ ಜಾರಿಯಲ್ಲಿರುತ್ತದೆ. ಜೊತೆಗೆ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
Traffic Advisory
In view of deposition of EVM/VVPAT at SKV, Bharat Nagar on 25.05.2024, traffic restrictions will be effective from 5:00 PM on 25.05.2024 to 5:00 AM on 26.05.2024. Kindly follow the advisory.#DPTrafficAdvisorypic.twitter.com/75FlimR8vp
ರಾಷ್ಟ್ರ ರಾಜಧಾನಿ ನವದೆಹಲಿಯ ಮತಗಟ್ಟೆಯೊಂದರಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಅವರ ಪತ್ನಿ ಲಕ್ಷ್ಮಿ ಪುರಿ ಅವರು ಮತ ಚಲಾಯಿಸಿದರು. ಬಳಿಕ ತಮ್ಮ ಕೈಬೆರಳಿಗೆ ಹಾಕಿದ ಶಾಯಿಯ ಗುರುತುಗಳನ್ನು ತೋರಿಸಿದರು. ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ದೆಹಲಿಯಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಈಶಾನ್ಯ ದೆಹಲಿಗೆ ಮನೋಜ್ ತಿವಾರಿ, ಪಕ್ಷದಿಂದ ಮತ್ತೊಮ್ಮೆ ಕಣಕ್ಕಿಳಿದ ದೆಹಲಿಯ ಏಕೈಕ ಹಾಲಿ ಸಂಸದರಾಗಿದ್ದಾರೆ. ಇತ್ತ ರಾಮ್ವೀರ್ ಸಿಂಗ್ ಬಿಧುರಿ ದಕ್ಷಿಣ ದೆಹಲಿ, ಬಾನ್ಸುರಿ ಸ್ವರಾಜ್ ನವದೆಹಲಿ, ಹರ್ಷ್ ದೀಪ್ ಮಲ್ಹೋತ್ರಾ ಪೂರ್ವ ದೆಹಲಿ ಅಭ್ಯರ್ಥಿಗಳು. ಯೋಗೇಂದ್ರ ಚಂದೋಲಿಯಾ ವಾಯವ್ಯ ದೆಹಲಿ, ಚಾಂದಿನಿ ಚೌಕ್ಗೆ ಪ್ರವೀಣ್ ಖಂಡೇಲ್ವಾಲ್ ಮತ್ತು ಪಶ್ಚಿಮಕ್ಕೆ ಕಮಲ್ಜೀತ್ ಸೆಹ್ರಾವತ್ ಅವರು ಕಣದಲ್ಲಿದ್ದಾರೆ.
8:26 AM, 25 May
ದೆಹಲಿ
ದೆಹಲಿಯಲ್ಲಿ ಬಿಜೆಪಿಗೆ ಗೆಲುವ: ಪುರಿ ವಿಶ್ವಾಸ
ಮತದಾನ ಮಾಡಿ ಮಾತನಾಡಿದ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕು. ಭಾರತದಲ್ಲಿ ರಾಜಕೀಯ ಪ್ರಜ್ಞೆ ತುಂಬಾ ಹೆಚ್ಚಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಸ್ಪಷ್ಟವಾಗಿವೆ, ಪರಿಹಾರಕ್ಕಾಗಿ ನೀವು ಮತ ಚಲಾಯಸಬೇಕು. ಆದರೆ ಪ್ರತಿಪಕ್ಷಗಳು ಸೆಲ್ಫ್-ಗೋಲ್ ಗಳಿಸುವ ಪ್ರಕ್ರಿಯೆಯಲ್ಲಿ ಸುಳ್ಳು ನಿರೂಪಣೆಯನ್ನು ರಚಿಸಲು ಪ್ರಯತ್ನಿಸುತ್ತಿವೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
8:29 AM, 25 May
ದೆಹಲಿ
ಗೌತಮ್ ಗಂಭೀರ್ ಮತದಾನ
ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಇಂದು ಮತದಾನ ಮಾಡಿದರು. ಅವರು ಈ ಬಾರಿಯ ಲೋಕಸಭಾ ಚುನಾವಣೆಯ ರಸ್ನಲ್ಲಿ ಇಲ್ಲವಾದರೂ ಸಹಿತ ಅವರು ಅತ್ಯಂತ ಜನಪ್ರಿಯ ಹಾಲಿ ಸಂಸದರಲ್ಲಿ ಒಬ್ಬರಾಗಿದ್ದಾರೆ. ಮತದಾನದ ಮೂಲಕ ಅವರು ಜಾಗೃತಿ ಮೂಡಿಸಿದರು.
8:37 AM, 25 May
ದೆಹಲಿ
ಕಾಂಗ್ರೆಸ್ ಆಯ್ಕೆಯಿಂದ ದೇಶದ ಸೈನ್ಯ ದುರುಪಯೋಗ
ಈಶಾನ್ಯ ದೆಹಲಿಯ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಅವರು ಇಂದು ಮತದಾನ ಮಾಡಿದರು. ಕಾಂಗ್ರೆಸ್ (ಕನ್ಹಯ್ಯಾ ಕುಮಾರ್) ಆಯ್ಕೆ ಮಾಡಿದರೆ ಅವರು ದೇಶದ ಸೈನ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಮತದಾರರು ಸಹ ಅವರಿಗೆ ಮತ ಹಾಕುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಮತ ನಿರಾಕರಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವು ದೇಶದ ಅಭಿವೃದ್ಧಿಗಾಗಿ ಮತ್ತು ಪ್ರಧಾನಿ ಮೋದಿಗೆ ಮತ ಹಾಕಬೇಕು ಎಂದು ಅವರ ಹೇಳಿದರು.
#WATCH | Delhi: MP & BJP candidate from North-East Delhi, Manoj Tiwari says "The candidate chosen by Congress (Kanhaiya Kumar) has been abusing the army of the country. I think even the traditional voters will not vote for him. They will refuse to vote but will not cast their… pic.twitter.com/1R3frEUrpF
NCW ಮುಖ್ಯಸ್ಥೆ ರೇಖಾ ಶರ್ಮಾ ಅವರು ಬೂತ್ನಲ್ಲಿ ಮೊದಲ ಹೆಮ್ಮೆಯ ಹಿರಿಯ ನಾಗರಿಕರಾಗಿ ಮತ ಚಲಾಯಿಸಿದರು.
ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯು) ಮುಖ್ಯಸ್ಥೆ ರೇಖಾ ಶರ್ಮಾ ಅವರು ಶನಿವಾರ ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ ಮತದಾನ ಮಾಡಿದರು. ನಿರ್ದಿಷ್ಟ ಬೂತ್ನಲ್ಲಿ ಮತ ಚಲಾಯಿಸಿದ ಮೊದಲ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಯನ್ನು ಅವರು ವ್ಯಕ್ತಪಡಿಸಿದರು.
9:15 AM, 25 May
ದೆಹಲಿ
ಪ್ರಿಯಾಂಕಾ ಗಾಂಧಿ ಮಕ್ಕಳ ಮತದಾನ
ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಮಕ್ಕಳಾದ ರೈಹಾನ್ ರಾಜೀವ್ ವಾದ್ರಾ ಮತ್ತು ಮಿರಯಾ ವಾದ್ರಾ ಅವರು ಇಂದು ದೆಹಲಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತದಾನಕ್ಕಾಗಿ ಮಕ್ಕಳು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡು ಬಂದವು.
9:25 AM, 25 May
ದೆಹಲಿ
ರೈಹಾನ್ ರಾಜೀವ್ ವಾದ್ರಾ ಮತದಾನ: ಹೇಳಿಕೆ
ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ರಾಜೀವ್ ವಾದ್ರಾ ಮತದಾನ ಬಳಿಕ ಮಾತನಾಡಿದರು. ಮತದಾನ ದೇಶದ ಬದಲಾಣೆಗೆ ಬಹಳ ಮುಖ್ಯವಾಗಿದೆ. ಇದು ಮುಖ್ಯವಾದ ಚುನಾವಣೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸಂವಿಧಾನವನ್ನು ಉಳಿಸಲು ಮತ್ತು ಧನಾತ್ಮಕತೆಯನ್ನು ತರುವ ರೀತಿಯಲ್ಲಿ ಮತ ಚಲಾಯಿಸಲು ನಾನು ಎಲ್ಲಾ ಯುವಕರನ್ನು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.
#WATCH | After casting vote, Raihan Rajiv Vadra, son of Robert Vadra and Congress leader Priyanka Gandhi Vadra says, "I think this is a very important election. I encourage all the youth to vote to save our Constitution and to vote in a way that brings positive change."
ಇಂದು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಯಾವೆಲ್ಲ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ ಎಂಬುದವರ ವಿವರ ಈ ಕಾರ್ಡ್ನಲ್ಲಿದೆ.
9:47 AM, 25 May
ದೆಹಲಿ
ಸ್ವಾತಿ ಮಲಿವಾಲ್ ಮತದಾನ, ಜಾಗೃತಿ
ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತದಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ಭಾಗವಹಿಸುವಂತೆ ಒತ್ತಾಯಿಸಿದರು. ಮತದಾನ ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. "ಭಾರತದಲ್ಲಿ, ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಅವರು ಪ್ರತಿಪಾದಿಸಿದರು.
#WATCH | Aam Aadmi Party Rajya Sabha MP Swati Maliwal says "It is a very big day for the democracy. I want to appeal to everyone, especially women to come out and cast their votes. In India, women's participation in politics is very important." pic.twitter.com/xZFpcbxquK
6ನೇ ಹಂತದ ಚುನಾವಣೆಗೆ ಮತದಾ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 10.82ರಷ್ಟು ಮತದಾನವಾಗಿದೆ. ಬಿಹಾರ- 9.66% ಹರಿಯಾಣ- 8.31% ಜಮ್ಮು ಮತ್ತು ಕಾಶ್ಮೀರ- 8.89% ಜಾರ್ಖಂಡ್- 11.74% ದೆಹಲಿ- 8.94% ಒಡಿಶಾ- 7.43% ಉತ್ತರ ಪ್ರದೇಶ-12.33 ಪಶ್ಚಿಮ ಬಂಗಾಳ- 16.54% ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
11:14 AM, 25 May
ದೆಹಲಿ
ದೆಹಲಿ ಸಿಎಂ ಕೇಜ್ರಿವಾಲ್ ಮತದಾನ
ನವದದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಕುಟುಂಬ ಸದಸ್ಯರೊಂದಿಗೆ ದೆಹಲಿಯ ಮತಗಟ್ಟೆಗೆ ಆಗಮಿಸಿ ಆರನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಸದ್ಯ ಇವರು ಅಬಕಾರಿ ನೀತಿ ಹಗರಣ, ಹಣ ವರ್ಗಾವಣೆ ಪ್ರಕರಕ್ಕೆ ಸಂಬಂಧಿಸಿದಂತೆ ಜೂನ್ 1ರವರೆಗೆ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಇಂದು ದೆಹಲಿ ಆರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಷ್ಟ್ರಪತಿ ಭವನದ ಸಂಕೀರ್ಣದಲ್ಲಿರುವ ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತದಾರರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ಮತದಾನ ಮಾಡಿದ ಹೆಮ್ಮೆಯ ಮತದಾರ ಎಂದು ಶಾಹಿ ಗುರುತಿನ ಬೆರೆಳು ಪ್ರದರ್ಶಿಸಿದರು.
11:54 AM, 25 May
ದೆಹಲಿ
ಅಮಾನತುಗೊಂಡಿರುವ ನೂಪುರ್ ಶರ್ಮಾ ಮತದಾನ
ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಇಂದು ದೆಹಲಿಯಲ್ಲಿ ಮತ ಚಲಾಯಿಸಿದರು. ಮೇ 2022 ರಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವು ಮೂಲಕ ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿದ್ದರು. ನಂತರ ಅವರನ್ನು ಪಕ್ಷದ ವಕ್ತಾರರ ಜವಾಬ್ದಾರಿಯಿಂದ ಬಿಜೆಪಿಯು ಜೂನ್ 2022 ರಲ್ಲಿ ಮಾನತುಗೊಳಿಸಿತ್ತು. ಇಂದು ಅವರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ.
ಬಿಹಾರದಲ್ಲಿ 8 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬಿಹಾರದಲ್ಲಿ ಆರನೇ ಹಂತದಲ್ಲಿ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯವರೆಗೆ ಬಿಹಾರದಲ್ಲಿ ಒಟ್ಟು ಶೇ.23.67ರಷ್ಟು ಮತದಾನವಾಗಿದೆ. ಗೋಪಾಲಗಂಜ್ ಕ್ಷೇತ್ರದಲ್ಲಿ 22.61% ಮತದಾನ, ವೈಶಾಲಿಯಲ್ಲಿ ಶೇ.27.98 % ಮತದಾನ, ಮಹಾರಾಜಗಂಜ್ 23.57% ಮತದಾನ, ಪಶ್ಚಿಮ ಚಂಪಾರಣ್ ಶೇ 23.84% ಮತದಾನ, ಪೂರ್ವ ಚಂಪಾರಣ್ ಶೇ.23.10ರಷ್ಟು ಮತದಾನ, ಸಿವಾನ್ 22.42%, ಶೆಯೋಹರ್ ನಲ್ಲಿ ಶೇ 25.77% ಹಾಗೂ ವಾಲ್ಮೀಕಿನಗರದಲ್ಲಿ ಬೆಳಗ್ಗೆ 11ರವರೆಗೆ ಶೇ.20.11 ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
12:08 PM, 25 May
ದೆಹಲಿ
ಕುಟುಂಬ ಸಮೇತರಾಗಿ ECI ಮುಖ್ಯಸ್ಥರಿಂದ ಮತದಾನ
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಂದು ದೆಹಲಿಯಲ್ಲಿ ಮತ ಚಲಾಯಿಸಿದರು. ಬಳಿಕ ಮತಗಟ್ಟೆಯ ಹೊರಗೆ ತಮ್ಮ ಶಾಯಿಯ ಬೆರಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು. ಇವರ ಉಸ್ತುವಾರಿಯಲ್ಲಿ ಭಾರತದ ಸಾರ್ವತ್ರಿಕ ಚುನಾವಣೆ 2024ರ 5 ಹಂತಗಳಲ್ಲಿ ಮತದಾನ ಯಶಸ್ವಿಯಾಗಿ ನಡೆದಿದೆ, ಇದೀಗ 6 ನೇ ಹಂತದ ಮತದಾನ ನಡೆಯುತ್ತಿದೆ.
CEC Rajiv Kumar votes with his family and proudly displays his inked finger outside a Polling Station in Delhi.
— Election Commission of India (@ECISVEEP) May 25, 2024
12:12 PM, 25 May
ಬಿಹಾರ
ಸರತಿ ಸಾಲಿನಲ್ಲಿ ನಿಂತು ಬಿಹಾರದ ಜನರಿಂದ ಮತದಾನ
ಬಿಹಾರದ ಶಿವಹರ್ ಕ್ಷೇತ್ರದಲ್ಲಿ ಲೋಕಸಭೆಯ ಆರನೇ ಹಂತದ ಮತದಾನದಲ್ಲಿ ಮತದಾರರಲ್ಲಿ ಅತ್ಯುತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು, ಮತ ಚಲಾಯಿಸಿದರು. ಎಲ್ಲರು ಒಟ್ಟಾಗಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿ ಆದರು.
शिवहर: लोकसभा के छठे चरण के मतदान में मतदाताओं में दिखा उत्साह। कोई भी वोट छूटे नहीं, आएं हम सब मिलकर वोट करें।
छठे चरण के लोकसभा निर्वाचन क्षेत्र- 1-वाल्मीकि नगर, 2-पश्चिमी चंपारण, 3-पूर्वी चंपारण, 4-शिवहर, 16-वैशाली, 17-गोपालगंज, 18-सिवान, 19-महाराजगंज pic.twitter.com/5so07xhkyD
— Chief Electoral Officer, Bihar (@CEOBihar) May 25, 2024
12:15 PM, 25 May
ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ಶೇ. 12.33 ಮತದಾನ
ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇಕಡಾ 12.33 ರಷ್ಟು ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಲಿದೆ. ಅಲಹಾಬಾದ್ನಲ್ಲಿ ಶೇ.9.37, ಅಂಬೇಡ್ಕರ್ ನಗರದಲ್ಲಿ ಶೇ.14.61, ಅಜಂಗಢದಲ್ಲಿ ಶೇ.14.17, ಬಸ್ತಿಯಲ್ಲಿ ಶೇ.14.26, ಭದೋಹಿಯಲ್ಲಿ ಶೇ.12.84, ಡೊಮರಿಯಾಗಂಜ್ನಲ್ಲಿ ಶೇ.13.38, ಜಾನ್ಪುರದಲ್ಲಿ ಶೇ.12.91ರಷ್ಟು ಮತದಾನವಾಗಿದೆ.
12:30 PM, 25 May
ಪಶ್ಚಿಮ ಬಂಗಾಳ
ಬಿಜೆಪಿ ಅಭ್ಯರ್ಥಿಗಳಿಗೆ ಗ್ರಾಮಸ್ಥರ 'ಗೋಬ್ಯಾಕ್' ಘೋಷಣೆ
ತಮ್ಲುಕ್ನ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಮತದಾನ ವೇಳೆ ತೀವ್ರ ಹಿನ್ನಡೆ ಆಯಿತು. ಮತದಾರರಲ್ಲಿ ಕೆಲವರು ಅಭಿಜಿತ್ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು. ಅದೇ ರೀತಿ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಿರಾನ್ ಚಟ್ಟೋಪಾಧ್ಯಾಯ ಅವರಿಗೆ ಕೇಶ್ಪುರ ಗ್ರಾಮಸ್ಥರಿಂದ ಮತದಾನಕ್ಕೆ ಅಡ್ಡಿಪಡಿಸಿದರು. ಇಲ್ಲಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ಮೇಲೆ ನಿಮ್ಮ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
12:38 PM, 25 May
ಪಶ್ಚಿಮ ಬಂಗಾಳ
58 ಕ್ಷೇತ್ರಗಳಲ್ಲಿ 11 ಗಂಟೆವರೆಗೆ 25.76% ಮತದಾನ
ಇಂದು ನಡೆಯುತ್ತಿರುವ ಲೋಕಸಭೆಯ ಆರನೇ ಹಂತದ ಚುನಾವಣೆಯಲ್ಲಿ ಎಲ್ಲ 58 ಸ್ಥಾನಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇಕಡಾ 25.76ರಷ್ಟು ಮತದಾನ ಆಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ 36.88%, ಯುಪಿಯಲ್ಲಿ 27.06% ದಾಖಲಾಗಿದೆ. ದೆಹಲಿಯಲ್ಲಿ 21.69% ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ರಜೌರಿ ಕ್ಷೇತ್ರದಲ್ಲಿ 23.1% ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಹೆಚ್ಚು ಮತದಾನ ಆಗಿದೆ ಎಂದು ಚುನಾವಣಾ ಸಮಿತಿ ತಿಳಿಸಿದೆ.
Lok Sabha Election 2024 Phase 6 Voting LIVE News in Kannada, Check Out the Latest News Updates in Kannada on The sixth phase of voting for the Lok Sabha election will be held on May 25 in 58 constituencies spread across eight states and Union territories. total candidate 889 contest in 6th phase election of lok sabha 2024,