ವೈರಲ್ ವೀಡಿಯೊ: ಸೇತುವೆ ಮೇಲೆ ಏರ್ಲೀಕ್ ಸಮಸ್ಯೆ ಸರಿಪಡಿಸಿದ ಲೋಕೋಪೈಟ್
ನವದೆಹಲಿ ಜೂ.20: ಸೇತುವೆ ಮೇಲೆ ನಿಲ್ಲಿಸಿದ್ದ ರೈಲಿನ ಕೆಳಗೆ ಲೊಕೋ ಪೈಲಟ್ ಅಧಿಕಾರಿ ತೆವಳುತ್ತಾ ಸಾಗಿ ರೈಲಿನ ಏರ್ ಲೀಕ್ ಸಮಸ್ಯೆಯನ್ನು ಸರಿಪಡಿಸಿದ ಸಾಹಸದ ವಿಡಿಯೋ ಕೇಂದ್ರ ರೈಲ್ವೆ ಸಚಿವಾಲಯವು ಕೂ ಮೂಲಕ ಹಂಚಿಕೊಂಡಿದೆ.
ಗಾಳಿ ಸೋರುವಿಕೆ ಸಮಸ್ಯೆಯಿಂದ ರೈಲೊಂದು ಸೇತುವೆಯ ಮೇಲೆ ನಿಂತಿದೆ. ಈ ವೇಳೆ ಲೊಕೋ ಪೈಲಟ್ ಆಗಿರುವ ಗಣೇಶ್ ಘೋಷ್ ಎಂಬುವವರು ಈ ಸಾಹಸ ಮಾಡಿರುವುದಾಗಿ ಗೊತ್ತಾಗಿದೆ. ಗಣೇಶ ಅವರು ರೈಲಿನ ಕೆಳಗೆ ಸಮಸ್ಯೆ ಉಂಟಾದ ಭಾಗದ ವರೆಗೂ ಧೈರ್ಯದಿಂದ ತೆವಳುತ್ತಾ ಸಾಗಿದ್ದಾರೆ. ರೈಲ್ವೆ ಸಚಿವಾಲಯ ಹಂಚಿಕೊಂಡ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Koo Appयात्रियों की सेवा और सुरक्षा में समर्पित। Railsevaks are committed to serve its passengers 24x7. An exemplary display of courage by Ganesh Ghosh, ALP who crawled under the coaches of halted train on a bridge & rectified air leakage issue that helped resume the journey. - Ministry of Railways (@RailMinIndia) 20 June 2022
ರೈಲು ಕೆಟ್ಟು ನಿಂತಾಗ ಗಣೇಶ ಘೋಷ್ ಹಾಗೂ ಸಿಬ್ಬಂದಿ ತೋರಿದ ಧೈರ್ಯ ಇರರಿಗೂ ಮಾದರಿಯಾಗಿದೆ. ರೈಲು ಪುನಾರಂಭಕ್ಕಾಗಿ ಗಣೇಶ್ ಘೋಷ್ ಸಾಹಸ ಮೆರೆದಿದ್ದಾರೆ. ಇದು ಪ್ರಯಾಣಿಕರ ಸೇವೆಗಾಗಿ ರೈಲ್ವೆ ಸಿಬ್ಬಂದಿ ವಾರದ 24ಗಂಟೆಯು ಸೇವೆ ನೀಡಲು ಬದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಸಚಿವಾಲಯ ಟ್ವಿಟ್ ಮೂಲಕ ತಿಳಿಸಿದೆ.

ವಿವಿಧ ಸಾಹಸದ ವಿಡಿಯೋ ಹಂಚಿಕೊಂಡ ಸಚಿವಾಲಯ
ಇತ್ತೀಚೆಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ವೃದ್ಧೆಯೊಬ್ಬರನ್ನು ಸಮೀಪದಲ್ಲೇ ಇದ್ದ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಿಸಿದ್ದರು. ಸದಾ ಕಾರ್ಯ ಪರಿಪಾಲನೆಯಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದರು. ಅಲ್ಲದೇ ಉತ್ತರ ಪ್ರದೇಶದಲ್ಲಿ ವಿಶೇಷ ಚೇತನ ಯುವಕನನ್ನು ಅಲ್ಲಿನ ಅಧಿಕಾರಿಯೊಬ್ಬರು ರಕ್ಷಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಅಂತಹದ್ದೆ ಘಟನೆ ನಡೆದಿದೆ ಎಂದು ಲೊಕೋ ಪೈಲಟ್ ಗಣೇಶ ಘೋಷ್ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications