ವೈರಲ್ ವೀಡಿಯೊ: ಸೇತುವೆ ಮೇಲೆ ಏರ್ಲೀಕ್ ಸಮಸ್ಯೆ ಸರಿಪಡಿಸಿದ ಲೋಕೋಪೈಟ್
ನವದೆಹಲಿ ಜೂ.20: ಸೇತುವೆ ಮೇಲೆ ನಿಲ್ಲಿಸಿದ್ದ ರೈಲಿನ ಕೆಳಗೆ ಲೊಕೋ ಪೈಲಟ್ ಅಧಿಕಾರಿ ತೆವಳುತ್ತಾ ಸಾಗಿ ರೈಲಿನ ಏರ್ ಲೀಕ್ ಸಮಸ್ಯೆಯನ್ನು ಸರಿಪಡಿಸಿದ ಸಾಹಸದ ವಿಡಿಯೋ ಕೇಂದ್ರ ರೈಲ್ವೆ ಸಚಿವಾಲಯವು ಕೂ ಮೂಲಕ ಹಂಚಿಕೊಂಡಿದೆ.
ಗಾಳಿ ಸೋರುವಿಕೆ ಸಮಸ್ಯೆಯಿಂದ ರೈಲೊಂದು ಸೇತುವೆಯ ಮೇಲೆ ನಿಂತಿದೆ. ಈ ವೇಳೆ ಲೊಕೋ ಪೈಲಟ್ ಆಗಿರುವ ಗಣೇಶ್ ಘೋಷ್ ಎಂಬುವವರು ಈ ಸಾಹಸ ಮಾಡಿರುವುದಾಗಿ ಗೊತ್ತಾಗಿದೆ. ಗಣೇಶ ಅವರು ರೈಲಿನ ಕೆಳಗೆ ಸಮಸ್ಯೆ ಉಂಟಾದ ಭಾಗದ ವರೆಗೂ ಧೈರ್ಯದಿಂದ ತೆವಳುತ್ತಾ ಸಾಗಿದ್ದಾರೆ. ರೈಲ್ವೆ ಸಚಿವಾಲಯ ಹಂಚಿಕೊಂಡ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Koo Appयात्रियों की सेवा और सुरक्षा में समर्पित। Railsevaks are committed to serve its passengers 24x7. An exemplary display of courage by Ganesh Ghosh, ALP who crawled under the coaches of halted train on a bridge & rectified air leakage issue that helped resume the journey. - Ministry of Railways (@RailMinIndia) 20 June 2022
ರೈಲು ಕೆಟ್ಟು ನಿಂತಾಗ ಗಣೇಶ ಘೋಷ್ ಹಾಗೂ ಸಿಬ್ಬಂದಿ ತೋರಿದ ಧೈರ್ಯ ಇರರಿಗೂ ಮಾದರಿಯಾಗಿದೆ. ರೈಲು ಪುನಾರಂಭಕ್ಕಾಗಿ ಗಣೇಶ್ ಘೋಷ್ ಸಾಹಸ ಮೆರೆದಿದ್ದಾರೆ. ಇದು ಪ್ರಯಾಣಿಕರ ಸೇವೆಗಾಗಿ ರೈಲ್ವೆ ಸಿಬ್ಬಂದಿ ವಾರದ 24ಗಂಟೆಯು ಸೇವೆ ನೀಡಲು ಬದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಸಚಿವಾಲಯ ಟ್ವಿಟ್ ಮೂಲಕ ತಿಳಿಸಿದೆ.

ವಿವಿಧ ಸಾಹಸದ ವಿಡಿಯೋ ಹಂಚಿಕೊಂಡ ಸಚಿವಾಲಯ
ಇತ್ತೀಚೆಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ವೃದ್ಧೆಯೊಬ್ಬರನ್ನು ಸಮೀಪದಲ್ಲೇ ಇದ್ದ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಿಸಿದ್ದರು. ಸದಾ ಕಾರ್ಯ ಪರಿಪಾಲನೆಯಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದರು. ಅಲ್ಲದೇ ಉತ್ತರ ಪ್ರದೇಶದಲ್ಲಿ ವಿಶೇಷ ಚೇತನ ಯುವಕನನ್ನು ಅಲ್ಲಿನ ಅಧಿಕಾರಿಯೊಬ್ಬರು ರಕ್ಷಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಅಂತಹದ್ದೆ ಘಟನೆ ನಡೆದಿದೆ ಎಂದು ಲೊಕೋ ಪೈಲಟ್ ಗಣೇಶ ಘೋಷ್ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications