ನವದೆಹಲಿ, ಆಗಸ್ಟ್ 17: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ(25, ಡಿಸೆಂಬರ್ 1924- 16, ಆಗಸ್ಟ್ 2018) ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಆಗಸ್ಟ್ 16 ರಂದು ಸಂಜೆ 5.05 ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅಜಾತ ಶತ್ರು ಅಟಲ್ ಜೀ ಅವರ ಅಗಲಿಕೆಗೆ ಇಡೀ ದೇಶವೂ ಮರುಗಿದೆ.
ದೇಶಕಂಡ ಧೀಮಂತ ನಾಯಕರಲ್ಲೊಬ್ಬರಾದ ಅಟಲ್ ಜೀ ಅವರ ನಿಧನದ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರತ ಸರ್ಕಾರ 7 ದಿನಗಳ ಕಾಲ ಶೋಕಾಚರಣೆ ಮಾಡಲಿದೆ.
ಇಂದು ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದು,, ಈಗಾಗಲೇ ದೇಶದ ಹಲವು ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ವಾಜಪೇಯಿ ಅವರ ಅಂತಿಮ ಯಾತ್ರೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.
Aug 17, 2018, 5:05 pm IST
ಪ್ರೀತಿಯ ತಾತನ ನೆನೆದು ಕಣ್ಣೀರು ಹಾಕಿದ ಮೊಮ್ಮಗಳು ನಿಹಾರಿಕಾ
Aug 17, 2018, 5:00 pm IST
ತಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ದತ್ತುಪುತ್ರಿ ನಮಿತಾ
Aug 17, 2018, 4:51 pm IST
ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ. ಪುರೋಹಿತರು, ಬಂಧುಗಳಿಂದ ಸಿದ್ಧತೆ
Aug 17, 2018, 4:46 pm IST
ಬ್ರಾಹ್ಮಣ ಸಂಪ್ರದಾಯದಂತೆ ನಡೆಯುತ್ತಿರುವ ಅಂತ್ಯಸಂಸ್ಕಾರ.
Aug 17, 2018, 4:44 pm IST
ಕೆಲವೇ ಕ್ಷಣಗಳಲ್ಲಿ ಪಂಚಭೂತಗಳಲ್ಲಿ ಲೀನವಾಗಲಿರುವ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ
Aug 17, 2018, 4:31 pm IST
ಪಾರ್ಥಿವ ಶರೀರಕ್ಕೆ ಹೊದೆಸಿದ್ದ ನ ತ್ರಿವರ್ಣ ಧ್ವಜವನ್ನು ಪಡೆದ ವಾಜಪೇಯಿ ಅವರ ಪ್ರೀತಿಯ ಮೊಮ್ಮಗಳು ನಿಹಾರಿಕಾ.
Aug 17, 2018, 4:27 pm IST
ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಅವರಿಂದ ಅಂತಿಮ ನಮನ
Aug 17, 2018, 4:27 pm IST
ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಅವರಿಂದ ಅಂತಿಮ ನಮನ
Aug 17, 2018, 4:26 pm IST
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಅಂತಿಮ ನಮನ
Aug 17, 2018, 4:25 pm IST
ನೆಚ್ಚಿನ ಗೆಳೆಯನಿಗೆ ಎಲ್ ಕೆ ಅಡ್ವಾಣಿ ಅವರಿಂದ ಅಂತಿಮ ನಮನ
Aug 17, 2018, 4:23 pm IST
ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ನಮನಕ್ಕೆಂದು ಬಂದ ವಿದೇಶಿ ಗಣ್ಯರಿಂದ ಅಂತಿಮ ನಮನ ಸಲ್ಲಿಕೆ
Aug 17, 2018, 4:19 pm IST
ಶವಪೆಟ್ಟಿಗೆಯಿಂದ ಧ್ವಜವನ್ನು ಬೇರ್ಪಡಿಸುತ್ತಿರುವ ಸೇನಾ ಸಿಬ್ಬಂದಿ.
Aug 17, 2018, 4:16 pm IST
ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಸೇನೆ.
Aug 17, 2018, 4:12 pm IST
ಸ್ಮೃತಿ ಸ್ಥಳಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ . ಕೋವಿಂದ್ ಅವರಿಂದ ಅಂತಿಮ ನಮನ.
Aug 17, 2018, 4:08 pm IST
ಅಂತ್ಯ ಸಂಸ್ಕಾರಕ್ಕಾಗಿ ಆಗಮಿಸಿದ ವಿದೇಶಿ ನಾಯಕರನ್ನು ಕರೆತಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Aug 17, 2018, 4:05 pm IST
ತಲೆಬಾಗಿ ನಮಸ್ಕರಿಸಿ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
Aug 17, 2018, 4:03 pm IST
ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್
Aug 17, 2018, 4:02 pm IST
ಶ್ರದ್ಧಾಂಜಲಿ ಅರ್ಪಿಸಿದ ಭಾರತೀಯ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್
Aug 17, 2018, 4:00 pm IST
ವಾಯು, ನೌಕಾ, ಭೂಸೇನೆ ಮುಖ್ಯಸ್ಥರಿಂದ ಮಾಜಿ ಪ್ರಧಾನಿಗಳಿಗೆ ಗೌರವ
Army Chief General Bipin Rawat, Navy Chief Admiral Sunil Lanba & Air Chief Marshal Birender Singh Dhanoa, pay last tribute to former PM #AtalBihariVajpayee at Smriti Sthal in Delhi pic.twitter.com/oDq4kzHl4V
ಮಧ್ಯಾಹ್ನ 3 ಗಂಟೆಯ ಬಳಿಕ ಬಿಜೆಪು ಕೇಂದ್ರ ಕಚೇರಿಯಿಂದ ವಿಜಯ್ ಘಾಟ್ ತನಕ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ.
9:03 AM, 17 Aug
ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, 1.5 ಎಕರೆ ಜಾಗದಲ್ಲಿ ವಾಜಪೇಯಿ ಅವರ ಸ್ಮಾರಕ ನಿರ್ಮಾಣವಾಗಲಿದೆ.
9:27 AM, 17 Aug
ವಾಜಪೇಯಿ ಅವರ ನಿವಾಸದಲ್ಲೇ ಇರುವ ಪ್ರಧಾನಿ ನರೇಂದ್ರ ಮೋದಿ ಮುಂತಾದ ಗಣ್ಯರು
9:48 AM, 17 Aug
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಾಜಪೇಯಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
9:54 AM, 17 Aug
ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ. ಇನ್ನು ಕೆಲವೇ ಕ್ಷಣಗಳಲ್ಲಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತದೆ.
10:16 AM, 17 Aug
ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಕೇಂದ್ರ ಕಚೇರಿಯತ್ತ ಕೊಂಡೊಯ್ಯಲಾಗುತ್ತಿದ್ದು, ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
10:24 AM, 17 Aug
ವಾಜಪೇಯಿ ಅವರ ನಿವಾಸದ ಸುತ್ತ, ಬಿಜೆಪಿ ಕೇಂದ್ರ ಕಚೇರಿಯ ಸುತ್ತ ಎಲ್ಲೆಲ್ಲೂ ಕೇಳಿ ಬರುತ್ತಿರುವ ಅಟಲ್ ಅಮರ್ ರಹೇ, ವಂದೇ ಮಾತರಂ ಘೋಷಣೆ ಗಳು
10:45 AM, 17 Aug
ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನಕ್ಕೆಂದು ಕಿಕ್ಕಿರಿದ ಜನಸಾಗರ, ದೆಹಲಿಯಲ್ಲಿ ಬಿಗಿ ಭದ್ರತೆ.
11:06 AM, 17 Aug
ಬಿಜೆಪಿ ಕೇಂದ್ರ ಕಚೇರಿ ಮುಂದೆ ವಾಜಪೇಯಿ ಅವರ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿರುವ ಪ್ರಧಾನಿ ಮೋದಿ, ಬಿಜೆಪಿ ಮುಖಂಡ ಅಮಿತ್ ಶಾ, ಗೃಹಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
11:33 AM, 17 Aug
ಬಿಜೆಪಿ ಕೇಂದ್ರ ಕಚೇರಿಯಲ್ಲಿರಿಸಲಾದ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಮಿತ್, ಶಾ, ಮೋದಿ, ರಾಜನಾಥ್ ಸಿಂಗ್ ನಮನ ಸಲ್ಲಿಸಿದರು.
ಡಿಎಂಕೆ ಮುಖಂಡ ಎ ರಾಜಾ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನ್ವಾಲ್ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬೈರೆನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
11:45 AM, 17 Aug
ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದದ ಭೂತಾನ್ ರಾಜ ಜಿಗ್ಮೆ ಖೆಸರ್ ನಮ್ಗ್ಯೇಲ್ ವಾಂಗ್ಚಕ್
11:54 AM, 17 Aug
ದೆಹಲಿಗೆ ತೆರಳಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
12:02 PM, 17 Aug
ವಾಜಪೇಯಿ ಅವರಿಗೆ ಪಾಕಿಸ್ತಾನದ ಕಾನೂನು ಸಚಿವರ ನಿಯೋಗದಿಂದ ಶ್ರದ್ಧಾಂಜಲಿ
12:29 PM, 17 Aug
ವಾಜಪೇಯಿ ಅವರ ಅಂತಿಮ ದರ್ಶನಕ್ಕೆಂದು ದೆಹಲಿಗೆ ಬಂದ ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬುಲ್ ಹಾಸನ್ ಮಹ್ಮೂದ್ ಅಲಿ
12:38 PM, 17 Aug
"ನಾನು ವಾಜಪೇಯಿ ಅವರನ್ನು 2006 ರಲ್ಲಿ ಒಮ್ಮೆ ಭೇಟಿಯಾಗಿದ್ದೆ. ಅವರೊಬ್ಬ ಅತ್ಯುತ್ತಮ ಕವಿ. ಅವರ ಸ್ಥಾನವನ್ನು ಭಾರತೀಯ ರಾಜಕಾರಣದಲ್ಲಿ ಯಾರೂ ತುಂಬುವುದಕ್ಕೆ ಸಾಧ್ಯವಿಲ್ಲ. ಅವರು ಪ್ರತಿಯೊಬ್ಬರಿಗೂ ಆದರ್ಶ ಮತ್ತು ಅವರ ಕವನಗಳಿಂದ ಎಷ್ಟೋ ಜನರಿಗೆ ಸ್ಫೂರ್ತಿ ತುಂಬಿದವರು." ಮಧುರ್ ಬಂಡಾರ್ಕರ್, ಚಿತ್ರ ನಿರ್ಮಾಪಕ
1:01 PM, 17 Aug
ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಮಾನವೀಯತೆ ಸುಕ್ಕಾಗದಂತೆ ನೋಡಿಕೊಂಡವರು ಅಟಲ್ ಬಿಹಾರಿ ವಾಜಪೇಯಿ. ಅದು ಅವರ ವೈಶಿಷ್ಟ್ಯ. ಅಂಥ ಸಿದ್ಧಾಂತಗಳು ದೇಶಕ್ಕೆ ಈಗ ಅಗತ್ಯವಿದೆ: ಸೀತಾರಾಮ್ ಯಚೂರಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ
1:14 PM, 17 Aug
ವಾಜಪೇಯಿ ಅವರ ಅಂತಿಮ ದರ್ಶನಕ್ಕೆಂದು ಬಂದ ಹರ್ಯಾಣದ ಆಮಾಜಿಕ ಕಾರ್ಯಕರ್ತ, ಮಾಜಿ ರಾಜಕಾರಣಿ ಮೇಲೆ ಹಲ್ಲೆ ನಡೆದ ಘಟನೆಯೂ ವರದಿಯಾಗಿದೆ.
1:16 PM, 17 Aug
ಅಂತಿಮ ನಮನ ಸಲ್ಲಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.
#Delhi: Delhi Chief Minister Arvind Kejriwal, Deputy CM Manish Sisodia and AAP MP Sanjay Singh pay last respects to former Prime Minister #AtalBihariVajpayee at BJP Headquarters. pic.twitter.com/6YWiFEUIMv
"ಆರು ವರ್ಷಗಳ ಕಾಲ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಪ್ರಧಾನಿಯಾಗಿದ್ದರೂ ಬಹಳ ಸರಳ ವ್ಯಕ್ತಿ. ಪ್ರತಿಯೊಬ್ಬರನ್ನೂ ಅವರು ಗೌರವದಿಂದಲೇ ಕಾಣುತ್ತಿದ್ದರು. 'ನಾನು ಕಾಶ್ಮೀರದ ಸಮಸ್ಯೆಯನ್ನು ಮಾನವೀಯತೆಯಿಂದ ಬಗೆಹರಿಸುತ್ತೇನೆ, ಸಂವಿಧಾನದ ಮೂಲಕವಲ್ಲ' ಎಂದು ಅವರೊಮ್ಮೆ ಹೇಳಿದ್ದರು. ಈ ಮಾತಿನಿಂದಲೇ ಸಹಸ್ರಾರು ಕಾಶ್ಮೀರಿಗಳ ಹೃದಯ ಗೆದ್ದಿದ್ದರು"- ಸುಧೀಂದ್ರ ಕುಲಕರ್ಣಿ, ಚಿಂತಕ
1:43 PM, 17 Aug
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸುತ್ತಿರುವ ಬಿಜೆಪಿ ನಾಯಕರು
One of India's tallest leaders, Bharat Ratna Atal Bihari Vajpayee passed away on Thursday, August 16 at 5.05 pm. As the entire nation plunged into sorrow over the passing away of the former prime minister, the government announced a 7 day mourning from August 16 to 22. Here are LIVE updates