ಆಧಾರ್-ಆಸ್ತಿ ಜೋಡಣೆ ಸುದ್ದಿ ನಕಲಿ ಎಂದ ಕೇಂದ್ರ ಸರಕಾರ
ಭೂ ದಾಖಲೆಗಳನ್ನು ಆಧಾರ್ ಗೆ ಜೋಡಣೆ ಹಾಗೂ ಡಿಜಿಟಲೈಸ್ ಮಾಡಬೇಕು ಎಂಬ ಸುದ್ದಿಯೊಂದು ವಿಪರೀತ ಚರ್ಚೆಗೆ ಬಂತು. ಅದು ಸುಳ್ಳು ಸುದ್ದಿ ಎಂದು ಸರಕಾರ ಹೇಳಿದೆ. ಭಾರತ ಸರಕಾರದ ಮುಖ್ಯ ವಕ್ತಾರ ಫ್ರಾಂಕ್ ನರೋನ್ಹಾ ಈ ಬಗ್ಗೆ ಮಾತನಾಡಿದ್ದು, ಈಗ ಹರಿದಾಡುತ್ತಿರುವ ಪತ್ರ ನಕಲಿ, ಯಾರೋ ತುಂಟತನದಿಂದ ಸೃಷ್ಟಿ ಮಾಡಿರುವುದು ಎಂದಿದ್ದಾರೆ.
ಈ ಹಿಂದೆ ಇದೇ ಪತ್ರದ ವಿಚಾರವಾಗಿ ಆದ ಸುದ್ದಿ ಕೂಡ ಇಲ್ಲಿ ಪ್ರಕಟಿಸಲಾಗಿದೆ.
******
ನವದೆಹಲಿ, ಜೂನ್ 19: ಮಾಲೀಕರ ಭೂ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡುವ ಚಿಂತನೆ ನಡೆಸಿದೆ ಕೇಂದ್ರ ಸರಕಾರ. 1950ರಿಂದ ಇಲ್ಲಿವರೆಗಿನ ಎಲ್ಲ ಭೂ ದಾಖಲೆಗಳನ್ನು ಮಾಲೀಕರು ಆಧಾರ್ ಜತೆಗೆ ಜೋಡಣೆ ಮಾಡಬೇಕಾಗುತ್ತದೆ.
1950ರಿಂದ ಇಲ್ಲಿವರೆಗಿನ ಎಲ್ಲ ಭೂ ದಾಖಲೆಗಳನ್ನು ಡಿಜಿಟಲೈಸ್ ಮಾಡುವಂತೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ಡಿಜಿಟಲೈಸ್ ಆದ ಭೂ ದಾಖಲೆಯ ಜತೆಗೆ ಯಾರಾದರೂ ಆಧಾರ್ ಜೋಡಣೆ ಮಾಡಲಿಲ್ಲ ಅಂದರೆ ಅಂಥವರ ವಿರುದ್ಧ ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಜೂನ್ ಹದಿನೈದರಂದು ಎಲ್ಲ ರಾಜ್ಯ- ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ಕಾರ್ಯದರ್ಶಿಗಳಿಗೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್, ನೀತಿ ಆಯೋಗದ ಕಾರ್ಯದರ್ಶಿಗೆ ಈ ಬಗ್ಗೆ ಕೇಂದ್ರದಿಂದ ನಿರ್ದೇಶನ ಬಂದಿದೆ. ಎಲ್ಲ ಆಸ್ತ್ತಿಗಳ ಡಿಜಿಟಲೈಸ್ ಆಗುವುದರ ಜತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಆಗಿದೆಯೇ ಎಂದು ಖಾತ್ರಿ ಪಡಿಸಲು ಸೂಚನೆ ಬಂದಿದೆ.
ಎಲ್ಲ ಭೂ ದಾಖಲೆ, ಮ್ಯುಟೇಶನ್, ಮಾರಾಟ ಹಾಗೂ ಖರೀದಿಯ ದಾಖಲೆಗಳು...ಒಟ್ಟಾರೆ 1950ರಿಂದ ಈಚೆಗೆ ಇಲ್ಲಿವರೆಗಿನ ಎಲ್ಲ ಸ್ಥಿರಾಸ್ತಿಗಳು ಅಂದರೆ ಕೃಷಿಭೂಮಿ, ಮನೆ ಇತ್ಯಾದಿ ದಾಖಲೆಗಳನ್ನು ಈ ವರ್ಷದ ಆಗಸ್ಟ್ ಹದಿನಾಲ್ಕರೊಳಗೆ ಆಧಾರ್ ಗೆ ಜೋಡಿಸುವಂತೆ ಗಡುವು ನೀಡಲಾಗಿದೆ.
ಯಾರಾದರೂ ಆಧಾರ್ ಜೋಡಣೆ ಮಾಡಲಿಲ್ಲ ಅಂದರೆ ಅಂಥವರ ವಿರುದ್ಧ ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಈ ಬಗ್ಗೆ ರಾಜ್ಯ ಸರಕಾರದಿಂದ ಸಲಹೆಗಳಿದ್ದಲ್ಲಿ ನೀಡುವಂತೆ ಕೂಡ ತಿಳಿಸಲಾಗಿದೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು












Click it and Unblock the Notifications